HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

         ಚೇವಾರು ಪಟ್ಲ ಭಜನಾ ಮಂದಿರ ವಾಷರ್ಿಕೋತ್ಸವ, ಅಯ್ಯಪ್ಪದೀಪೋತ್ಸವ
    ಕುಂಬಳೆ: ಚೇವಾರು ಪಟ್ಲ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾಷರ್ಿಕೋತ್ಸವ ಹಾಗೂ ಶ್ರೀ ಅಯ್ಯಪ್ಪ ದೀಪೋತ್ಸವವು ದ್ವಿದಿನಗಳ ಕಾಲ ವಿವಿಧ ಧಾಮರ್ಿಕ ,ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು.
   ವಾಷರ್ಿಕೋತ್ಸವದಂಗವಾಗಿ ಪ್ರಥಮ ದಿನದಂದು ಬೆಳ್ಳಗ್ಗೆ ಶ್ರೀ ಗಣಪತಿಹವನ , ಶ್ರೀ ಸತ್ಯನಾರಾಯಣ ಪೂಜೆ,ಮಧ್ಯಾಹ್ನ  ಮಹಾಪೂಜೆ ಮಂಗಳಾರತಿ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.ಸಂಜೆ ಭಜನೆ ಸಂಕೀರ್ತನೆಯ ಬಳಿಕ ರಾತ್ರಿ ಮಹಾಮಂಗಳಾರತಿ , ಪ್ರಸಾದ ವಿತರಣೆ ನಡೆಯಿತು.ರಾತ್ರಿ ಬಾಲ ಕಲಾವಿದರಿಂದ ಯಕ್ಷಕಲಾ ಕೇಂದ್ರ ಪೊನ್ನೆತ್ತೋಡು ಕಯ್ಯಾರು ಇವರಿಂದ ಶ್ರೀ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ ಜರಗಿತು.
   ಶ್ರೀ ಅಯ್ಯಪ್ಪದೀಪೋತ್ಸವ ದೀಪೋತ್ಸವದಂಗವಾಗಿ ದ್ವಿತೀಯ ದಿನದಂದು ಬೆಳಗ್ಗೆ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ನಡೆಯಿತು. ಕಾರ್ಯಕ್ರಮದಂಗವಾಗಿ ನಡೆದ ಧಾಮರ್ಿಕ ಸಬೆಯ ಅಧ್ಯಕ್ಷತೆಯನ್ನು ಪೈವಳಿಕೆ ಗ್ರಾಮ ಪಂಚಾಯತು ಸದಸ್ಯ ಹರೀಶ್ ಬೊಟ್ಟಾರಿ ವಹಿಸಿದರು.ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ವೇ.ಮೂ. ಪಳ್ಳತ್ತಡ್ಕ ಪರಮೇಶ್ವರ ಭಟ್ ಧಾಮರ್ಿಕ ಉಪಾನ್ಯಾಸ ನೀಡಿದರು. ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚೇತನಾ ಎಂ,ಮೇಲ್ವಿಚಾರಕ ವಿಶ್ವನಾಥ್,ದಾನಿ ಮಹಾಬಲೇಶ್ವರ ಭಟ್ ಎಡಕ್ಕಾನ,ಸಾಧನಾ ಎಂ.ಭಟ್,ಮಂಜೇಶ್ವರ ಬ್ಲಾಕ್ ಪಂಚಾಯತು ಸದಸ್ಯ ಪ್ರಸಾದ್ ರೈ ಕಯ್ಯಾರ್,ಪೈವಳಿಕೆ ಗ್ರಾ.ಪಂ.ವಿಶೇಷ ಅಧಿಕಾರಿ ಶಂಕರ ಕೆ, ನಿವೃತ್ತ ಕಂದಾಯ ಅಧಿಕಾರಿ ಬಿ.ಎಸ್.ಅಪ್ಪು ಪಾಟಾಳಿ ಅತಿಥಿಗಳಾಗಿ ಭಾಗವಹಿಸಿದರು.
  ಸಮಾರಂಭದಲ್ಲಿ ವೇ.ಮೂ. ಪಳ್ಳತ್ತಡ್ಕ ಪರಮೇಶ್ವರ ಭಟ್,ಹರೀಶ್ ಬೊಟ್ಟಾರಿ,ರಘು ಕಲ್ಕಾರ್ ಮಾಣಿ, ಶಂಕರ್ ಕೆ ಅವರನ್ನು ಸಮ್ಮಾನಿಸಲಾಯಿತು.ಕೆ.ನಾರಾಯಣ ಭಟ್ ಕಬೆಕ್ಕೋಡು ಸ್ವಾಗತಿಸಿ, ರವಿಚಂದ್ರ ಚೇವಾರು ವಂದಿಸಿದರು.ಯು.ಎಂ.ಗೋಪಾಲಕೃಷ್ಣ ಭಟ್ ನಿರೂಪಿಸಿದರು.
ಸಮಾರಂಭದ ಬಳಿಕ ಮಧ್ಯಾಹ್ನ ಮಹಾಮಂಗಳಾರತಿ ,ಪ್ರಸಾದ ವಿತರಣೆ,  ಬಳಿಕ ಅನ್ನ ಸಂತರ್ಪಣೆ ನಡೆಯಿತು.ಅಪರಾಹ್ನ ಮಹಿಳಾ ಯಕ್ಷ ಕೂಟ ಪೊನ್ನೆತ್ತೋಡು ಕಯ್ಯಾರು ತಂಡದಿಂದ ಸೀತಾಪಹಾರಣ ಜಟಾಯುಮೋಕ್ಷ ಯಕ್ಷಗಾನ ತಾಳ ಮದ್ದಳೆ ಜರಗಿತು.
   ಸಂಜೆ ಕನಕಪ್ಪಾಡಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ತಾಲೀಮು ,ವಾದ್ಯ ಘೋಷ ,ಚೆಂಡಮೇಳಗಳೊಂದಿಗೆ ಭಕ್ತರ ಆಕರ್ಷಕ ಪಾಲಕೊಂಬು ಮೆರವಣಿಗೆ ನಡೆಯಿತು,ರಾತ್ರಿ ವಾಮದೇವ ಪುಣಿಚಿತ್ತಾಯ ಮತ್ತು ಬಳಗದಿಂದ ಹರಿಕಥೆ ,ಶ್ರೀಭಗವತಿಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ಬಂದ್ಯೋಡು ಬಳಗದಿಂದ ತಾಲೀಮು ಪ್ರದರ್ಶನ , ಕಯ್ಯಾರು ಪರಂಬಳ ತತ್ವಮಸಿ ಚೆಂಡೆ ಮೇಳದಿಂದ ಸಿಂಗಾರಿ ಮೇಳ ನಡೆಯಿತು,ರಾತ್ರಿ ದೀಪಾರಾಧನೆ ತಾಯಂಬಕ, ಅಯ್ಯಪ್ಪ ಗೀತೆ, ಹಣತೆ ದೀಪ ಮೆರವಣಿಗೆ ಅಗ್ನಿಪೂಜೆಯ ಬಳಿಕ ಪ್ರಾತ :ಕಾಲ ಅಯ್ಯಪ್ಪ ಮತ್ತು ವಾವರಯುದ್ಧದ ಬಳಿಕ ಶ್ರೀ ಅಯ್ಯಪ್ಪ ವಿಳಕ್ನೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
 

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries