HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

               ಎನ್ಎಸ್ಎಸ್ನಿಂದ ಕಾಲನಿಗೆ ರಸ್ತೆ 
   ಮುಳ್ಳೇರಿಯ: ಕಾಸರಗೋಡು ಸರಕಾರಿ ಕಾಲೇಜು ಎನ್ಎಸ್ಎಸ್ ಘಟಕ ಎಡಪರಂಬ ಜಿಎಲ್ಪಿ ಶಾಲೆಯಲ್ಲಿ ನಡೆಸುತ್ತಿರುವ ಮೂರರು ದಿನಗಳ ಶಿಬಿರದ ಅಂಗವಾಗಿ ಎಡಪರಂಬ ಪರಿಶಿಷ್ಟ ವರ್ಗ ಕಾಲನಿಗೆ ನೂತನ ರಸ್ತೆ ನಿಮರ್ಿಸಿ ಕೊಡುವ ಕಾಮಗಾರಿಗೆ ಚಾಲನೆ ನೀಡಲಾಯಿತು.
    ಕಾರ್ಯಕ್ರಮವನ್ನು ಕಾರಡ್ಕ ಬ್ಲಾಕ್ ಪಂಚಾಯತು ಉಪಾಧ್ಯಕ್ಷ ಸಿ.ಕೆ ಕುಮಾರನ್ ಉದ್ಘಾಟಿಸಿ ನೂತನ ರಸ್ತೆಯಿಂದ ಈ ಪ್ರಸ್ತುತ ಕಾಲನಿಯ ದೀರ್ಘ ಕಾಲದ ಕನಸು ಈಡೇರಲಿದೆ ಎಂದು ನುಡಿದರು.
  ದೇಲಂಪಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಮುಸ್ತಫ ಹಾಜಿ ಅಧ್ಯಕ್ಷತೆ ವಹಿಸಿದರು.ದೇಲಂಪಾಡಿ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ರತನ್ ಕುಮಾರ್ , ಗ್ರಾ.ಪಂ. ಸದಸ್ಯರಾದ ಗುಲಾಬಿ, ಮಾಧವನ್ ,ಶಿಬಿರದ ನಿದರ್ೇಶಕ ಪ್ರೊ.ಮಹಮ್ಮದಾಲಿ.ಕೆ, ಯೋಜನಾಧಿಕಾರಿ ಡಾ. ಟಿ ವಿನಯನ್ , ಪ್ರೊ.ಸುಜಾತಾ ಎನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಧಾಕೃಷ್ಣನ್ , ನಿವೃತ್ತ ಮುಖ್ಯೋಪಾಧ್ಯಾಯ ಗಂಗಾಧರನ್ ಮಾಸ್ತರ್ , ರಾಧಾಕೃಷ್ಣ ಎಡಪರಂಬ, ಊರ ಹಿರಿಯರಾದ ಸೀತಾರಾಮ ಮಣಿಯಾಣಿ , ಶಂಸುದ್ದೀನ್ , ಮಾಜಿ ಗ್ರಾ.ಪಂ.ಸದಸ್ಯ ಉಮೇಶನ್ ಮಾತನಾಡಿದರು. ಶ್ರೀಜಿತ್ , ರಜೀಶಾ, ಶಿಹಾಬ್,ವೈಶಾಖ್,ಶ್ರೀಶಿಲ್ಪಾ ,ಮನೀಶ್, ಹರಿಣ್ ಎಸ್ ನಾಯಕ್,ಅಖಿಲ್ ,ದೃಶ್ಯಾ,ಸ್ವಪ್ನಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
   

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries