HEALTH TIPS

No title

                    ಕೇರಳ ಸರಕಾರದಿಂದ ಕೃಷಿಕರಿಗೆ ಮೋಸ : ಬಿಜೆಪಿ ವಕರ್ಾಡಿ ಸಮಿತಿ ಆರೋಪ
     ಮಂಜೇಶ್ವರ:ಕೇರಳದಲ್ಲಿ ಎಡರಂಗ ಸರಕಾರ ಕೃಷಿಕರನ್ನು ಬಹಿರಂಗವಾಗಿ ವ0ಚಿಸುತ್ತಿದೆ. ಕೃಷಿಗೆ ಉಚಿತವಾಗಿ ನೀಡಲಾಗುತ್ತಿದ್ದ ವಿದ್ಯುತ್ಗೆ ಕೇರಳ ವಿದ್ಯುತ್ ಇಲಾಖೆ ಕಳೆದ 3 ತಿಂಗಳಿಂದ ನೋಟಿಸ್ ಜಾರಿಗೊಳಿಸಿ ಕೃಷಿಕರಿಗೆ ಬಿಲ್ ಪಾವತಿಸಲು ದಿನಾಂಕ ನಿಗದಿ ಪಡಿಸಿ ಕೃಷಿಕರನ್ನು ಬೆದರಿಸುತ್ತಿದೆ ಎಂದು ಬಿಜೆಪಿ ವಕರ್ಾಡಿ ಪಂಚಾಯತು ಸಮಿತಿ ಆರೋಪಿಸಿದೆ.
   ಎಡರಂಗ ಸರಕಾರದ ಆಂತರಿಕ ಕಚ್ಚಾಟ ಇದಕೆಲ್ಲ  ಕಾರಣ. ಕೃಷಿ ಇಲಾಖೆ ಹಾಗು ವಿದ್ಯುತ್ ಇಲಾಖೆ ಪರಸ್ಪರ ಹೊಂದಾಣಿಕೆ ಇಲ್ಲದೆ ಕೃಷಿಕರು ಪರದಾಡುವಂತಾಗಿದೆ. ಕೃಷಿಯನ್ನು ನಂಬಿರುವ ಬಡ ಕೃಷಿಕರಿಗೆ ಇದು ಸರಕಾರ ಮಾಡುತ್ತಿರುವ ಅನ್ಯಾಯವಾಗಿದೆ.
ಎಡರಂಗದ ಆಡಳಿತ ಕೇರಳದಲ್ಲಿ ಅರಾಜಕತೆ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿಕರು ಒಂದಾಗಿ ಹೋರಾಟ ಮಾಡಬೇಕು. ಕೃಷಿಕರಿಗೆ ಇಲಾಖೆ ನೀಡುವ  ಬಿಲ್ ತಡೆ ಹಿಡಿಯಬೇಕು, ಉಚಿತ ವಿದ್ಯುತ್ ನೀಡಬೇಕು ಹಾಗು ಕೃಷಿ ಇಲಾಖೆ ತನ್ನ ದಬ್ಬಾಳಿಕೆ ನಿಲ್ಲಿಸಬೇಕೆಂದು ಬಿಜೆಪಿ ಅಗ್ರಸಿದೆ.
  ಎಡರಂಗ ಬೆಂಬಲಿತ ಸಂಘಟನೆಗಳು ಇದರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದು ಬಿಟ್ಟು ರೈತರನ್ನು ಮೋಸಗೊಳಿಸಿದ ಸರಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿಯೊಂದಿಗೆ ಸಹಕರಿಸಬೇಕು. ಬಿಜೆಪಿ ಈಗಾಗಲೇ ವಿದ್ಯುತ್ ಇಲಾಖೆ ಹಾಗೂ ಕೃಷಿ ಇಲಾಖೆಗೆ ಮನವಿ ಸಲ್ಲಿಸಿದ್ದು  ಕೃಷಿಕರ ಪರ ಹೋರಾಟಕ್ಕೆ ಬಿಜೆಪಿ ಪೂರ್ಣ ಬೆಂಬಲ ನೀಡಲಿದೆ ಎಂದು  ಬಿಜೆಪಿ ವಕರ್ಾಡಿ ಪಂಚಾಯತು ಸಮಿತಿ ತಿಳಿಸಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries