HEALTH TIPS

No title

       ಎಸ್ ಎ ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾಷರ್ಿಕೋತ್ಸವದ ಸಂಭ್ರಮ
   ಮಂಜೇಶ್ವರ: ಮಂಜೇಶ್ವರದ ಅತೀ ಪುರಾತನವಾದ ವಿದ್ಯಾಲಯದಲ್ಲೊಂದಾದ ಎಸ್ ಎ ಟಿ ಶಾಲೆಯ ಆಂಗ್ಲ ಮಾಧ್ಯಮ ಶಾಲೆಯ 10 ನೇ ವಾಷರ್ಿಕ ಮಹೋತ್ಸವವು ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
  ಶ್ರೀಮದ್ ಅನಂತೇಶ್ವರ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಡಾ.ಅನಂತ ಕಾಮತ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು  ಮಂಜೇಶ್ವರ ಉಪಜಿಲ್ಲಾ ಶಿಕ್ಷಣ ಅಧಿಕಾರಿ    ದಿನೇಶ್ ವಿ ದೀಪ ಬೆಳಗಿಸಿ ಉದ್ಘಾಟಿಸಿದರು.
  ಬಳಿಕ ಮಾತನಾಡಿದ ಅವರು ನೂತನಾಗಿ ಅಧಿಕಾರಕ್ಕೇರಿದ ಸರಕಾರವು ವಿದ್ಯಾಭ್ಯಾಸಕ್ಕೆ ಉತ್ತಮ ಪ್ರೋತ್ಸಾವನ್ನು ನೀಡಿ ಅವರಿಗೆ ಬೇಕಾದ ಸಹಕಾರವನ್ನು ನೀಡುತ್ತಿದೆ.ಸರಕಾರದ ಅನುದಾನಗಳನ್ನು ಗರಿಷ್ಠ ಬಳಕೆ ಮಾಡುವುದರಿಂದ ಅಭಿವೃದ್ದಿ ಸಾಧ್ಯ ಎಂದು ತಿಳಿಸಿದರು. ವಿದ್ಯಾಭ್ಯಾಸ ವಲಯದ ಗರಿಷ್ಠ ಸಂಪನ್ಮೂಲಗಳ ಬಳಕೆಯಿಂದ ಭವಿಷ್ಯತ್ತಿನಲ್ಲಿ ಉಜ್ವಲತೆ ಕಂಡುಬರಲಿದೆ ಎಂದು ಅವರು ತಿಳಿಸಿದರು.
  ವೇದಿಕೆಯಲ್ಲಿ ಹಿರಿಯ ಅಧ್ಯಾಪಕಿ ಲಿಲ್ಲಿ ಟೀಚರ್ ರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಛತ್ರಪತಿ ಪ್ರಭು, ಕೆ ಯೋಗೀಶ್.ಆರ್ ಕಾಮತ್, ವಿದ್ಯಾಥರ್ಿಗಳು, ಅಧ್ಯಾಪಕರು,ಮಕ್ಕಳ ಹೆತ್ತವರ ಹಾಗೂ   ಹಲವರು ಗಣ್ಯರು ಉಪಸ್ಥಿತರಿದ್ದರು. ಬಳಿಕ ಶಾಲಾ ಮಕ್ಕಳಿಂದ ವಿವಿಧ  ಕಲಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries