HEALTH TIPS

No title

               ಇಂದು ಸಾಹಿತ್ಯ-ಸಾಂಸ್ಕೃತಿಕ ಪಯಣ-7 ಮುಳ್ಳೇರಿಯ ಗಜಾನನದಲ್ಲಿ
     ಮುಳ್ಳೇರಿಯ: ಕಾಸರಗೊಡು ಗಡಿನಾಡು ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯ ತಿಂಗಳ ಸರಣಿ ಕಾರ್ಯಕ್ರಮ ಸಾಹಿತ್ಯ-ಸಾಂಸ್ಕೃತಿಕ ಪಯಣ-7 ಫೆ.15 ರಂದು ಇಂದು ಗುರುವಾರ ಮುಳ್ಳೇರಿಯ ಗಜಾನನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 10 ರಿಂದ ನಡೆಯಲಿದೆ.
   ಪ್ರಗತಿಪರ ಕೃಷಿಕ, ಸಮಾಜ ಸೇವಕ ಪ್ರಭಾಕರ ಕಲ್ಲೂರಾಯ ಬನದಗದ್ದೆಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕನರ್ಾಟಕ ಸರಕಾರದ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಉದ್ಘಾಟಿಸುವರು. ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿದರ್ೇಶಕ ಶೌಖತ್ ಅಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕಾರಡ್ಕ ಗ್ರಾಮಪಂಚಾಯತು ಅಧ್ಯಕ್ಷೆ  ಸ್ವಪ್ನ ಜೆ, ಸ್ಥಾಯೀ ಸಮಿತಿ ಅಧ್ಯಕ್ಷೆ ಜನನಿ, ಸದಸ್ಯೆ ರೇಣಿಕಾ ದೇವಿ, ಕೇರಳ ಬ್ಯಾರಿ ಫೆಡರೇಶನ್ ಅಧ್ಯಕ್ಷ ಸೂಫುಲ್ಲಾ ತಂಙಳ್, ಶಾಲಾ ಪ್ರಬಂಧಕ ಡಾ.ವಿ.ವಿ.ರಮಣ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಮಾನಂದ ರಾವ್,  ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಕ್ಬಾಲ್ ಮುಳ್ಳೇರಿಯ, ಯಕ್ಷಗಾನ ಅರ್ಥಧಾರಿ, ನಿವೃತ್ತ ಮುಖ್ಯೋಪಾಧ್ಯಾಯ ದೇವಾನಂದ ಶೆಟ್ಟಿ ಕಾನಕ್ಕೋಡು, ಪತ್ರಕರ್ತ ರಾಮಚಂದ್ರ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು. ಬಹುಮುಖ ಪ್ರತಿಭೆ ಸನ್ನಿಧಿ ಟಿ. ರೈ, ಯಕ್ಷ ಪ್ರತಿಭೆ ಕಿಶನ್ ಅಗ್ಗಿತ್ತಾಯ, ಕರಾಟೆ ಪಟು ಶೈನಿದಾಸ್ರನ್ನು ಈ ಸಂದರ್ಭ ಅಭಿನಂದಿಸಲಾಗುವುದು. ಖ್ಯಾತ ಯಕ್ಷಗಾನ ಕಲಾವಿದ ಪಡುಮಲೆ ಜಯರಾಮ ಪಾಟಾಳಿ, ಪ್ರಕಾಶ್ ಮಾಸ್ತರ್, ನೃತ್ಯ ಕಲಾವಿದೆ ಮಹಿಮಾ ಕಾಸರಗೊಡು, ಗಾಯಕ ವಸಂತ ಬಾರಡ್ಕರಿಗೆ ವಿಶೇಷ ಸನ್ಮಾನಗೈದು ಗೌರವಿಸಲಾಗುವುದು. ಬಳಿಕ ಪುರುಷೋತ್ತಮ ರವರು ಪರೀಕ್ಷಾ ಹಿನ್ನೆಲೆಯಲ್ಲಿ ವಿದ್ಯಾಥರ್ಿಗಳ ಸುಲಭ ಕಲಿಕೆಯ ಬಗ್ಗೆ ತರಗತಿ ನಡೆಸುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries