HEALTH TIPS

No title

              ಮಧುರ ಕನ್ನಡ ಘೋಷಣೆ
    ಉಪ್ಪಳ: ಕುಬಣೂರಿನ ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧುರ ಕನ್ನಡ ಯೋಜನೆಯ ಘೋಷಣೆ ಹಾಗೂ ಅಕಾಡೆಮಿಕ್ ಮಾಸ್ಟರ್ ಪ್ಲಾನ್ನ ಬಿಡುಗಡೆ ಇತ್ತೀಚೆಗೆ ನಡೆಯಿತು.
  ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯೆ ಜಯಶಮರ್ಿಳಾ ಅಕಾಡೆಮಿಕ್ ಮಾಸ್ಟರ್ ಪ್ಲಾನ್ ನ್ನು ಈ ಸಂದರ್ಭ ಬಿಡುಗಡೆಗೊಳಿಸಿದರು.
  ಕಲಿಕೆಯಲ್ಲಿ ಹಿಂದುಳಿದಿರುವ ಆಯ್ದ 46 ಮಕ್ಕಳಿಗೆ ಮಧುರ ಕನ್ನಡ ವಿಶೇಷ ಯೋಜನೆಯ ಮೂಲಕ ಕಲಿಕಾ ತರಬೇತಿ ನೀಡಿ ಅವರಿಂದ ರಚನೆಗೊಂಡ ಮಧುರಕನ್ನಡ ಹಸ್ತಪತ್ರಿಕೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ರೈ ತಲೆಕ್ಕಾನ ಬಿಡುಗಡೆಗೊಳಿಸಿದರು. ಮಾತೃಸಂಘದ ಅಧ್ಯಕ್ಷೆ ವ್ರಿವೇಣಿ ಅಚಾರ್ಯರು ಓದುವ ಕಾಡರ್್ಗಳನ್ನು ಈ ಸಂದರ್ಭ ವಿತರಿಸಿದರು. ಶಿಕ್ಷಕ ಸತೀಶ್ ಮಧುರ ಕನ್ನಡ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಪಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸ್ವಫ್ನಾ ವಂದಿಸಿದರು. ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries