HEALTH TIPS

No title

      ಶ್ರೀಬ್ರಹ್ಮ ಬಲಿ ಮತ್ತು ಬೈದರ್ಕಳ ನೇಮೋತ್ಸವ ಇಂದು
   ಬದಿಯಡ್ಕ: ನೀಚರ್ಾಲು ಸಮೀಪದ ಬೇಳ ಶ್ರೀಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವಾಷರ್ಿಕ ಶ್ರೀಬ್ರಹ್ಮಬಲಿ ಮತ್ತು ಶ್ರೀಬೈದರ್ಕಳ ನೇಮೋತ್ಸವ ಇಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಮಾರ್ಗದರ್ಶನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
   ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಸಂಜೆ ನೀಚರ್ಾಲು ಅಶ್ವತ್ಥಕಟ್ಟೆ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಗರೋಡಿಗೆ ಸಾಗಿತು. ಇಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ,10 ಕ್ಕೆ ಬ್ರಹ್ಮ ತಂಬಿಲ, 11ಕ್ಕೆ ಗರೋಡಿಮನೆಯಿಂದ ಭಂಡಾರ ಹೊರಡುವುದು, ಮಧ್ಯಾಹ್ನ 1ಕ್ಕೆ ಅನ್ನದಾನ 2 ಗಂಟೆಗೆ ಶುದ್ದಕಲಶ ಹೋಮ, 9ಕ್ಕೆ ಬೈದರ್ಕಳ ಗರೋಡಿ ಇಳಿಯುವುದು ಮತ್ತು ಶ್ರೀಬ್ರಹ್ಮಬಲಿ, ರಾತ್ರಿ 11ಕ್ಕೆ ಬ್ರಹ್ಮ ಬೈದರ್ಕಳ ಸುರಿಗೆ ಒಪ್ಪಿಸುವುದು, 1 ಗಂಟೆಗೆ ಶ್ರೀಮಾಯಾಂದಾಳ ದೇವಿಯ ಉತ್ಸವ, ಮುಂಜಾನೆ 4ಕ್ಕೆ ಪೂಜಾರಿಗಳ ಸೇಟು, ಬೆಳಿಗ್ಗೆ 6ಕ್ಕೆ ಗಂಧಪ್ರಸಾದ ವಿತರಣೆ, 8 ಕ್ಕೆ ಭಂಡಾರ ಒಳಗಿರಿಸುವುದರೊಂದಿಗೆ ನೇಮೋತ್ಸವ ಸಂಪನ್ನಗೊಳ್ಳಲಿದೆ.
   ಸಂಜೆ 5.30 ರಿಂದ ಧಾಮರ್ಿಕ ಸಭೆ ನಡೆಯಲಿದ್ದು, ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಅಧ್ಯಕ್ಷ ಪಿ.ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕೋಪರೇಟಿವ್ ಎಂಪ್ಲೋಯೀಸ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ನ್ಯಾಯವಾದಿ ಪ್ರವೀಣ್ ಕೋಡೋತ್ ಧಾಮರ್ಿಕ ಭಾಷಣ ಮಾಡುವರು. ಆಟರ್್ ಓಫ್ ಲಿವಿಂಗ್ ನ ಶಿಕ್ಷಕಿ ಸಂಧ್ಯಾಶ್ರೀ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಂಜೆ 4.30 ರಿಂದ ತುಳುನಾಡ ತುಡಿಪು ಜಾನಪದ ವೈವಿಧ್ಯ ಪ್ರದರ್ಶನಗೊಳ್ಳಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries