HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

                     ಅನಂತಪುರ ವಾಷರ್ಿಕ ಮಹೋತ್ಸವ
  ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ವಾಷರ್ಿಕ ಮಹೋತ್ಸವ ಫೆ.26 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ವಿದ್ಯುಕ್ತವಾಗಿ ನೆರವೇರಿತು.
    ಪೂವರ್ಾಹ್ನ 8 ರಿಂದ ಗಣಪತಿ ಹವನ, ಬಿಂಬ ಶುದ್ಧಿ, ನವಕಾಭಿಷೇಕ, 8.30 ರಿಂದ ಸೋಪಾನ ಗೀತೆ(ಅಷ್ಟಪದಿ), 11 ರಿಂದ ತುಲಾಭಾರ ಸೇವೆಗಳು, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ 6.30 ರಿಂದ ದೀಪಾರಾಧನೆ, ಶಾಸ್ತಾರ ವನದಲ್ಲಿ ಭಜನೆ, ರಾತ್ರಿ 11 ರಿಂದ ಶ್ರೀ ಭೂತಬಲಿ, ಬೆಡಿ ಸೇವೆ, ರಾಜಾಂಗಣ ಪ್ರಸಾದ ನಡೆಯಿತು.
   ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪೂವರ್ಾಹ್ನ 10 ರಿಂದ ಚಿತ್ತರಂಜಿನಿ ಕುಂಬಳೆ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ಪ್ರಸ್ತುತಗೊಂಡಿತು. ವಯಲಿನ್ನಲ್ಲಿ ಅನಿಲ್ಕೃಷ್ಣ ಕುಂಬಳೆ, ಮೃದಂಗದಲ್ಲಿ ಸದಾಶಿವ ಅನಂತಪುರ, ಮೋಸರ್ಿಂಗ್ನಲ್ಲಿ ವನಮಾಲಿ ಶ್ರೀನಿವಾಸ ವೇಣೂರು ಸಹಕರಿಸಿದರು.
    ಸಂಜೆ 7 ರಿಂದ ಊರ ಬಾಲಕ ಬಾಲಿಕೆಯರಿಂದ ನೃತ್ಯ ಕಾರ್ಯಕ್ರಮ, ರಾತ್ರಿ 8 ರಿಂದ ಶ್ರೀ ಅನಂತ ಬಾಲಗೋಕುಲದ ಸದಸ್ಯರಿಂದ ಕಿರುನಾಟಕ `ಪೂತಪ್ಪಾಟ್', 9 ರಿಂದ ಫೋಕ್ ಮೆಘಾ ಶೋ ನಡೆಯಿತು.


  

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries