ಕಂಬಳ ಬೆಂಬಲಕ್ಕೆ ತಾರಾ ಮೆರುಗು-ಸೆಹ್ವಾಗ್ ಟ್ವೀಟ್
ನವದೆಹಲಿ: ಕನರ್ಾಟಕದ ಇತಿಹಾಸ ಪ್ರಸಿದ್ಧ ಜನಪದ ಕ್ರೀಡೆ ಕಂಬಳವನ್ನು ಬೆಂಬಲಿಸಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದು ಇದಕ್ಕೆ ಕನ್ನಡಿಗರು ಅಭಿನಂದಿಸಿದ್ದಾರೆ.
ಕರಾವಳಿ ಭಾಗದ ಜನಪ್ರಿಯ ಜನಪದ ಕ್ರೀಡೆ ಕಂಬಳಕ್ಕೆ ಅವಕಾಶ ಮಾಡಿಕೊಡುವುದಕ್ಕಾಗಿ ರಾಜ್ಯ ವಿಧಾನ ಮಂಡಳ ಅಂಗೀಕರಿಸಿದ್ದ ಪ್ರಾಣಿ ಹಿಂಸೆ ತಡೆ ವಿಧೇಯಕ-2017ಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತ್ತಿದ್ದು. ಇದರಿಂದಾಗಿ ಕಂಬಳ ಕ್ರೀಡೆಯ ಮೇಲೆ ನೇತಾಡುತ್ತಿದ್ದ ನಿಷೇಧದ ಕತ್ತಿ ಶಾಶ್ವತವಾಗಿ ದೂರವಾಗಿದೆ.
ವೀರೇಂದ್ರ ಸೆಹ್ವಾಗ್ ಗೆ ಮರು ಟ್ವೀಟ್ ಮಾಡಿರುವ ಕನ್ನಡಿಗರು ಮಂಗಳೂರಿಗೆ ಬಂದು ಕಂಬಳ ಕ್ರೀಡೆ ವೀಕ್ಷಿಸುವಂತೆ ಆಹ್ವಾನ ನೀಡಿದ್ದಾರೆ.
ಸೆಹ್ವಾಗ್ ತಮ್ಮ ಟ್ವೀಟ್ ನಲ್ಲಿ ಕನರ್ಾಟಕ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಕಾನೂನಿನ ಮಾನ್ಯತೆ ಸಿಕ್ಕಿದೆ. ಕಂಬಳ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಆ ಮೂಲಕ ಪ್ರಾಣಿ ಹಿಂಸೆ ನೆಪದಲ್ಲಿ ಈ ಗ್ರಾಮೀಣ ಭಾಗದ ಕ್ರೀಡೆಯನ್ನು ನಿಷೇಧಿಸಲು ಹೊರಟಿದ್ದ ಕೆಲವು ಮನಸ್ಸುಗಳಿಗೆ ಬ್ರೇಕ್ ಬಿದ್ದಿದೆ ಎಂದು ಟ್ವೀಟ್ ಮಾಡಿದ್ದಾರೆ.
ನವದೆಹಲಿ: ಕನರ್ಾಟಕದ ಇತಿಹಾಸ ಪ್ರಸಿದ್ಧ ಜನಪದ ಕ್ರೀಡೆ ಕಂಬಳವನ್ನು ಬೆಂಬಲಿಸಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದು ಇದಕ್ಕೆ ಕನ್ನಡಿಗರು ಅಭಿನಂದಿಸಿದ್ದಾರೆ.
ಕರಾವಳಿ ಭಾಗದ ಜನಪ್ರಿಯ ಜನಪದ ಕ್ರೀಡೆ ಕಂಬಳಕ್ಕೆ ಅವಕಾಶ ಮಾಡಿಕೊಡುವುದಕ್ಕಾಗಿ ರಾಜ್ಯ ವಿಧಾನ ಮಂಡಳ ಅಂಗೀಕರಿಸಿದ್ದ ಪ್ರಾಣಿ ಹಿಂಸೆ ತಡೆ ವಿಧೇಯಕ-2017ಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತ್ತಿದ್ದು. ಇದರಿಂದಾಗಿ ಕಂಬಳ ಕ್ರೀಡೆಯ ಮೇಲೆ ನೇತಾಡುತ್ತಿದ್ದ ನಿಷೇಧದ ಕತ್ತಿ ಶಾಶ್ವತವಾಗಿ ದೂರವಾಗಿದೆ.
ವೀರೇಂದ್ರ ಸೆಹ್ವಾಗ್ ಗೆ ಮರು ಟ್ವೀಟ್ ಮಾಡಿರುವ ಕನ್ನಡಿಗರು ಮಂಗಳೂರಿಗೆ ಬಂದು ಕಂಬಳ ಕ್ರೀಡೆ ವೀಕ್ಷಿಸುವಂತೆ ಆಹ್ವಾನ ನೀಡಿದ್ದಾರೆ.
ಸೆಹ್ವಾಗ್ ತಮ್ಮ ಟ್ವೀಟ್ ನಲ್ಲಿ ಕನರ್ಾಟಕ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಕಾನೂನಿನ ಮಾನ್ಯತೆ ಸಿಕ್ಕಿದೆ. ಕಂಬಳ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಆ ಮೂಲಕ ಪ್ರಾಣಿ ಹಿಂಸೆ ನೆಪದಲ್ಲಿ ಈ ಗ್ರಾಮೀಣ ಭಾಗದ ಕ್ರೀಡೆಯನ್ನು ನಿಷೇಧಿಸಲು ಹೊರಟಿದ್ದ ಕೆಲವು ಮನಸ್ಸುಗಳಿಗೆ ಬ್ರೇಕ್ ಬಿದ್ದಿದೆ ಎಂದು ಟ್ವೀಟ್ ಮಾಡಿದ್ದಾರೆ.