HEALTH TIPS

No title

             ಸುಹೈಬ್ ಬರ್ಬರ ಕೊಲೆ- ಹೊಸಂಗಡಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
    ಮಂಜೇಶ್ವರ: ಕಣ್ಣೂರು ಯುವ ಕಾಂಗೈ ನೇತಾರ ಸುಹೈಬ್ ರವರನ್ನು ಬಾಂಬೆಸೆದು, ತಲವಾರಿನಿಂದ ಕೊಚ್ಚಿ ಕೊಲೆಗೈದ ಸಿಪಿಎಂ ತಾಲಿಬಾನೀ ಕೃತ್ಯವನ್ನು ಖಂಡಿಸಿ ಮಂಜೇಶ್ವರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಪೇಟೆಯಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
     ಬ್ಲಾಕ್ ಯುವ ಕಾಂಗ್ರೆಸ್ಸ್ ಅಧ್ಯಕ್ಷ ನಾಸರ್ ಮೊಗ್ರಾಲ್ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯನ್ನು ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್ ಉದ್ಘಾಟಿಸಿದರು. ಕೇರಳದಲ್ಲಿ ಎಡರಂಗದ ಆಡಳಿತದಲ್ಲಿ ನರಬೇಟೆ ವೃದ್ಧಿಸುತ್ತಿದ್ದು, ಕ್ರಿಮಿನಲ್ ಹಿನ್ನೆಲೆಯುಳ್ಳ ಮುಖ್ಯಮಂತ್ರಿ ಇದಕ್ಕೆ ನೇತೃತ್ವ ನೀಡುತ್ತಿದ್ದಾರೆಂದು ಅವರು ಆರೋಪಿಸಿದರು.
  ಮುಖಂಡರಾದ ಉಮ್ಮರ್ ಬೋರ್ಕಳ, ಹಷರ್ಾದ್  ವಕರ್ಾಡಿ, ಸತೀಶ್ ಅಡಪ ಸಂಕಬೈಲ್, ಮಮತಾ ದಿವಾಕರ್, ಶಂಷಾದ್ ಶುಕೂರ್, ಶಶಿಕಲಾ, ಸುನೀತಾ ಡಿ ಸೋಜಾ, ಸತ್ಯನ್ ಸಿ ಉಪ್ಪಳ, ಮುಹಮ್ಮದ್ ಮಜಾಲ್, ಶಾಂತಾ ಆರ್ ನಾಯ್ಕ್, ಆರಿಫ್ ಮಚ್ಚಂಪಾಡಿ, ಇಬ್ರಾಹಿಂ ಐ ಆರ್ ಡಿ ಪಿ, ಕಂಚಿಲ ಮುಹಮ್ಮದ್,  ಗುರುವಪ್ಪ ಮಂಜೇಶ್ವರ, ದಿವಾಕರ ಎಸ್ ಜೆ, ಸದಾಶಿವ ಕೆ, ಕಾಯಿಂಞಿ ಹಾಜಿ, ದಾಮೋದರ ಮಾಸ್ಟರ್, ನಾಗೇಶ್ ಮಂಜೇಶ್ವರ, ಮಂಜುನಾಥ ಪ್ರಸಾದ್ ರೈ, ಶೋಭಾ ಸೋಮಪ್ಪ, ಫಾತಿಮತ್ ಝೌರಾ, ಚಂದ್ರಾವತಿ ,ಸೀತಾ ಡಿ, ಶರೀಫ್ ಅರಿಬೈಲ್, ಮಹಮ್ಮದ್ ಬಿಕೆ, ಎಸ್. ಅಬ್ದುಲ್ ಖಾದರ್ ಹಾಜಿ, ನಾರಾಯಣ ಏದಾರ್, ರಮೇಶ್ ಪೆರ್ಲ, ಎಂ.ಕೆ.ಸಲೀಂ ,ಪ್ರದೀಪ್ ಶೆಟ್ಟಿ ,ಸುಧಾಕರ ಯು. ಹಮೀದ್ ಕಣಿಯೂರು ಝಕರಿಯ್ಯಾ ಮಂಜೇಶ್ವರ, ಮಹಮ್ಮದ್ ನೈನಾರ್, ಪ್ರಶಾಂತಿ ಕೆ ,ಉಮೇಶ್ ಶೆಟ್ಟಿ, ಜಗದೀಶ್ ಮೂಡಂಬೈಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
         

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries