HEALTH TIPS

No title

           ಧರ್ಮನಗರ: ಮಖಾಂ ಊರೂಸ್ ಗೆ ಚಾಲನೆ ಹಾಗೂ ನೂತನ ಮಖಾಂ ಕಟ್ಟಡ ಲೋಕಾರ್ಪಣೆ
   ಮಂಜೇಶ್ವರ:  ಧರ್ಮನಗರ ಮಖಾಂ ಉರೂಸಿಗೆ ಶುಕ್ರವಾರ ಉರೂಸ್ ಸಮಿತಿ ಅಧ್ಯಕ್ಷ ಮೊಯಿದೀನ್ ಕುಟ್ಟಿ ನೀರೊಳಿಕೆಯವರು ಧ್ವಜಾರೋಹಣಗೈದು ಚಾಲನೆ ನೀಡಿದರು.
   ಈ ಸಂದರ್ಭ ನೂತನ ಮಖಾಂ ಕಟ್ಟಡವನ್ನು ಪೊಯ್ಯತ್ತಬೈಲ್ ಜಮಾಅತ್ ಖಾಝಿ ಶೈಖುನಾ ತಾಜುಶ್ಯರೀಅ ಅಲಿಕುಂಞಿ ಉಸ್ತಾದ್ ಲೋಕಾರ್ಪಣೆಗೈದರು. ಬಳಿಕ ನಡೆದ ಪ್ರಾರ್ಥಣೆಗೆ ಅಸಯ್ಯದ್ ಅತ್ತಾವುಲ್ಲ ತಂಙಳ್ ಎಂ ಎ ಉದ್ಯಾವರ ನೇತೃತ್ವ ನೀಡಿದರು.
   ಈ ಸಂದರ್ಭ ಪೊಯ್ಯತ್ತಬೈಲ್ ಜಮಾಅತ್ ಅಧ್ಯಕ್ಷ ಡಿ ಎಂ ಕೆ ಮೊಹಮ್ಮದ್ , ಹಾಜಿ ಎನ್ ಆಹ್ಮದ್ ಕುಂಞಿ, ಹಾಜಿ ಪಿ ಕೆ ಕುಂಞಿಆಹ್ಮದ್ ಮುಸ್ಲಿಯಾರ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
   ಬಳಿಕ ಸಂಜೆ ಅಲಿ ಕುಂಞಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಅಸಯ್ಯದ್ ಶಮೀಮ್ ತಂಙಳ್ ಕುಂಬೋಲ್ ಉದ್ಘಾಟಿಸಿದರು.
  ಅಬ್ದುಲ್ ಜಬ್ಬಾರ್ ಸಖಾಫಿ ಔಲಿಯಾಗಳು ಹಾಗೂ ಅವರ ಪವಾಡಗಳು ಎಂಬ ವಿಷಯದಲ್ಲಿ ಮುಖ್ಯ ಪ್ರವಚನ ನೀಡಿದರು. ವೇದಿಕೆಯಲ್ಲಿ ಆಹ್ಮದ್ ಕುಂಞಿ ಓಡಂಗಲ, ಹಾಜಿ ಅಬ್ದುಲ್ ರಹ್ಮಾನ್ (ಮೋನು) ಉಪಸ್ಥಿತರಿದ್ದರು.
   ಫೆಬ್ರವರಿ 17 ರ ತನಕ ವಿವಿಧ ಧಾಮರ್ಿಕ ಪಂಡಿತರಿಂದ ಧಾಮರ್ಿಕ ಪ್ರವಚನಗಳು ದಿನನಿತ್ಯ ನಡೆಯಲಿದೆ. 17 ರಂದು ಸಮಾರೋಪ ಸಮಾರಂಭದಲ್ಲಿ  ಅಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸ್ ತಂಙಳ್ ಕಿಲ್ಲೂರು ದುವಾ ಆಶೀರ್ವಚನ ನೀಡಲಿದ್ದಾರೆ. ಬಳಿಕ ಫೆಬ್ರವರಿ 18 ಕ್ಕೆ ಮೌಲೂದ್ ಪಾರಾಯಣದ ಬಳಿಕ ಹಗಲು ಉರೂಸ್ ಸಮಾರಂಭ ನಡೆಯಲಿದ್ದು ಮದ್ಯಾಹ್ನ 2 ರಿಂದ ಸಂಜೆ 5 ರ ತನಕ ಅನ್ನದಾನ ನಡೆಯಲಿದೆ.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries