HEALTH TIPS

No title

          ವಕರ್ಾಡಿಯಲ್ಲಿ ಮಧುರ ಕನ್ನಡ ಘೋಷಣೆ
   ಮಂಜೇಶ್ವರ : ಬಾಕ್ರಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಶಿಕ್ಷಾ ಅಭಿಯಾನದ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಯಜ್ಞದ ಭಾಗವಾಗಿ ವಕರ್ಾಡಿ ಗ್ರಾ.ಪಂ. ಮಟ್ಟದ ಮಧುರ ಕನ್ನಡ ಘೋಷಣಾ ಸಮಾರಂಭವು ಸೋಮವಾರ ನಡೆಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ  ಶಂಕರ ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ  ಬ್ಲಾಕ್ ಸಂಪನ್ಮೂಲ ಕೇಂದ್ರದ ತರಬೇತುದಾರ ಗುರು ಪ್ರಸಾದ್.ರೈ ಪ್ರಾಸ್ತಾವಿಕವಾಗಿ ಮಾತನಾಡಿ ಮಧುರ ಕನ್ನಡ ಯೋಜನೆಯ ಉದ್ದೇಶವನ್ನು ತಿಳಿಸಿದರು. ಮಕ್ಕಳು ತಮಗೆ ನೀಡಿದ ರೀಡಿಂಗ್ ಕಾರ್ಡನ್ನು ಸ್ಪಷ್ಟವಾಗಿ ಮತ್ತು ನಿರರ್ಗಳವಾಗಿ ವೇದಿಕೆಯಲ್ಲಿ ಓದಿದರು.
  ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗ್ರಾ.ಪಂ. ವಿದ್ಯಾಭ್ಯಾಸ ಕಾರ್ಯದಶರ್ಿ ಸುರೇಶ್ ಬಂಗೇರ  ಮಧುರ ಕನ್ನಡದ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 91 ಮತ್ತು ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 71 ಮಕ್ಕಳು ಪ್ರಗತಿಯತ್ತ ಸಾಗಿದ್ದಾರೆ ಎಂದು ಘೋಷಿಸಿ  ಶುಭ ಹಾರೈಸಿದರು.  ಶಾಲಾ ಹಿರಿಯ ಅಧ್ಯಾಪಕ ಮೋಹನ.ಬಿ ಹಾಗೂ ಮಾತೃಸಂಘದ ಅಧ್ಯಕ್ಷೆ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಾಲಾ ಮುಖ್ಯೋಪಧ್ಯಾಯ ಪಿ.ಬಿ ಶ್ರೀನಿವಾಸ ರಾವ್ ಸ್ವಾಗತಿಸಿ,  ಅಧ್ಯಾಪಿಕೆ ಅನಿತ.ಯಂ ವಂದಿಸಿದರು.ಶಿಕ್ಷಕ ಸುರೇಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries