HEALTH TIPS

No title

         ಶೀಘ್ರ ಕಾಮಗಾರಿಗೆ ಕಾಂಗ್ರೆಸ್ಸ್ ಕಾರ್ಯದಶರ್ಿ ಒತ್ತಾಯ
   ಪೆರ್ಲ: ಸಂಪೂರ್ಣ ಹದಗೆಟ್ಟುಹೋದ ಚೆರ್ಕಳ- ಕಲ್ಲಡ್ಕ ರಸ್ತೆಯಲ್ಲಿ ಬಸ್ ಸೇವೆ ನಿಲ್ಲಿಸಿ ಮುಷ್ಕರ ಹೂಡಿರುವ ಬಸ್ ನೌಕರರ ಬೇಡಿಕೆಗಳನ್ನು ಚಚರ್ೆಗಳ ಮೂಲಕ ಪರಿಹರಿಸಿ ಜನಸಾಮಾನ್ಯರ ಬವಣೆಗಳನ್ನು ಪರಿಹರಿಸಲು ಸರಕಾರ ನೇರ ಹಸ್ತಕ್ಷೇಪ ನಡೆಸಿ ತಕ್ಷಣ ಕ್ರಮಕೈಗೊಳ್ಳಬೇಕೆಂದು, ಶೋಚನೀಯ ವಾದ ರಾಜ್ಯ ಹೆದ್ದಾರಿಯ ದುರಸ್ತಿ ಕೆಲಸ ತಕ್ಷಣ ಆರಂಭಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದಶರ್ಿ ಶ್ರೀ ಸೋಮಶೇಖರ ಜೆ ಎಸ್ ಒತ್ತಾಯಿಸಿದ್ದಾರೆ.
  ಹಯರ್ ಸೆಕೆಂಡರಿ ಶಾಲಾ ವಿಧ್ಯಾಥರ್ಿಗಳ ಮಾದರಿ ಪರೀಕ್ಷೆಗಳು ಇದೀಗ ನಡೆಯುವುದರಿಂದ ವಿದ್ಯಾಥರ್ಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಾಧಾರಣ ಗ್ರಾಮೀಣ ಜನರ, ಕೂಲಿ ಕಾಮರ್ಿಕರ, ಕೃಷಿಕರ , ಶಾಲಾ ವಿದ್ಯಾಥರ್ಿಗಳು ಬಸ್ ಮುಷ್ಕರದ ಕಾರಣದಿಂದ ಹೆಚ್ಚಿನ ತೊಂದರೆಗಳನ್ನು ಅನುಭವಿಸುವಂತಾಗಿದೆ.ವಾಹನ ಸಂಚಾರವೇ ಸಾಹಸವಾಗಿರುವ ರಸ್ತೆಯ ದುರಾವಸ್ಥೆಗೆದುರಾಗಿ ಜನಸಾಮಾನ್ಯರ ಹೋರಾಟ ನ್ಯಾಯಯುತವಾಗಿದ್ದು ಜನರ ಸಹನೆಯನ್ನು ಪರೀಕ್ಷಿಸದೇ ಮೆಕ್ಕಾಡಂ ನಿಮರ್ಾಣ ಯೋಜನೆಯನ್ನು ತಕ್ಷಣ ಆರಂಭಿಸಬೇಕೆಂದು ಅವರು ಒತ್ತಾಯಿಸಿದರು.
 ಈ ಕುರಿತು ಸರಕಾರದ ಮೇಲೆ ಒತ್ತಡ ಹೇರಲು ಹಾಗೂ ಲೋಕೋಪಯೋಗಿ ಸಚಿವರ ಗಮನ ಸೆಳೆಯುವಂತೆ ಒತ್ತಾಯಿಸಿ ಪ್ರತಿಪಕ್ಷ ನಾಯಕ ಶ್ರೀ ರಮೇಶ್ ಚೆನ್ನಿತ್ತಲ ಅವರಿಗೆ ಪೂರ್ಣ ವಿವರದ ಪ್ಯಾಕ್ಸ್ ಸಂದೇಶ ಕಳುಹಿಸಿರುವುದಾಗಿ ಅವರು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries