HEALTH TIPS

No title

                 ನಲ್ಕ ಶಾಲೆಯ ವಾಷರ್ಿಕೋತ್ಸವ; ಸನ್ಮಾನ
    ಪೆರ್ಲ: ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕಲಿತರೂ ಜಗತ್ತಿನಲ್ಲಿ ಶ್ರೇಷ್ಠ ಮಟ್ಟದಸಾಧನೆ ಗಳಿಸಲು ಶಿಕ್ಷಣದಿಂದ ಸಾಧ್ಯವಿದೆ. ವಾಷರ್ಿಕೋತ್ಸವ ಮಕ್ಕಳ ಪ್ರತಿಭೆಯ ಬೆಳಕಿಗೆ ಬರಲು ಸಹಾಯಕ ಎಂದು ಕುಂಬಳೆ ಉಪಜಿಲ್ಲಾ ಶಿಕ್ಷಣಾಕಾರಿ ಕೈಲಾಸಮೂತರ್ಿ ಹೇಳಿದರು.
 ಅವರು ನಲ್ಕ ವಾಗ್ದೇವಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ  ವಾಷರ್ಿಕೋತ್ಸವ ಹಾಗೂ ಶಾಲೆಯ ಹಿರಿಯ ಶಿಕ್ಷಕಿ ಪಾರ್ವತಿ ಅವರ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
   ಎಣ್ಮಕಜೆ ಪಂಚಾಯಿತಿ ಸದಸ್ಯ ಸತೀಶ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಮುದ್ದೇನ ಹಳ್ಳಿ ಸತ್ಯಸಾಯಿ ಸಂಸ್ಥೆಯ ಉಪನ್ಯಾಸಕ ಕಬೀರ್ ಅಡ್ಕಸ್ಥಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಾರತೀಯ ಪರಂಪರೆಯ ಶಿಕ್ಷಣ ಜಗತ್ತಿನಲ್ಲಿ ಶ್ರೇಷ್ಠ. ಪುರಾತನ ಮೌಲ್ಯಗಳು ಇಂದಿನ ಅನಿವಾರ್ಯತೆ ಎಂದು ಹೇಳಿದರು. ಸಿ.ಎ.ಅಬ್ದುಲ್ಲ ಮಾದುಮೂಲೆ ಅಬುದಾಬಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕುಂಬಳೆ ಸಮೂಹ ಸಂಪನ್ಮೂಲ ಕೇಂದ್ರದ ತರಬೇತುದಾರ ಶಿವರಾಮ ಅವರು ವಿದ್ಯಾಭ್ಯಾಸ ಸಂರಕ್ಷಣಾ ಯಜ್ಷದಂತೆ ಶಾಲೆಯು ಹಿರಿಮೆಯ ಕೇಂದ್ರ ಎಂದು ಬಣ್ಣಿಸಿದರು.
   ಈ ಸಂದರ್ಭದಲ್ಲಿ ಈ ವರ್ಷ ಸೇವೆಯಿಂದ ನಿವೃತ್ತಿ ಹೊಂದಲಿರುವ ಹಿರಿಯ ಶಿಕ್ಷಕಿ ಪಾರ್ವತಿ ಕೈಲಾಸ ಅವರನ್ನು ಹಾಗೂ ಅವರ ಪತಿ ಈಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು. ಮಾತೃ ಸಮಿತಿ ಅಧ್ಯಕ್ಷೆ  ವಿನೋದ ಅವರು ಸನ್ಮಾನ ಪತ್ರ ವಾಚಿಸಿದರು. ಪಾರ್ವತಿ  ಕೈಲಾಸ ಅವರು ಶಾಲೆಗೆ  ಕಪಾಟು, ಮಿಕ್ಸರ್ ಗ್ರೈಂಡರ್, ಪಾತ್ರೋಪಕರಣಗಳನ್ನು ಕೊಡುಗೆಯಾಗಿ ನೀಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ಅಂಗನವಾಡಿ ಶಿಕ್ಷಕಿ ಗಿರಿಜಾ, ಶಂಕರ ಬನಾರಿ, ಅಬ್ಬಾಸ್ ನಲ್ಕ, ಶ್ರೀಧರ ಭಟ್ ಉಪಸ್ಥಿತರಿದ್ದರು. ರಕ್ಷಕರಿಗೆ ಮತ್ತು ಮಕ್ಕಳಿಗೆ ನಡೆಸಿದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಶಿಕ್ಷಕರಾದ ಭವ್ಯವಾಣಿ, ಸುಮಿತ್ರ, ಮೀರ್ ಝಾಹಿದ್ ಸಹಕರಿಸಿದರು. ಕಾರ್ಯಕ್ರಮದ ಅಂಗವಾಗಿ ನಲ್ಕ, ಬಿಮರ್ೂಲೆ, ಅಡ್ಕಸ್ಥಳ ಅಂಗನವಾಡಿಯ ಮತ್ತು ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
 ಮುಖ್ಯ ಶಿಕ್ಷಕ ಶ್ರೀಪತಿ ನೆಲ್ಲಿಕಳಯ ಸ್ವಾಗತಿಸಿ, ವರದಿ ವಾಚಿಸಿದರು. ಶಿಕ್ಷಕಿ ನಳಿನಿ ಬೀಡುಬೈಲು ಕಾರ್ಯಕ್ರಮ ನಿರೂಪಿಸಿದರು. ಉಷಾದೇವಿ ಕುಂಚಿನಡ್ಕ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries