HEALTH TIPS

No title

                  ಜನರನ್ನು  ವಂಚಿಸುತ್ತಿರುವ ಪಿಣರಾಯಿ ಸರಕಾರ
                    ಬಿಜೆಪಿ ಮಂಡಲ ಸಮಿತಿ ಗಂಭೀರ ಆರೋಪ
     ಮಂಜೇಶ್ವರ: ಕಳೆದ ಒಂದು ವರ್ಷದಿಂದ ವಿಧವಾ ಪಿಂಚಣಿ, ಅಂಗವಿಕಲ ಪಿಂಚಣಿ, ವೃದ್ಧಾಪ್ಯ  ಪಿಂಚಣಿ ಸಹಿತ ಅನೇಕ ಸಮಾಜ ಕಲ್ಯಾಣ ಪಿಂಚಣಿಗಳ ಅಜರ್ಿಗಳು ವಿವಿಧ ಪಂಚಾಯತುಗಳಲ್ಲಿ  ಸಾವಿರಗಟ್ಟಲೆ ಲೆಕ್ಕದಲ್ಲಿ  ಜಮೆಯಾಗಿವೆ. ಆದರೆ ಕಂಪ್ಯೂಟರ್ಗಳಲ್ಲಿ  ಈ ಕುರಿತು ಇನ್ನೂ ಸೈಟ್ ಓಪನ್ ಆಗಿಲ್ಲ. ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಬೇಕಾದ ಕೇರಳ ಸರಕಾರವು ಜನರನ್ನು  ಸಂಪೂರ್ಣವಾಗಿ ವಂಚಿಸುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದಶರ್ಿ ಮುರಳೀಧರ ಯಾದವ್ ನಾಯ್ಕಾಪು ಗಂಭೀರ ಆರೋಪ ಮಾಡಿದ್ದಾರೆ.
   ಮಂಜೇಶ್ವರ ಮಂಡಲ ವ್ಯಾಪ್ತಿಯ ಕುಳೂರಿನಲ್ಲಿ ಇತ್ತೀಚೆಗೆ  ಜರಗಿದ ದೀನ್ದಯಾಳ್ ಉಪಾಧ್ಯಾಯರ ಸಂಸ್ಮರಣಾ ಕಾರ್ಯಕ್ರಮವನ್ನು  ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ರಾಜ್ಯದಲ್ಲಿ  ಆಡಳಿತ ನಡೆಸುತ್ತಿರುವ ಎಲ್ಡಿಎಫ್ ನೇತೃತ್ವದ ಪಿಣರಾಯಿ ವಿಜಯನ್ ಸರಕಾರಕ್ಕೆ ಜನರ ಸಮಸ್ಯೆಗಳ ಬಗ್ಗೆ  ಅರಿವಿಲ್ಲ.  ಅಥವಾ ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ  ಸರಕಾರವಾಗಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ಸಾಧನೆಗಳನ್ನು  ನೋಡಿ ಇನ್ನಾದರೂ ಇಲ್ಲಿನ ಸರಕಾರ ಕಲಿತುಕೊಳ್ಳಲಿ ಎಂದು ಮುರಳೀಧರ ಯಾದವ್ ತೀಕ್ಷ್ಣವಾಗಿ ನುಡಿದರು.
   ಸಮಾರಂಭದಲ್ಲಿ  ಪಕ್ಷದ ಬೂತ್ ಸಮಿತಿಯ ಅಧ್ಯಕ್ಷ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮೀಂಜ ಪಂಚಾಯತು ಸಮಿತಿಯ ಅಧ್ಯಕ್ಷ  ಚಂದ್ರಶೇಖರ ಕೋಡಿ ಉಪಸ್ಥಿತರಿದ್ದರು. ಪ್ರಜ್ವಲ್ ಸ್ವಾಗತಿಸಿ, ರವಿ ವಂದಿಸಿದರು. ನೆರೆದಿದ್ದ  ಎಲ್ಲರೂ ದೀನ್ದಯಾಳ್ಜೀ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries