ತಲೇಕಳ ಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವ
ಮಂಜೇಶ್ವರ: ತಲೇಕಳ ಶ್ರೀಸದಾಶಿವ ರಾಮ ವಿಠಲ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಗಳಿಂದ ಮಂಗಳವಾರ ಮಹಾಶಿವರಾತ್ರಿ ಮಹೋತ್ಸವ ನೆರವೇರಿತು.
ಕಾರ್ಯಕ್ರಮಗಳ ಅಂಗವಾಗಿ ಉಷಃಕಾಲ ಪೂಜೆಯೊಂದಿಗೆ ಮೊಕ್ತೇಸರ ವೇ.ಮೂ.ಎಸ್ ವಾಸುದೇವ ಭಟ್ ರವರಿಂದ ಪರಿವಾರ ದೇವರುಗಳಾದ ಶ್ರೀಮಹಾಗಣಪತಿ, ಶ್ರೀರಾಮ ವಿಠಲ, ಶ್ರೀನಾಗ, ಶ್ರೀಗುರು ವೃಂದಾವನ, ಶ್ರೀವನ ಶಾಸ್ತಾರ ಸನ್ನಿಧಿಗಳಲ್ಲಿ ವಿಶೇಷ ಪೂಜಾದಿಗಳು ನಡೆದವು. ಶ್ರೀಸದಾಶಿವ ದೇವರ ಸನ್ನಿದಿಯಲ್ಲಿ ಕ್ಷೀರಾಭಿಷೇಕ, ಧಧಿಯಾಭಿಷೇಕ, ಘೃತಾಭಿಷೇಕ, ಮಧು ಅಭಿಷೇಕ, ಶರ್ಕರಾಭಿಷೇಕ, ಫಲಾಭಿಷೇಕಗಳಿಂದ ಪಂಚಾಮೃತಾಭಿಷೇಕ ನಡೆದು ರುದ್ರಾಭಿಷೇಕ ವಿಶೇಷ ಸೇವೆ ನೆರವೇರಿತು.
ಹಗಲು ರಾತ್ರಿ ಭಜನಾ ಸೇವೆ, ಶಿವಪೂಜೆ, ಮಹಾಪೂಜೆ,ಪ್ರಸಾದ ವಿತರಣೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.
ಮಂಜೇಶ್ವರ: ತಲೇಕಳ ಶ್ರೀಸದಾಶಿವ ರಾಮ ವಿಠಲ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಗಳಿಂದ ಮಂಗಳವಾರ ಮಹಾಶಿವರಾತ್ರಿ ಮಹೋತ್ಸವ ನೆರವೇರಿತು.
ಕಾರ್ಯಕ್ರಮಗಳ ಅಂಗವಾಗಿ ಉಷಃಕಾಲ ಪೂಜೆಯೊಂದಿಗೆ ಮೊಕ್ತೇಸರ ವೇ.ಮೂ.ಎಸ್ ವಾಸುದೇವ ಭಟ್ ರವರಿಂದ ಪರಿವಾರ ದೇವರುಗಳಾದ ಶ್ರೀಮಹಾಗಣಪತಿ, ಶ್ರೀರಾಮ ವಿಠಲ, ಶ್ರೀನಾಗ, ಶ್ರೀಗುರು ವೃಂದಾವನ, ಶ್ರೀವನ ಶಾಸ್ತಾರ ಸನ್ನಿಧಿಗಳಲ್ಲಿ ವಿಶೇಷ ಪೂಜಾದಿಗಳು ನಡೆದವು. ಶ್ರೀಸದಾಶಿವ ದೇವರ ಸನ್ನಿದಿಯಲ್ಲಿ ಕ್ಷೀರಾಭಿಷೇಕ, ಧಧಿಯಾಭಿಷೇಕ, ಘೃತಾಭಿಷೇಕ, ಮಧು ಅಭಿಷೇಕ, ಶರ್ಕರಾಭಿಷೇಕ, ಫಲಾಭಿಷೇಕಗಳಿಂದ ಪಂಚಾಮೃತಾಭಿಷೇಕ ನಡೆದು ರುದ್ರಾಭಿಷೇಕ ವಿಶೇಷ ಸೇವೆ ನೆರವೇರಿತು.
ಹಗಲು ರಾತ್ರಿ ಭಜನಾ ಸೇವೆ, ಶಿವಪೂಜೆ, ಮಹಾಪೂಜೆ,ಪ್ರಸಾದ ವಿತರಣೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.