HEALTH TIPS

No title

            ರಸ್ತೆ ತಡೆ ಹೋರಾಟ ಹಿಂತೆಗೆತ-ಸಂಬಂಪಟ್ಟವರಿಂದ ಭರವಸೆ
   ಪೆರ್ಲ: ಚೆರ್ಕಳ-ಕಲ್ಲಡ್ಕ ಅಂತರ್ ರಾಜ್ಯ ರಸ್ತೆಯ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಖಾಸಗೀ ಬಸ್ ನೌಕರರು ಮತ್ತು ಸಾರ್ವಜನಿಕರು ಹಮ್ಮಿಕೊಂಡಿದ್ದ ಮುಷ್ಕರ ಗುರುವಾರ ನಾಲ್ಕನೇ ದಿನ ಕೊನೆಗೊಳ್ಳುತ್ತಿರುವಂತೆ ಅಧಿಕೃತರು ಭರವಸೆ ನಿಡಿದ್ದರ ಪರಿಣಾಮ ಮುಂದಿನ ಮುಷ್ಕರ ಕೈಬಿಡಲಾಗಿದ್ದು, ಶುಕ್ರವಾರ ಬಸ್ ಗಳು ಸಂಚಾರ ನಡೆಸಿದವು.
  ರಸ್ತೆಯ  ಶೋಚನೀಯಾವಸ್ಥೆ ಪರಿಹರಿಸಲು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂಬ ಭರವಸೆ ನೀಡಿದ್ದರಿಂದ ರಸ್ತೆತಡೆ ಹಿಂತೆಗೆಯಲಾಯಿತು ಎಂದು ಬಸ್ ಕಾಮರ್ಿಕರ ಮುಖಂಡರು ತಿಳಿಸಿರುವರು.
   ಮಹತ್ವದ ಸಭೆ:
    ಕಾಸರಗೋಡಿನಲ್ಲಿರುವ ಲೋಕೋಪಯೋಗಿ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಶಾಸಕರು ಮತ್ತು ಸರ್ವಪಕ್ಷ ಪ್ರತಿನಿಧಿಗಳೊಂದಿಗೆ ಚಚರ್ೆ ನಡೆಸಲಾಯಿತು.  ಚೆರ್ಕಳ- ಕಲ್ಲಡ್ಕ ರಸ್ತೆಯಲ್ಲಿ ತೀವ್ರ ಸಂಚಾರಕ್ಕೆ ಅಯೋಗ್ಯವಾಗಿರುವ ಉಕ್ಕಿನಡ್ಕದಿಂದ ಅಡ್ಕಸ್ಥಳದ ವರೆಗೆ ತಾತ್ಕಾಲಿಕ ಪರಿಹಾರ ರೂಪದ ಕಾಮಗಾರಿಗೆ ಚಚರ್ೆ ನಡೆಸಿ ಒಪ್ಪಿಗೆ ನೀಡಲಾಗಿದೆ.ಈ ಹಿನ್ನೆಲೆಯಲ್ಲಿ ಅಲ್ಲಿ ಕೂಡಲೇ ಪ್ಯಾಚ್ವಕರ್್ಗೆ ಆರಂಭಿಸಲಾಗುವುದೆಂದು ಸಭೆಯಲ್ಲಿ ತೀಮರ್ಾನಿಸಿರುವುದಾಗಿ ತಿಳಿದುಬಂದಿದೆ. ಜೊತೆಗೆ ಚೆರ್ಕಳ-ಕಲ್ಲಡ್ಕ ರಸ್ತೆಯ ಮೆಕ್ಕಾಡಾಂ ಡಾಮರೀಕರಣಕ್ಕೆ 67 ಕೋಟಿ ರೂ.ಗಳ ಅಂಗೀಕಾರ ಲಭಿಸಲಿದೆ ಎಂದು ಶಾಸಕರು ತಿಳಿಸಿರುವರು.
   ಲೋಕೋಪಯೋಗಿ ಇಲಾಖೆ ಅಧಿಕೃತರೊಂದಿಗೆ ನಡೆದ ಸರ್ವಪಕ್ಷ ಸಭೆಯಲ್ಲಿ ಶಾಸಕ ಎನ್ ಎ ನೆಲ್ಲಿಕುನ್ನು, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ರೂಪವಾಣಿ ಆರ್ ಭಟ್, ಸೋಮಶೇಖರ ಜೆ.ಎಸ್, ಸವಿತಾ ಬಾಳಿಕೆ, ಅಬ್ದುಲ್ ರಹಿಮಾನ್ ಪೆರ್ಲ ಸಹಿತ ವಿವಿಧ ಪಕ್ಷಗಳ, ಸಂಘಟನೆಗಳ  ಪ್ರಮುಖರು ಪಾಲ್ಗೊಂಡಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries