HEALTH TIPS

No title

       ಇಂದಿನಿಂದ ಫೆ.27ರ ವರೆಗೆ ರತ್ನಗಿರಿ ಕುದುರೆಕ್ಕಾಳಿ ಭಗವತಿ ಕ್ಷೇತ್ರದ ವಷರ್ಾವಧಿ ಕಳಿಯಾಟ ಮಹೋತ್ಸವ
        ದಿ.ಕಾಳಿಂಗ ನಾವಡರ ಸ್ಮರಣೆಯೊಂದಿಗೆ ಪ್ರದರ್ಶನಗೊಳ್ಳಲಿದೆ ನಾಗಶ್ರೀ-ಚಿತ್ರಾಕ್ಷಿ
   ಬದಿಯಡ್ಕ:  ನೀಚರ್ಾಲು ರತ್ನಗಿರಿ ಶ್ರೀ ಕುದುರೆಕ್ಕಾಳಿ ಭಗವತಿ ಕ್ಷೇತ್ರದ ವಷರ್ಾವಧಿ ಕಳಿಯಾಟ ಮಹೋತ್ಸವ ಇಂದಿನಿಂದ(ಫೆ.24) 27 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
    ಫೆ.24 ರಂದು ಪ್ರಾತ:ಕಾಲ ಗಣಪತಿ ಹೋಮ, ಪ್ರತಿಷ್ಠಾ ದಿನ ಆಚರಣೆ, ಬೆಳಗ್ಗೆ 10 ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 11.30 ರಿಂದ ತುಲಾಭಾರ ಸೇವೆ, ಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. 25 ರಂದು ಬೆಳಗ್ಗೆ 8.30 ರಿಂದ ಭಜನೆ, 11 ರಿಂದ ಕುದುರೆಕ್ಕಾಳಿ ಭಗವತಿ ಪೂಜೆ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 4 ರಿಂದ ಬಬ್ಬರ್ಯ ಕಟ್ಟೆಯಲ್ಲಿ ತಂಬಿಲ, ರಾತ್ರಿ 7.30 ರಿಂದ ಬಾಲ ಕಲಾವಿದರಿಂದ ನೃತ್ಯ ಕಾರ್ಯಕ್ರಮ, 9 ಕ್ಕೆ ಶ್ರೀ ವಿಷ್ಣುಮೂತರ್ಿ ದೈವದ ಭಂಡಾರ ಹೊರಡುವುದು, 10 ರಿಂದ ಶ್ರೀ ವಿಷ್ಣುಮೂತರ್ಿ ದೈವದ ಕುಳಿಚ್ಚಾಟ ಜರಗಲಿದೆ.
   ಫೆ.26 ರಂದು ಬೆಳಗ್ಗೆ 10 ರಿಂದ ಶ್ರೀ ವಿಷ್ಣುಮೂತರ್ಿ ದೈವದ ನೇಮೋತ್ಸವ, ಶ್ರೀ ಮುಡಿ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನದಾನ, ಅಪರಾಹ್ನ 2.30 ರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 7.30 ರಿಂದ ಶ್ರೀ ರಕ್ತ ಚಾಮುಂಡಿ ದೈವದ ಭಂಡಾರ ಇಳಿಯುವುದು, 8 ಕ್ಕೆ ಯಕ್ಷಗಾನ ಬಯಲಾಟ, 9 ಕ್ಕೆ ಶ್ರೀ ದೈವದ ತೊಡಂಙಲ್, 27 ರಂದು ಪೂವರ್ಾಹ್ನ 10 ರಿಂದ ಶ್ರೀ ರಕ್ತ ಚಾಮುಂಡಿ ದೈವದ ನೇಮೋತ್ಸವ, ಮಧ್ಯಾಹ್ನ ಶ್ರೀ ಮುಡಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 3 ರಿಂದ ಶ್ರೀ ಗುಳಿಗ ದೈವದ ಕೋಲ, ಪ್ರಸಾದ ವಿತರಣೆಯೊಂದಿಗೆ ವಷರ್ಾವಧಿ ಕಳಿಯಾಟ ಮಹೋತ್ಸವ ಸಂಪನ್ನವಾಗಲಿದೆ.
    ಫೆ.23 ರಂದು ಪೂವರ್ಾಹ್ನ 9 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಚಂಡಿಕಾ ಹೋಮ ಮತ್ತು ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿಮರ್ಿಸಿದ ಗೋಪುರದ ಸಮರ್ಪಣಾ ಕಾರ್ಯಕ್ರಮವು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿದೆ.
    ವಿಶೇಷ ಆಕರ್ಷಣೆ ನೀಡಲಿರುವ ಕಾಳಿಂಗ ನಾವಡರ ನಾಗಶ್ರೀ- ಚಿತ್ರಾಕ್ಷಿ ಬಡಗು ಬಯಲಾಟ:
    ಕಳಿಯಾಟ ಮಹೋತ್ಸವದ ಅಂಗವಾಗಿ ಫೆ. 25 ರಂದು ಭಾನುವಾರ ರಾತ್ರಿ 8 ರಿಂದ ಯಕ್ಷಲೋಕದ ಮಹಾನ್ ಚೇತನ ದಿ.ಕಾಳಿಂಗ ನಾವಡರನ್ನು ನೆನಪಿಸುವ ನಾಗಶ್ರೀ ಹಾಗೂ ಚಿತ್ರಾಕ್ಷಿ ಪ್ರಸಂಗಗಳ ಬಯಲಾಟವನ್ನು ವಿಶೇಷವಾಗಿ ಪ್ರದಶರ್ಿಸಲಾಗುವುದು. ಜಲವಳ್ಳಿಯ ಕಲಾಧರ ಯಕ್ಷರಂಗ ಪ್ರಸ್ತುತಪಡಿಸುವ ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸನ್ನ ಭಟ್ ಬಾಳ್ಕಲ್, ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಮತ್ತು ಎನ್.ಜಿ.ಹೆಗಡೆ ಎಲ್ಲಾಪುರ, ಗಜಾನನ ಭಂಡಾರಿ ಬೀಳ್ಗೆಲೆ, ಗಣೇಶ್ ಗಾಂವ್ಕರ್, ವಿಶ್ವೇಶ್ವರ ಕೆಸರುಕೊಪ್ಪ, ಮುಮ್ಮೇಳದ ಸ್ತ್ರೀವೇಶಧಾರಿಗಳಾಗಿ ನೀಲ್ಕೋಡು ಶಂಕರ ಹೆಗಡೆ, ಗಣೇಶ್ ನಾಯ್ಕ ಮುಗ್ಬಾ, ನಾಗರಾಜ ದೇವಮಕ್ಕಿ, ಮಂಜುನಾಥ ಕೆರೆವಳ್ಳಿ, ಹಾಸ್ಯಗಾರರಾಗಿ ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀಧರ ಭಟ್ ಕಾಸರ್ಕೋಡು ಸಹಕರಿಸುವರು. ಇತರ ಪಾತ್ರಗಳಲ್ಲಿ ಬಳ್ಕೂರು ಕೃಷ್ಣ ಯಾಜಿ, ಸುಬ್ರಹ್ಮಣ್ಯ ಚಿಟ್ಟಾಣಿ, ಜಲವಳ್ಳಿ ವಿದ್ಯಾಧರ ರಾವ್, ಕಾತರ್ಿಕ್ ಚಿಟ್ಟಾಣಿ, ನಾಗೇಂದ್ರ ಭಟ್ ಮೂರೂರು, ವಿನಯ ಭಟ್ ಬೇರೊಳ್ಳಿ, ಮಹಾಬಲೇಶ್ವರ ಗೌಡ, ನಾಗೇಶ್ ಕುಳಮನೆ, ಸುಬ್ರಹ್ಮಣ್ಯ ಗೌಡ, ಶ್ರೀಕಾಂತ್ ಪೆಲತ್ತೂರು, ಗೌರೀಶ ಗುಣವಂತೆ, ನಿರಂಜನ ವಾನಳ್ಳಿ ಸಹಿತ ಇತರ ಕಲಾವಿದರು ವಿವಿಧ ಪಾತ್ರಗಳಿಗೆ ಜೀವತುಂಬುವರು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries