ಖಾಸಗೀ ಬಸ್ಗಳ ಅನಿಧರ್ಿಷ್ಟ ಮುಷ್ಕರ ಇಂದು ಎರಡನೇ ದಿನಕ್ಕೆ- ಹೆಚ್ಚುವರಿ ಸರಕಾರಿ ಬಸ್ಗಳು ಸಂಚಾರಕ್ಕೆ ಸೇರ್ಪಡೆ
ಕಾಸರಗೋಡು: ವಿವಿಧ ಬೆಡಿಕೆ ಮುಂದಿರಿಸಿ ಖಾಸಗೀ ಬಸ್ ಮಾಲಕರು ಶುಕ್ರವಾರದಿಂದ ಆರಂಭಿಸಿದ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿರಿಸುವುದರೊಂದಿಗೆ ಗ್ರಾಮೀಣ ಪ್ರದೇಶಗಳ-ಒಳನಾಡುಗಳ ಜನಸಾಮಾನ್ಯರ ದೈನಿಕ ಜೀವನ ಹಳಿತಪ್ಪಿದಂತಾಗಿದೆ.
ಜನಸಾಮಾನ್ಯರ ಸಂಚಾರ ಸಮಸ್ಯೆ ಪರಿಹರಿಸಲು ರಾಜ್ಯ ರಸ್ತೆ ಸಾರಿಗೆಯು ನಿಗದಿತ ಸಂಚಾರದ ಹೊರತಾಗಿ ತಾತ್ಕಾಲಿಕ ಹೊಸ ಸಂಚಾರಕ್ಕೆ ಮುಂದಾಗಿದೆ. ಜನರ ಸಂಚಾರ ಸಮಸ್ಯೆಗೆ ಪರಿಹಾರ ಒದಗಿಸುವುದರ ಜೊತೆಗೆ ರಾಜ್ಯ ರಸತೆ ಸಾರಿಗೆ ಅನುಭವಿಸುತ್ತಿರುವ ನಷ್ಟವನ್ನು ಈ ಮೂಲಕ ಒಂದಷ್ಟು ಸರಿದೂಗಿಸಲು ಇಲಾಖೆ ಮುಂದಾದಂತಿದೆ.
ತಾತ್ಕಾಲಿಕ ಹೊಸ ಸಂಚಾರ ನಿರ್ವಹಣೆಗಾಗಿ ಎಲ್ಲಾ ಜಿಲ್ಲೆಗಳ ಸಂಪೂರ್ಣ ಬಸ್ ಗಳನ್ನು ಇಂದಿನಿಂದ ರಸ್ತೆಗಿಳಿಸುತ್ತಿದ್ದು, ರಸ್ತೆ ಸಾರಿಗೆ ನೌಕರರಿಗೆ ಹೆಚ್ಚುವರಿ ಕರ್ತವ್ಯಕ್ಕೂ ಇಲಾಖೆ ಆದೇಶಿಸಿದೆ. ಈ ಮೂಲಕ 219 ಹೆಚ್ಚುವರಿ ಸಂಚಾರವನ್ನು 5542 ಬಸ್ಗಳ ಮೂಲಕ ಇಂದಿನಿಂದ ಮುಷ್ಕರ ಮುಗಿಯುವಲ್ಲಿಯವರೆಗೆ ನೀಡಲಿದೆ.
ಕಾಸರಗೋಡು: ವಿವಿಧ ಬೆಡಿಕೆ ಮುಂದಿರಿಸಿ ಖಾಸಗೀ ಬಸ್ ಮಾಲಕರು ಶುಕ್ರವಾರದಿಂದ ಆರಂಭಿಸಿದ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿರಿಸುವುದರೊಂದಿಗೆ ಗ್ರಾಮೀಣ ಪ್ರದೇಶಗಳ-ಒಳನಾಡುಗಳ ಜನಸಾಮಾನ್ಯರ ದೈನಿಕ ಜೀವನ ಹಳಿತಪ್ಪಿದಂತಾಗಿದೆ.
ಜನಸಾಮಾನ್ಯರ ಸಂಚಾರ ಸಮಸ್ಯೆ ಪರಿಹರಿಸಲು ರಾಜ್ಯ ರಸ್ತೆ ಸಾರಿಗೆಯು ನಿಗದಿತ ಸಂಚಾರದ ಹೊರತಾಗಿ ತಾತ್ಕಾಲಿಕ ಹೊಸ ಸಂಚಾರಕ್ಕೆ ಮುಂದಾಗಿದೆ. ಜನರ ಸಂಚಾರ ಸಮಸ್ಯೆಗೆ ಪರಿಹಾರ ಒದಗಿಸುವುದರ ಜೊತೆಗೆ ರಾಜ್ಯ ರಸತೆ ಸಾರಿಗೆ ಅನುಭವಿಸುತ್ತಿರುವ ನಷ್ಟವನ್ನು ಈ ಮೂಲಕ ಒಂದಷ್ಟು ಸರಿದೂಗಿಸಲು ಇಲಾಖೆ ಮುಂದಾದಂತಿದೆ.
ತಾತ್ಕಾಲಿಕ ಹೊಸ ಸಂಚಾರ ನಿರ್ವಹಣೆಗಾಗಿ ಎಲ್ಲಾ ಜಿಲ್ಲೆಗಳ ಸಂಪೂರ್ಣ ಬಸ್ ಗಳನ್ನು ಇಂದಿನಿಂದ ರಸ್ತೆಗಿಳಿಸುತ್ತಿದ್ದು, ರಸ್ತೆ ಸಾರಿಗೆ ನೌಕರರಿಗೆ ಹೆಚ್ಚುವರಿ ಕರ್ತವ್ಯಕ್ಕೂ ಇಲಾಖೆ ಆದೇಶಿಸಿದೆ. ಈ ಮೂಲಕ 219 ಹೆಚ್ಚುವರಿ ಸಂಚಾರವನ್ನು 5542 ಬಸ್ಗಳ ಮೂಲಕ ಇಂದಿನಿಂದ ಮುಷ್ಕರ ಮುಗಿಯುವಲ್ಲಿಯವರೆಗೆ ನೀಡಲಿದೆ.