HEALTH TIPS

No title

           ಪ್ರೋಟೋಕಾಲ್ ವಿವಾದ-ಶಾಲಾ ಕಟ್ಟಡ ನಿಮರ್ಾಣ ಕಾಮಗಾರಿ ಉದ್ಘಾಟನೆ ಮುಂದೂಡಿಕೆ
   ಕುಂಬಳೆ: ಪ್ರೋಟೋಕಾಲ್ ಪ್ರಕಾರ ವಿವಾದ ಉಂಟಾದುದರಿಂದ ಗುರುವಾರ ಕುಂಬಳೆ ಸರಕಾರಿ ಶಾಲೆಯ ನೂತನ ಕಟ್ಟಡ ನಿಮರ್ಾಣ ಕಾಮಗಾರಿ ಉದ್ಘಾಟನಾ ಸಮಾರಂಭವನ್ನು ಏಕಾಏಕಿ ಮುಂದೂಡಿದ ಘಟನೆ ನಡೆದಿದೆ.
   ಪ್ರಭಾಕರನ್ ಕಮಿಶನ್ ನಿದರ್ೇಶಿಸಿರುವುದರ ಆಧಾರದಲ್ಲಿ 1 ಕೋಟಿ ರೂ.ಗಳ ಬೃಹತ್ ಯೋಜನೆಯಂತೆ ಕುಂಬಳೆ ಸರಕಾರಿ ಶಾಲಾ ನೂತನ ಕಟ್ಟಡ ನಿಮರ್ಾಣಕ್ಕೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಗುರುವಾರ ದಿನ ನಿಶ್ಚಯಿಸಲಾಗಿತ್ತು. ಜೊತೆಗೆ ಜಿ.ಪಂ.23 ಲಕ್ಷ ರೂ. ವ್ಯಯಿಸಿ ನಿಮರ್ಿಸಿದ ತರಗತಿ ಕೊಠಡಿಗಳ ಉದ್ಘಾಟನೆಯನ್ನೂ, ಶಾಸಕರ ನಿಧಿಯಿಂದ ನಿಮರ್ಿಸಿದ ಸ್ಮಾಟರ್್ ತರಗತಿಯ ಉದ್ಘಾಟನೆಯನ್ನೂ  ಈ ಸಂದರ್ಭ ನಿರ್ವಹಿಸಲು ಉದ್ದೇಶಿಸಲಾಗಿತ್ತು.
  ಆದರೆ ಉದ್ಘಾಟನೆಗೆ ಸಂಬಂಧಿಸಿ ವಿವಾದ ಉಂಟಾದುದರಿಂದ ಆ ಬಳಿಕ ವಿವಾದ ತಣ್ಣಗಾಗಿಸಲು ಶಾಸಕರ ನಿಧಿಯಿಂದ ನಿಮರ್ಿಸಿದ ಸ್ಮಾಟರ್್ ತರಗತಿಯ ಉದ್ಘಾಟನೆಯನ್ನು ಗುರುವಾರವೂ ಮಿಕ್ಕುಳಿದವುಗಳ ಉದ್ಘಾಟನೆಯನ್ನು ಬೇರೆ ದಿನ ನಡೆಸಲು ತೀಮರ್ಾನಿಸಲಾಯಿತು. ಆದರೆ ಈ ಬದಲಾವಣೆ ತಮಗೆ ತಿಳಿದಿಲ್ಲವೆಂದು ಗುರುವಾರ ಶಾಲಾ ಅಧಿಕೃತರು ತಿಳಿಸಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು.ಜೊತೆಗೆ ಎರಡನೇ ಬಾರಿ ಹೊರತಂದ ಕಾರ್ಯಕ್ರಮದ ಕರೆಯೋಲೆಯಲ್ಲಿ ಗ್ರಾ.ಪಂ.ಅಧ್ಯಕ್ಷ, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷರೇ ಮೊದಲಾದ ಪ್ರಮುಖರ ಹೆಸರನ್ನು ಕೈಬಿಟ್ಟು ಪ್ರೊಟೋಕಾಲ್ ಮರೆತು ಹೊರತಂದಿರುವುದು ವ್ಯಾಪಕ ಅಸಂತುಷ್ಟಿಗೆ ಕಾರಣವಾಯಿತು. ಈ ಎಲ್ಲಾ ವಿವಾದದ ಕಾರಣ ಗುರುವಾರದ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲಾಗಿರುವುದಾಗಿ ಶಾಲಾ ಅಧಿಕೃತರು ತಿಳಿಸಿದ್ದು, ಕಾರ್ಯಕ್ರಮದ ಯಶಸ್ವಿಗೆ ನಡೆಸಿದ ತಯಾರಿ, ಕಾಮಗಾರಿ ಮುಗಿದು ಕೆಲವು ತಿಂಗಳೇ ಕಳೆದಿರುವ ಸ್ಮಾಟರ್್ ತರಗತಿ, ಜಿ.ಪಂ. ಅನುದಾನದ ತರಗತಿ ಕೊಠಡಿಗಳಿಗೆ ಕೊನೆಗೂ ಉದ್ಘಾಟನಾ ಭಾಗ್ಯ ಲಭಿಸದೆ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಬಂದಿರುವುದನ್ನು ಸಾರ್ವಜನಿಕರು ಟೀಕಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries