HEALTH TIPS

No title

         ನಾಳೆ ಶ್ರೀಕ್ಷೇತ್ರ ಮಲೆತ್ತಡ್ಕದಲ್ಲಿ ಶಿಲಾನ್ಯಾಸ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ.)
    ಪೆರ್ಲ: ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ, ಮಲೆತ್ತಡ್ಕ-ಸ್ವರ್ಗ ನವನಿಮರ್ಾಣ ಕಾರ್ಯಗಳು ಪೂರ್ಣಗೊಳ್ಳುತ್ತಿದ್ದು ಫೆ. 17ರಂದು ಶನಿವಾರ ಬೆಳಿಗ್ಗೆ  7.58 ರ ಕುಂಭಲಗ್ನ ಸುಮುಹೂರ್ತದಲ್ಲಿ ಅರ್ಚಕರ ನಿವಾಸಕ್ಕೆ ಶಿಲಾನ್ಯಾಸ ಮತ್ತು ಎಪ್ರಿಲ್ ತಿಂಗಳ 18 ರಿಂದ 24 ರ ತನಕ ಜರಗಲಿರುವ ನಾಗ ಪ್ರತಿಷ್ಟೆ , ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆ ಸಮಾರಂಭಗಳ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಲಿದೆ.
  ಕಾರ್ಯಕ್ರಮಗಳ ಅಂಗವಾಗಿ ಶನಿವಾರ ಬೆಳಿಗ್ಗೆ 7ಕ್ಕೆ ಕ್ಷೇತ್ರದ ಕಿರಿಯ ತಂತ್ರಿಗಳನ್ನು ಬರಮಾಡಿಕೊಳ್ಳುವುದು, 7.58 ರ ಕುಂಭಲಗ್ನ ಸುಮುಹೂರ್ತದಲ್ಲಿ 'ಅರ್ಚಕರ ನಿವಾಸಕ್ಕೆ' ತಂತ್ರಿವರ್ಯರಿಂದ ಶಿಲಾನ್ಯಾಸ, 8.30 ಕ್ಕೆ ಶ್ರೀ ದೈವಕ್ಕೆ ಸಿಯಾಳ ಸಮರ್ಪಣೆ, ಪ್ರಾರ್ಥನೆ, 10 ಕ್ಕೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಲಿದ್ದು,ತುಳು ಸಾಹಿತಿ  ರಾಜಶ್ರೀ ಟಿ.ರೈ ಪೆರ್ಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಖ್ಯಾತ ಆಯುವರ್ೇದ ತಜ್ಞ ಡಾ. ಜಯಗೋವಿಂದ ಉಕ್ಕಿನಡ್ಕ ಉಪಸ್ಥಿತರಿರುವರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ತಡೆಗಲ್ಲು ರಾಮಕೃಷ್ಣ ಭಟ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸುವರು. ಬಳಿಕ ಮಧ್ಯಾಹ್ನ ಪ್ರಸಾದ ಭೋಜನ ನಡೆಯಲಿದೆ ಎಮದು ಕ್ಷೇತ್ರದ ಪ್ರಕಟಣೆಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries