HEALTH TIPS

No title

               ಒಮಾನ್ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ್ದು ಕಾಸರಗೋಡಿನ ಕನ್ನಡಿಗ
    ಕಾಸರಗೋಡು: ಕೊಲ್ಲಿರಾಷ್ಟ್ರದ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರಮೋದಿಯವರನ್ನು ಮಸ್ಕತ್ ದೇಶದ ಒಮಾನ್ನ ಶಿವ ದೇವಾಲಯದ ಅರ್ಚಕ ಕಾಸರಗೋಡಿನ ಕನ್ನಡಿಗ ಬೇಳ ಶಂಕರನಾರಾಯಣ ಅಡಿಗ ಸ್ವಾಗತಿಸಿರುವುದು ಗಡಿನಾಡಿಗೆ ಹೆಮ್ಮೆ ತಮದಿದೆ. 
  ಮೋದಿ ಅವರು 125 ವರ್ಷಗಳ ಹಿಂದೆ ಗುಜರಾತಿನ ವ್ಯಾಪಾರಿಗಳು ನಿಮರ್ಿಸಿದ ಶಿವ ದೇವಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಕಾಸರಗೋಡಿನ ಕನ್ನಡಿಗ ಶಂಕರನಾರಾಯಣ ಅಡಿಗ ಅವರು ಮೋದಿ ಅವರನ್ನು ದೇವಾಲಯಕ್ಕೆ  ಸಾಂಪ್ರದಾಯಿಕವಾಗಿ ಸ್ವಾಗತಿಸಿ ಪೂಜಾ ವಿಧಿವಿಧಾನ ನೆರವೇರಿಸಿ ಆರತಿ ಬೆಳಗಿ ಪ್ರಸಾದ ನೀಡುವ ಭಾಗ್ಯ ಲಭಿಸಿದ್ದು ಕಾಸರಗೋಡಿನ ಕನ್ನಡಿಗ ಪುರೋಹಿತ ಅಡಿಗರಿಗೆ.
  ಈ ಭಾಗ್ಯ ಅವರಿಗೆ ಲಭಿಸಿದ್ದು ಅವರ ಧಾಮರ್ಿಕ ನಿಷ್ಠಗೆ ದೇವರು ನೀಡಿದ ವರವೆಂದೇ ಅವರು ಸಂತೋಷದಿಂದ ಹೇಳಿದ್ದಾರೆ. ಮಂಜೇಶ್ವರ ಬಿಜೆಪಿ ನೇತಾರ ಆದಶರ್್ ಬಿ.ಎಂ. ಅವರ ಸ್ನೇಹಿತರಾಗಿರುವ ಅಡಿಗರು ತಮ್ಮ ಅನುಭವ ಹಂಚಿಕೊಂಡರು. ಶಂಕರನಾರಾಯಣ ಅಡಿಗರು ಕಾಸರಗೋಡಿನ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾಜರ್ುನ ದೇವಸ್ಥಾನದ ಪ್ರಧಾನ ಅರ್ಚಕ ರಾಧಾಕೃಷ್ಣ ಅಡಿಗ ಅವರ ಪುತ್ರ. ಅವರು ಕೂಡಾ ಮಲ್ಲಿಕಾಜರ್ುನ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ 2006 ರಿಂದ 2010 ರ ವರೆಗೆ ಸೇವೆ ಸಲ್ಲಿಸಿದ್ದರು. ನಂತರ 2014 ರಲ್ಲಿ ಮಸ್ಕತ್ನಲ್ಲಿರುವ ಶಿವ ಕ್ಷೇತ್ರದ ಮನವಿಯ ಮೇರೆಗೆ ಅಲ್ಲಿ ತಮ್ಮ ಅರ್ಚಕ ವೃತ್ತಿ ಆರಂಭಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries