HEALTH TIPS

No title

                     ಯೋಗದಿಂದ ಆರೋಗ್ಯ
    ಬದಿಯಡ್ಕ: ಯೋಗ ವಿದ್ಯೆ ಭಾರತೀಯ ಸಂಸ್ಕೃತಿ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಯೋಗಾಭ್ಯಾಸ ಸುಖ ಜೀವನಕ್ಕೆ ಸೋಪಾನವಾಗಿದೆ ಎಂದು ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅಭಿಪ್ರಾಯ  ವ್ಯಕ್ತಪಡಿಸಿದರು.
   ಇತ್ತೀಚೆಗೆ ನೀಚರ್ಾಲಿನ ಮಹಾಜನ ವಿದ್ಯಾಸಂಸ್ಥೆಯಲ್ಲಿ ಆರಂಭಗೊಂಡ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
   ವರ್ತಮಾನದ ಜಂಜಡಗಳ ಬದುಕು ಮತ್ತು ವಿಷಾಹಾರದ ಸೇವನೆಯ ಕಾರಣ ಆರೋಗ್ಯ ಸ್ಥಿತಿಯ ಅಸಮತೋಲನ ವ್ಯಾಪಕ ಅಸಂತೋಷಕ್ಕೆ ಕಾರಣವಾಗಿದ್ದು, ಇದರಿಂದ ಹೊರಬರಲು ಯೋಗ-ಪ್ರಾಣಾಯಾಮಗಳ ಅಭ್ಯಸಿಸುವಿಕೆ ಪರಿಣಾಮಕಾರಿ ಎಂದ ಅವರು ಪ್ರತಿಯೊಬ್ಬರೂ ಸಮರ್ಪಕ ತರಬೇತುದಾರರಿಂದ ಅಗತ್ಯ ನಿದರ್ೇಶನ ಪಡೆದುಕೊಳ್ಳುವ ಅಗತ್ಯ ಇದೆ ಎಂದು ಅವರು ತಿಳಿಸಿದರು.
      ಡಾ.ಮಾಲತಿ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಜಿ. ರಾಮ ಭಟ್ ಪೆರ್ಲ ಮತ್ತು
ಶಾಲಾ ಶಿಕ್ಷಕಿ ಲಲಿತ ಕುಮಾರಿ ಯನ್. ಯಚ್ ಶುಭಹಾರೈಸಿದರು.
 ಶಾರದಾ ಎಸ್. ಭಟ್ ಕಾಡಮನೆ ಅವರ ಉಸ್ತುವಾರಿಲ್ಲಿ ತರಬೇತಿ ಶಿಬಿರ  ಆಯೋಜಿಸಲಾಗಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries