HEALTH TIPS

No title

         ತೀಯಾ ಸಮಾಜದ ದ್ವಿತೀಯ ವಾಷರ್ಿಕೋತ್ಸವ
   ಮಂಜೇಶ್ವರ: ಉದ್ಯಾವರ ಮಾಡದ ತೀಯಾ ಸಮಾಜದ ದ್ವಿತೀಯ ವಾಷರ್ಿಕೋತ್ಸವ ತೀಯಾ ಸಮಾಜದ ಸಭಾಭವನದಲ್ಲಿ ಇತ್ತೀಚೆಗೆ ಜರಗಿತು. ಬಡಾಜೆ ಬೂಡು ಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಗಣಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಜರಗಿತು.
  ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಾವರ ಶ್ರೀ ದೈವಗಳ ದರ್ಶನ ಪಾತ್ರಿ ರಾಜಬೆಳ್ಚಡ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ತುಳು ಚಿತ್ರ ನಟ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಹಾಗೂ ಉಳ್ಳಾಲ ಸೈಂಟ್ ಸೆಬಾಸ್ಟಿನ್ ಕಾಲೇಜಿನ ಕನ್ನಡ ವಿಭಾಗ ಉಪನ್ಯಾಸಕ ಅರುಣ ಉಳ್ಳಾಲ ಉಪಸ್ಥಿತರಿದ್ದು ಮಾತನಾಡಿದರು. ಮಂಜೇಶ್ವರ ಗ್ರಾಮ ಪಂಚಾಯತು ಸದಸ್ಯೆ ಶಶಿಕಲಾ ಪ್ರಕಾಶ, ಶಿವಮೊಗ್ಗ ಶಿರಗೊಪ್ಪದ ಕನರ್ಾಟಕ ಬ್ಯಾಂಕ್ ಪ್ರಬಂಧಕ ನವೀನ್ ಕುಮಾರ್ ಉದ್ಯಾವರ  ಹಾಗೂ ಸಮಾಜದ ಗುರಿಕಾರರು ಉಪಸ್ಥಿತರಿದ್ದರು. 
    ಕೇಶವ ಮಾಡ ಸ್ವಾಗತಿಸಿ, ಪವಿತ್ರ ಕೇಶವ ಮಾಡ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries