ಸಮಾಜ ಸಂಘಟಿತವಾದರೆ ಯಶಸ್ಸು ಸಾಧ್ಯ.
ಮುಳ್ಳೇರಿಯ: ಪ್ರತಿಯೊಂದು ಸಮಾಜದ ಜನರೂ ಸಂಘಟಿತರಾದರೆ ಅದು ಯಶಸ್ಸಿಗೆ ದಾರಿ. ಯಾವುದೇ ಸಮಾಜ ಬಾಂಧವರು ಒಗ್ಗಟ್ಟಿನಿಂದ, ಸೌಹಾರ್ದ ಮನೋಭಾವದಿಂದ ಒಂದಾಗಿ ಕಾರ್ಯನಿರ್ವಹಿಸಿದರೆ ಸಮಾಜದ ಅಭಿವೃದ್ಧಿ ಹಾಗೂ ಉನ್ನತಿಗೆ ಪೂರಕ. ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಒಗ್ಗಟ್ಟು ನಮ್ಮ ಮಂತ್ರವಾಗಿರಬೇಕು. ಅವಕಾಶಗಳನ್ನು ಉಪಯೋಗಿಸುವ ಮನೋಭಾವ ಬೆಳೆಸಿಕೊಂಡು ಪರಸ್ಪರ ಹೊಂದಿಕೊಂಡು ಬದುಕುವ ಕಲೆಯನ್ನು ಕರಗತಮಾಡಿಕೊಂಡಾಗ ಮಾತ್ರ ಸಮಾಜದ ಚಟುವಟಿಕೆಗಳು ಅಡೆತಡೆಗಳಿಲ್ಲದೆ ನಡೆಯಲು ಸಾಧ್ಯ ಎಂದು ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ದೇಲಂಪಾಡಿ ಪಂಚಾಯತಿ ಘಟಕದ ಅಧ್ಯಕ್ಷ ರಾಮ ನಾಯ್ಕ.ಪಿ ಅಭಿಪ್ರಾಯಪಟ್ಟರು.
ಅವರು ಕೇರಳ ಮರಾಟಿ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ದೇಲಂಪಾಡಿ ಪಂಚಾಯತಿ ಸಮಿತಿಯ ನೇತೃತ್ವದಲ್ಲಿ ಅಡೂರು ಗೋರಿಗದ್ದೆ ಲಾಗೇಲೋ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾದ ಕೇರಳ ಹಾಗೂ ಕನರ್ಾಟಕ ರಾಜ್ಯದ ಸಮಾಜ ಬಾಂಧವರ ಪ್ರತಿನಿಧಿ ಸಮ್ಮೇಳನ, ಧಾಮರ್ಿಕ ಮಹಾಸಭೆ ಹಾಗೂ ಸಾಮೂಹಿಕ ಶ್ರೀ ಮಹಾಮ್ಮಾಯಿ ಅಮ್ಮನವರ ಗೋಂದೋಳು ಪೂಜೆಯ ಕಾರ್ಯಕ್ರಮಕ್ಕೆ ಧ್ವಜಾರೋಹಣಗೈದು ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಬಾಂಧವರು ಮತ್ತು ಸಮಾಜದ ನೇತಾರರು ಉಪಸ್ಥಿತರಿದ್ದರು. ಬಳಿಕ ಅಡೂರು ಗ್ರಾಮ ಪಂಚಾಯತು ಕಾಯರ್ಾಲಯ ಸಮೀಪದಿಂದ ಲಾಗೇಲೋ ಮಂಟಪಕ್ಕೆ ಹಸಿರುವಾಣಿ ಹೊರೆಕಾಣಿಕೆ, ಉಗ್ರಾಣ ತುಂಬಿಸುವ ಕಾರ್ಯಕ್ರಮಗಳು ಜರಗಿತು. ಮರಾಟಿ ಸಮುದಾಯ ರ್ಯಾಲಿ ಅಡೂರು ಮಹಾದ್ವಾರ ಕಟ್ಟೆಯಿಂದ ಹೊರಟು ಬೆಡಿಕಟ್ಟೆ ದಾರಿಯಾಗಿ ಆಕರ್ಷಕ ಮೆರವಣಿಗೆಯ ಮೂಲಕ ಲಾಗೇಲೋ ಮಂಟಪ ತಲುಪಿತು. ಆ ಬಳಿಕ ಶ್ರೀ ದೇವಿಯ ಭಂಡಾರ ಆಗಮನ, ಗೋಂದೋಳು ಪೂಜಾ ಪಾತ್ರಿಗಳಿಗೆ ಸ್ವಾಗತ ಮುಂತಾದ ಕಾರ್ಯಕ್ರಮಗಳೊಂದಿಗೆ ಗೋಂದೋಳು ಪೂಜೆಯ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು.
ಮುಳ್ಳೇರಿಯ: ಪ್ರತಿಯೊಂದು ಸಮಾಜದ ಜನರೂ ಸಂಘಟಿತರಾದರೆ ಅದು ಯಶಸ್ಸಿಗೆ ದಾರಿ. ಯಾವುದೇ ಸಮಾಜ ಬಾಂಧವರು ಒಗ್ಗಟ್ಟಿನಿಂದ, ಸೌಹಾರ್ದ ಮನೋಭಾವದಿಂದ ಒಂದಾಗಿ ಕಾರ್ಯನಿರ್ವಹಿಸಿದರೆ ಸಮಾಜದ ಅಭಿವೃದ್ಧಿ ಹಾಗೂ ಉನ್ನತಿಗೆ ಪೂರಕ. ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಒಗ್ಗಟ್ಟು ನಮ್ಮ ಮಂತ್ರವಾಗಿರಬೇಕು. ಅವಕಾಶಗಳನ್ನು ಉಪಯೋಗಿಸುವ ಮನೋಭಾವ ಬೆಳೆಸಿಕೊಂಡು ಪರಸ್ಪರ ಹೊಂದಿಕೊಂಡು ಬದುಕುವ ಕಲೆಯನ್ನು ಕರಗತಮಾಡಿಕೊಂಡಾಗ ಮಾತ್ರ ಸಮಾಜದ ಚಟುವಟಿಕೆಗಳು ಅಡೆತಡೆಗಳಿಲ್ಲದೆ ನಡೆಯಲು ಸಾಧ್ಯ ಎಂದು ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ದೇಲಂಪಾಡಿ ಪಂಚಾಯತಿ ಘಟಕದ ಅಧ್ಯಕ್ಷ ರಾಮ ನಾಯ್ಕ.ಪಿ ಅಭಿಪ್ರಾಯಪಟ್ಟರು.
ಅವರು ಕೇರಳ ಮರಾಟಿ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ದೇಲಂಪಾಡಿ ಪಂಚಾಯತಿ ಸಮಿತಿಯ ನೇತೃತ್ವದಲ್ಲಿ ಅಡೂರು ಗೋರಿಗದ್ದೆ ಲಾಗೇಲೋ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾದ ಕೇರಳ ಹಾಗೂ ಕನರ್ಾಟಕ ರಾಜ್ಯದ ಸಮಾಜ ಬಾಂಧವರ ಪ್ರತಿನಿಧಿ ಸಮ್ಮೇಳನ, ಧಾಮರ್ಿಕ ಮಹಾಸಭೆ ಹಾಗೂ ಸಾಮೂಹಿಕ ಶ್ರೀ ಮಹಾಮ್ಮಾಯಿ ಅಮ್ಮನವರ ಗೋಂದೋಳು ಪೂಜೆಯ ಕಾರ್ಯಕ್ರಮಕ್ಕೆ ಧ್ವಜಾರೋಹಣಗೈದು ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಬಾಂಧವರು ಮತ್ತು ಸಮಾಜದ ನೇತಾರರು ಉಪಸ್ಥಿತರಿದ್ದರು. ಬಳಿಕ ಅಡೂರು ಗ್ರಾಮ ಪಂಚಾಯತು ಕಾಯರ್ಾಲಯ ಸಮೀಪದಿಂದ ಲಾಗೇಲೋ ಮಂಟಪಕ್ಕೆ ಹಸಿರುವಾಣಿ ಹೊರೆಕಾಣಿಕೆ, ಉಗ್ರಾಣ ತುಂಬಿಸುವ ಕಾರ್ಯಕ್ರಮಗಳು ಜರಗಿತು. ಮರಾಟಿ ಸಮುದಾಯ ರ್ಯಾಲಿ ಅಡೂರು ಮಹಾದ್ವಾರ ಕಟ್ಟೆಯಿಂದ ಹೊರಟು ಬೆಡಿಕಟ್ಟೆ ದಾರಿಯಾಗಿ ಆಕರ್ಷಕ ಮೆರವಣಿಗೆಯ ಮೂಲಕ ಲಾಗೇಲೋ ಮಂಟಪ ತಲುಪಿತು. ಆ ಬಳಿಕ ಶ್ರೀ ದೇವಿಯ ಭಂಡಾರ ಆಗಮನ, ಗೋಂದೋಳು ಪೂಜಾ ಪಾತ್ರಿಗಳಿಗೆ ಸ್ವಾಗತ ಮುಂತಾದ ಕಾರ್ಯಕ್ರಮಗಳೊಂದಿಗೆ ಗೋಂದೋಳು ಪೂಜೆಯ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು.