HEALTH TIPS

No title

                   ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯ ನಿಮರ್ಾಣಕ್ಕೆ ಶಂಕುಸ್ಥಾಪನೆ
     ಅಬುದಾಬಿ: ಪಶ್ಚಿಮ ಏಷ್ಯಾ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬುದಾಬಿಯಲ್ಲಿ ಪ್ರಥಮ ಹಿಂದೂ ದೇವಾಲಯ ನಿಮರ್ಾಣಕ್ಕೆ ಭಾನುವಾರ ಶಂಕುಸ್ಥಾಪನೆ ಮಾಡಿದ್ದಾರೆ. 2015ರ ನಂತರ ಎರಡನೇ ಬಾರಿಗೆ ಅರಬ್ ರಾಷ್ಟ್ರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ದುಬೈನಲ್ಲಿರುವ ಒಪೇರಾ ಹೌಸ್ ನಲ್ಲಿ ಭಾರತೀಯ ಸಮುದಾಯಗಳೊಂದಿಗೆ ಾತುಕತೆ ನಡೆಸಿದ್ದಾರೆ. ಅಲ್ಲದೆ ಇದರಲ್ಲಿ ವಿವಿಧ ವೃತ್ತಿಪರ ಹಾಗೂ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡರು. ಬಳಿಕ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರೇಂದ್ರಮೋದಿ ದೇವಾಲಯ ನಿಮರ್ಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬಳಿಕ ಮಾತನಾಡಿದ ಮೋದಿ ಸುಮಾರು 30 ಲಕ್ಷ ಭಾರತೀಯರಿಗೆ ಅರಬ್ ನಲ್ಲಿ ತಮ್ಮ ಮನೆಯ ವಾತಾವರಣ ನಿಮರ್ಿಸಿಕೊಟ್ಟ ಅರಬ್ ದೇಶಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅದ್ಭುತ ದೇವಸ್ಥಾನ ನಿಮರ್ಾಣ ಮಾಡಲು ಅನುಮತಿ ನೀಡಿದಕ್ಕಾಗಿ ನಾನು 125 ಕೋಟಿ ಭಾರತೀಯರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
   ಅಬುದಾಬಿಯಲ್ಲಿ 55 ಸಾವಿರ ಚದರ ಮೀಟರ್ ವಿಸ್ತೀರ್ಣ ಜಾಗದಲ್ಲಿ ಅದ್ಬುತವಾದ ಸ್ವಾಮಿ ನಾರಾಯಣ ದೇವಾಲಯ ನಿಮರ್ಾಣವಾಗಲಿದೆ. ದುಬೈ- ಅಬುದಾಬಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುವೆ ಸುಮಾರು 14 ಎಕರೆ ಜಾಗದಲ್ಲಿ ತಲೆ ಎತ್ತಲಿರುವ ದೇವಾಲಯ 2020ರ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ದೇವಾಲಯದ ಜಾಗದಲ್ಲಿ ಪ್ರಾರ್ಥನಾ ಮಂದಿರ, ಅಧ್ಯಯನ ಕೊಠಡಿ, ಮಕ್ಕಳಿಗಾಗಿ ಕ್ರೀಡಾಂಗಣ, ಉದ್ಯಾನವನ, ನೀರಿನ ಕಾರಂಜಿ, ಆಹಾರ ಮಳಿಗೆ, ಪುಸ್ತಕ ಮತ್ತು ಉಡುಗೊರೆ ನೀಡಲು ಮಳಿಗೆಗಳು ಇರಲಿದೆ.
   




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries