HEALTH TIPS

No title

                    ಫೆ.19 : ಛತ್ರಪತಿ ಶಿವಾಜಿ ಮಹಾರಾಜರ 391 ನೇ ಜಯಂತಿ ಆಚರಣೆ
    ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲಾಡತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನರ್ಾಟಕ ಕ್ಷತ್ರಿಯ ಮರಾಠ ಪರಿಷತ್ ದ.ಕ.ಜಿಲ್ಲೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮತ್ತು ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು ಇದರ ಸಹಕಾರದೊಂದಿಗೆ ಫೆ.19 ರಂದು ಮಂಗಳೂರು ಜೆಪ್ಪಿನಮೊಗರು ಆರ್ಯ ಮರಾಠ ಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 391 ನೇ ಜಯಂತಿ ಆಚರಣೆ ನಡೆಯಲಿದೆ.
   ಬೆಳಗ್ಗೆ 10 ಗಂಟೆಗೆ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ಶಾಸಕ ಜೆ.ಆರ್.ಲೋಬೋ ಅಧ್ಯಕ್ಷತೆ ವಹಿಸುವರು. ಸಚಿವ ಯು.ಟಿ.ಖಾದರ್ ಗೌರವ ಉಪಸ್ಥಿತರಿರುವರು. ಶಾಸಕ ಕೆ.ವಸಂತ ಬಂಗೇರ, ಶಾಸಕ ಕೆ.ಅಭಯಚಂದ್ರ ಜೈನ್, ಸರಕಾರದ ಮುಖ್ಯ ಸಚೇತಕ ಐವನ್ ಡಿ'ಸೋಜ, ವಿಧಾನಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾಣರ್ಿಕ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕಿ ಶಕುಂತಳಾ ಟಿ.ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್.ಅಂಗಾರ, ಶಾಸಕ ಬಿ.ಎ.ಮೊಹಿಯುದ್ದೀನ್ ಬಾವಾ, ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ಪ್ರತಾಪಚಂದ್ರ ಶೆಟ್ಟಿ, ಮಂಗಳೂರು ಮಹಾನಗರಪಾಲಿಕೆಯ ಮಹಾಪರರಾಗಿರುವ ಕವಿತಾ ಸನಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಡಾ.ಎಂ.ಎ.ಉದಯ ಕುಮಾರ್ ಶಿವಾಜಿ ಜಯಂತಿಯ ಸಂದೇಶ ನೀಡುವರು.
  ವಿಶೇಷ ಆಹ್ವಾನಿತರಾಗಿ ಶಾರದಾ ಮೋಹನ್ ಶೆಟ್ಟಿ, ಕೆ.ಸುರೇಶ್ ಬಲ್ಲಾಳ್, ಆರ್.ಪಿ.ನಾಯ್ಕ, ಕರಂಬಾರು ಮಹಮ್ಮದ್, ಮಹಮ್ಮದ್ ಮೊನು, ಡಾ.ಕೃಪಾ ಅಮರ್ ಆಳ್ವ, ಬಿ.ಎಚ್.ಖಾದರ್, ಎ.ಸಿ.ಭಂಡಾರಿ, ಪಿ.ಸಿ.ಜಯರಾಮ, ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿರುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries