HEALTH TIPS

No title

                  ಸ್ನೇಹಾಲಯದಲ್ಲಿ ಮದ್ಯ ಮುಕ್ತ ಗುಂಪಿನ ಪ್ರಥಮ ವಾಷರ್ಿಕಾಚರಣೆ
   ಮಂಜೇಶ್ವರ: ಮಂಜೇಶ್ವರ `ಸ್ನೇಹಾಲಯ' ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದಲ್ಲಿ ಆಲ್ಕೊಹಾಲಿಕ್ ಅನೋನಿಮಸ್ ಗ್ರೂಪಿನ ಪ್ರಥಮ ವರ್ಷದ ಹರ್ಷವನ್ನು ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.
   ಸ್ನೇಹಾಲಯದಲ್ಲಿ ಜರಗಿದ ವಷರ್ಾಚರಣೆ ಕಾರ್ಯಕ್ರಮದಲ್ಲಿ ಸ್ನೇಹಾಲಯ ಅಭಯ ಕೇಂದ್ರದ ನಿವಾಸಿಗಳು, ಸಿಬ್ಬಂದಿಗಳು, ಗಣ್ಯ ವ್ಯಕ್ತಿಗಳು, ಮದ್ಯ ವಿರೋಧಿ ಕಾರ್ಯಕರ್ತರ ಸಹಿತ ನೂರಾರು ಮಂದಿ ಪಾಲ್ಗೊಂಡಿದ್ದರು.
   ಕೃಪಾ ಫೌಂಡೇಶನ್ ಮದ್ಯ ವ್ಯಸನ ಮುಕ್ತ ಕೇಂದ್ರ ಹಾಗೂ ಫಾದರ್ ಮುಲ್ಲರ್ ವೇಲಾಂಕಣ್ಣಿ ಮದ್ಯ ವ್ಯಸನ ಮುಕ್ತ ಕೇಂದ್ರದ ವ್ಯಕ್ತಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮವನ್ನು ಪೂವರ್ಾಹ್ನ ಜರಗಿದ ಸಮಾರಂಭದಲ್ಲಿ ಮಂಗಳೂರು ಪಾಲ್ದನೆ ಸಂತ ಮದರ್ ತೆರೆಸಾ ಇಗಜರ್ಿಯ ಧರ್ಮಗುರು ವಿನ್ಸೆಂಟ್ ವಿಕ್ಟರ್ ಮೆನೇಜಸ್ ಉದ್ಘಾಟಿಸಿದರು. ಅನಿಲ್ ಭಟ್ ಅಧ್ಯಕ್ಷತೆ ವಹಿಸಿದರು. ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಡಾ.ಕೆ.ಕೆ. ಶೆಟ್ಟಿ, ಶಿಸರ್ಿಯ ವಿವೇಕ್ ರಾಯ್ಕರ್, ಸ್ನೇಹಾಲಯ ಟ್ರಸ್ಟಿ ಜೋಸೆಫ್ ವಗರ್ೀಸ್ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡು ಶುಭಾಶಂಸನೆಗೈದರು. ಸ್ನೇಹಾಲಯದ ನಿದರ್ೇಶಕ ಜೋಸೆಫ್ ಕ್ರಾಸ್ತಾ ಸ್ವಾಗತಿಸಿ, ರಾಜೇಶ್ ವಂದಿಸಿದರು. ಜೆಸಿಂತಾ ಪೆರೇರಾ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ವರೆಗೆ ಮುಂದುವರಿದ ಕಾರ್ಯಕ್ರಮವು ಸಹ ಭೋಜನದೊಂದಿಗೆ ಸಮಾಪ್ತಿಯಾಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries