ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಸಿದ್ಧತಾ ಸಭೆ
ಮುಳ್ಳೇರಿಯ : ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ 2018 ಮಾ.31 ಹಾಗೂ ಎ.1ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಯಶಸ್ವಿಗಾಗಿ ಸಿದ್ಧತಾ ಸಭೆ ಇತ್ತೀಚೆಗೆ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ನಡೆಯಿತು.
ಕಸಾಪ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್ ಅವರು ಮಾಹಿತಿ ನೀಡಿದರು. ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಮುಖಂಡ ರಂಗನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಗೋಪಾಲಕೃಷ್ಣ ಭಟ್, ಸುಧೀರ್ ಕುಮಾರ್ ರೈ, ರತ್ನಾಕರ ಮಾಸ್ಟರ್, ವಿರಾಜ್ ಅಡೂರು, ರಾಮಚಂದ್ರ ಬಣ್ಪುತ್ತಡ್ಕ, ಪ್ರಕಾಶ್ ಕುಂಟಾರು ಉಪಸ್ಥಿತರಿದ್ದರು.
ಬಳ್ಳಮೂಲೆ ಗೋವಿಂದ ಭಟ್ ಸ್ವಾಗತಿಸಿ, ಸುಬ್ಬಣ್ಣ ಶೆಟ್ಟಿ ಕಾಸರಗೋಡು ವಂದಿಸಿದರು.
ಸಮ್ಮೇಳನದ ಅಂಗವಾಗಿ ಮಾ.31ರಂದು ವಿವಿಧ ಕಲಾತಂಡಗಳ ಸಹಕಾರದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಯಕ್ಷಗಾನ, ನೃತ್ಯ ಕಾರ್ಯಕ್ರಮ, ಕಾಸರಗೋಡಿನ ಜ್ವಲಂತ ಸಮಸ್ಯೆಯ ಕುರಿತಾದ ವಿಚಾರಗೋಷ್ಠಿ, ಹಾಸ್ಯ ಗೋಷ್ಠಿ, ಕವಿ ಗೋಷ್ಠಿ, ನಾಡಗೀತೆ, ವಿವಿಧ ಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ, ಗಣ್ಯರಿಗೆ ಸನ್ಮಾನ ನಡೆಯಲಿದೆ.
ಮುಂದಿನ ಸಭೆಯು ಮಾ.3ರಂದು ಪರಾಹ್ನ 3.30ಕ್ಕೆ ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸುವಂತೆ ಕಸಾಪ ವಿನಂತಿಸಿದೆ.
ಮುಳ್ಳೇರಿಯ : ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ 2018 ಮಾ.31 ಹಾಗೂ ಎ.1ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಯಶಸ್ವಿಗಾಗಿ ಸಿದ್ಧತಾ ಸಭೆ ಇತ್ತೀಚೆಗೆ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ನಡೆಯಿತು.
ಕಸಾಪ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್ ಅವರು ಮಾಹಿತಿ ನೀಡಿದರು. ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಮುಖಂಡ ರಂಗನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಗೋಪಾಲಕೃಷ್ಣ ಭಟ್, ಸುಧೀರ್ ಕುಮಾರ್ ರೈ, ರತ್ನಾಕರ ಮಾಸ್ಟರ್, ವಿರಾಜ್ ಅಡೂರು, ರಾಮಚಂದ್ರ ಬಣ್ಪುತ್ತಡ್ಕ, ಪ್ರಕಾಶ್ ಕುಂಟಾರು ಉಪಸ್ಥಿತರಿದ್ದರು.
ಬಳ್ಳಮೂಲೆ ಗೋವಿಂದ ಭಟ್ ಸ್ವಾಗತಿಸಿ, ಸುಬ್ಬಣ್ಣ ಶೆಟ್ಟಿ ಕಾಸರಗೋಡು ವಂದಿಸಿದರು.
ಸಮ್ಮೇಳನದ ಅಂಗವಾಗಿ ಮಾ.31ರಂದು ವಿವಿಧ ಕಲಾತಂಡಗಳ ಸಹಕಾರದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಯಕ್ಷಗಾನ, ನೃತ್ಯ ಕಾರ್ಯಕ್ರಮ, ಕಾಸರಗೋಡಿನ ಜ್ವಲಂತ ಸಮಸ್ಯೆಯ ಕುರಿತಾದ ವಿಚಾರಗೋಷ್ಠಿ, ಹಾಸ್ಯ ಗೋಷ್ಠಿ, ಕವಿ ಗೋಷ್ಠಿ, ನಾಡಗೀತೆ, ವಿವಿಧ ಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ, ಗಣ್ಯರಿಗೆ ಸನ್ಮಾನ ನಡೆಯಲಿದೆ.
ಮುಂದಿನ ಸಭೆಯು ಮಾ.3ರಂದು ಪರಾಹ್ನ 3.30ಕ್ಕೆ ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸುವಂತೆ ಕಸಾಪ ವಿನಂತಿಸಿದೆ.