HEALTH TIPS

No title

                    'ಕೋಟಿಚೆನ್ನಯ ಟ್ರೋಪಿ' ಕ್ರಿಕೆಟ್ ಪಂದ್ಯಾಟ
                   ಪಿಆರ್ಎಸ್ ಅಮೆಕ್ಕಳ ತಂಡಕ್ಕೆ ಬಹುಮಾನ
    ಪೆರ್ಲ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಪೆರ್ಲ ವತಿಯಿಂದ ಬಜಕೂಡ್ಲು ಮಿನಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ಜರಗಿದ `ಕೋಟಿ ಚೆನ್ನಯ ಟ್ರೋಫಿ-2018' ಒಂಭತ್ತು ಜನರ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟದಲ್ಲಿ ಪಿಆರ್ಎಸ್ ಅಮೆಕ್ಕಳ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ಎ.ಬಿ. ಸ್ಪೋಟರ್ಿಂಗ್ ದ್ವಿತೀಯ, ಫ್ರೆಂಡ್ಸ್ ಚುಕ್ಕಿನಡ್ಕ ತೃತೀಯ ಹಾಗೂ ಪಿಸಿಸಿ ಸ್ಟ್ರೈಕಸರ್್ ಚತುರ್ಥ ಬಹುಮಾನ ಪಡೆದುಕೊಂಡಿತು.
   ಆಲ್ರೌಂಡರ್ ಆಗಿ ಎಬಿ ಸ್ಪೋಟರ್ಿಂಗ್ ತಂಡದ ಸಿದ್ದಿಕ್ ಮುಗೆರ್, ಉತ್ತಮ ಬ್ಯಾಟುಗಾರನಾಗಿ ಪ್ರಜ್ವಲ್, ಉತ್ತಮ ಕೀಪರ್ ಆಗಿ ಪವನಿ ಹಾಗೂ ಉತ್ತಮ ಬೌಲರ್ ಆಗಿ ಜಗದೀಶ್ ಆಯ್ಕೆಯಾದರು. ಸಮಾರೋಪ ಸಮಾರಂಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಮಾರ್ಗದರ್ಶಕರಲ್ಲೊಬ್ಬರಾದ ಸದಾನಂದ ಬೈರಡ್ಕ ಬಹುಮಾನ ವಿತರಿಸಿದರು. ಅಧ್ಯಕ್ಷ ಶಿವಪ್ಪ ಪೂಜಾರಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು.
   ಪಂದ್ಯಾಟ ಉದ್ಘಾಟನೆ : ಬೆಳಗ್ಗೆ ನಡೆದ ಸಮಾರಂಭದಲ್ಲಿ ಪಂದ್ಯಾಟವನ್ನು ಶ್ರೀ ಕ್ಷೇತ್ರ ಕುಕ್ಕಾಜೆಯ ಧರ್ಮದಶರ್ಿ ಶ್ರೀ ಕೃಷ್ಣ ಗುರೂಜಿ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಿ.ಕೆ ದಿನೇಶ್ ಅಮೆಕ್ಕಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
   ಬಿ.ಪಿ.ಶೇಣಿ, ಪದ್ಮಸಾಗರ್ ಸೇರಾಜೆ, ಹರೀಶ್ ಸೇರಾಜೆ, ಕಮಲಾಕ್ಷ ಸೇರಾಜೆ, ರಾಮಣ್ಣ ಪೂಜಾರಿ ಬಾಂಕಾನ ಉಪಸ್ಥಿತರಿದ್ದರು. ಪದ್ಮನಾಭ ಸುವರ್ಣ ವಂದಿಸಿದರು. ಮೈದಾನದಲ್ಲಿ ತೆಂಗಿನಕಾಯಿ ಒಡೆದು, ಚೆಂಡು ಎಸೆಯುವ ಮೂಲಕ ಶ್ರೀಕೃಷ್ಣ ಗುರೂಜಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries