HEALTH TIPS

No title

         ಅಖಂಡ ಧರಣಿ
  ಮಂಜೇಶ್ವರ: ಕೇರಳ ರಾಜ್ಯ ಸರಕಾರದ ಜನದ್ರೋಹ ನೀತಿ ,ಕೊಲೆ ರಾಜಕೀಯ,  ಬೆಲೆಯೇರಿಕೆ, ಕೃಷಿ  ,ವಿದ್ಯುತ್, ಹಾಗು ಅರೋಗ್ಯ ರಂಗಗಳ ವೈಫಲ್ಯ , ಆವಾಸ ಯೋಜನೆ ಜಾರಿಗೆ ತರದ ಕೇರಳ ಸರಕಾರದ ವಿರುದ್ಧ ರಾಜ್ಯ ಬಿಜೆಪಿ ನಿದರ್ೇಶಾನುಸಾರ ಮಂಡಲ ಮಟ್ಟದಲ್ಲಿ  ಬಿಜೆಪಿ 24 ಗಂಟೆಗಳ ಧರಣಿ ಸಂಘಟಿಸುತ್ತಿದೆ.
   ಬಿಜೆಪಿ ಮಂಜೇಶ್ವರ ಮಂಡಲ  ಸಮಿತಿ ನೇತೃತ್ವದಲ್ಲಿ ಮಾ. 17ರಂದು ಶನಿವಾರ ಪೈವಳಿಕೆ ಸಮೀಪದ ಬಾಯರು ಪದವಿನಲ್ಲಿ 24 ಗಂಟೆಗಳ ಧರಣಿ ನಡೆಯಲಿದೆ. ಬಿಜೆಪಿ ಹಾಗೂ ವಿವಿಧ ಮೋಚರ್ಾಗಳ  ಬೂತ್ ಮಟ್ಟಕ್ಕಿಂತ ಮೇಲ್ಪಟ್ಟ ಎಲ್ಲ ಕಾರ್ಯಕರ್ತರು ,ಚುನಾಯಿತ ಜನ ಪ್ರತಿನಿಧಿಗಳು, ಬೂತ್ ಕಾರ್ಯದಶರ್ಿಗಿಂತ ಮೇಲ್ಪಟ್ಟ, ಪಂಚಾಯತಿ, ಮಂಡಲ ,ಜಿಲ್ಲೆ, ರಾಜ್ಯ ಸಮಿತಿಗಳ ಸದಸ್ಯರು,ಪದಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೆಕೆಂದು ಮಂಡಲ ಸಮಿತಿ ಪ್ರಕಟಣೆ ತಿಳಿಸಿದೆ. ಅಂದು ಸಂಜೆ 4. ಗಂಟೆಗೆ ಧರಣಿಯನ್ನು ನೇತಾರರು ಉದ್ಘಾಟಿಸುವರು. ಭಾನುವಾರ ಸಂಜೆ 4ಕ್ಕೆ ಸಮಾರೋಪ ನಡೆಯಲಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries