HEALTH TIPS

No title

                 ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ
    ಉಪ್ಪಳ:  ಶ್ರೀಗೌರೀಗಣೇಶ ಭಜನಾ ಮಂದಿರ, ಗ್ರಾಮ ವಿಕಾಸ ಸಮಿತಿ ಮತ್ತು ಹಿಂದೂ ಐಕ್ಯವೇದಿ ಪ್ರತಾಪನಗರ ಇದರ ಜಂಟಿ ಆಶ್ರಯದಲ್ಲಿ ಶ್ರೀ ಗೌರೀಗಣೇಶ ಭಜನಾ ಮಂದಿರ ಹಾಗೂ ಗ್ರಾಮ ವಿಕಾಸ ಕಾಯರ್ಾಲಯದ ಜೀಣರ್ೊದ್ಧಾರದ ಸಹಾಯಾರ್ಥವಾಗಿ ಸಗ್ರಹ ಶ್ರೀ ಶನೈಶ್ಚರ ಹವನ ಮತ್ತು ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ ಹಾಗೂ ಗೋ ಸಂರಕ್ಷಣೆಯ ಸಂಕಲ್ಪದ ನಿಮಿತ್ತ ವಿಶ್ವಮಾತಾ ಗೋಮಾತಾ ಬಹು ಮಾಧ್ಯಮ ಬಳಕೆಯ ಅದ್ದೂರಿಯ ನೃತ್ಯ ನಾಟಕ ಕಾರ್ಯಕ್ರಮ ಮಾಚರ್್ 31ರಂದು ಪ್ರತಾಪನಗರ ಶಿವಶಕ್ತಿ ಮೈದಾನ ಬಳಿಯ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ನಡೆಯಲಿದೆ.
    ಅಂದು ಬೆಳಿಗ್ಗೆ 7ಕ್ಕೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಸಗ್ರಹ ಶ್ರೀ ಶನೈಶ್ಚರ ಹವನ ಪ್ರಾರಂಭ, ಮಧ್ಯಾಹ್ನ 12ಕ್ಕೆ ಸಗ್ರಹ ಶ್ರೀ ಶನೈಶ್ಚರ ಹವನದ ಪೂಣರ್ಾಹುತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5.30ರಿಂದ 7ರ ತನಕ ಶ್ರೀ ಗೌರೀ ಗಣೇಶ ಭಜನಾ ಸಮಿತಿ, ಶ್ರೀ ಗಾಯತ್ರೀ ವಿಶ್ವಕರ್ಮ ಭಜನಾ ಮಂದಿರ, ಶ್ರೀ ಗೌರೀ ಗಣೇಶ ಮಹಿಳಾ ಸಂಘ ಪ್ರತಾಪನಗರ, ಶ್ರೀ ಶಾಸ್ತರೇಶ್ವರ ಭಜನಾ ಸಂಘ ಕುಬಣೂರು, ಶ್ರೀ  ಲಕ್ಷ್ಮೀ ಭಜನಾ ಮಂಡಳಿ ತಿಂಬರ ಇವರಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ, ರಾತ್ರಿ 7ರಿಂದ ನಡೆಯುವ ಸತ್ಸಂಗದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕಿನ್ನಿಗೋಳಿ ಯೋಗಾಶ್ರಮದ ಶ್ರೀ ಶಕ್ತಿ ದರ್ಶನ ಯೋಗಾಚಾರ್ಯ ಪರಮಪೂಜ್ಯ ದೇವಬಾಬಾ ಆಶೀರ್ವಚನ ನೀಡುವರು. ಮುಂಬಯಿಯ ನೆರುಲ್ ಶ್ರೀ ಮಣಿಕಂಠ ಸೇವಾ ಸಂಘ ಅಧ್ಯಕ್ಷ ಸಂಜೀವ ಶೆಟ್ಟಿ ತಿಂಬರ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್ ಗೋಪಾಲ ಚೆಟ್ಟಿಯಾರ್ ದಿಕ್ಸೂಚಿ ಭಾಷಣ ಮಾಡುವರು. ರಾತ್ರಿ 8ರಿಂದ ವಿಶ್ವಮಾತಾ ಗೋಮಾತಾ ನೃತ್ಯ ನಾಟಕ ಪ್ರದರ್ಶನಗೊಳ್ಳಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries