ಚಲನಚಿತ್ರ ನಟ ಪ್ರಕಾಶ್ ರೈ ಯವರಿಂದ ಉಪನ್ಯಾಸ-ಸಂವಾದ
ಮಂಜೇಶ್ವರ: ಮಂಜೇಶ್ವರದ ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇವಾ ಫೌಂಡೇಶನ್ ನೇತೃತ್ವದಲ್ಲಿ ನಾಳೆ(ಗುರುವಾರ) ಬೆಳಿಗ್ಗೆ 9.30ಕ್ಕೆ ಹೊಸಂಗಡಿಯ ಹಿಲ್ಸೈಡ್ ಸಭಾಂಗಣದಲ್ಲಿ "ಮಾತಿನಿಂ ಸರ್ವ ಸಂಪದವು" ಎಂಬ ವಿಷಯವನ್ನಾಧರಿಸಿ ವಿಶೇಷ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸಿದ್ದ ಚಲನಚಿತ್ರ ನಟ ಪ್ರಕಾಶ್ ರೈ ವಿಶೇಷೋಪನ್ಯಾಸ ನೀಡುವರು. ಬಳಿಕ ನಡೆಯಲಿರುವ "ಸಮಕಾಲೀನ ಸಂಕಟಗಳು" ಎಂಬ ವಿಷಯ ಸಂವಾದದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಆಂಗ್ಲ ಪ್ರಾಧ್ಯಾಪಕ ಪ್ರೊ. ಎಚ್.ಪಟ್ಟಾಭಿರಾಮ ಸೋಮಯಾಜಿ ಭಾಗವಹಿಸುವರು. ಆಸಕ್ತರು ಪಾಲ್ಗೊಳ್ಳಬಹುದೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಮಂಜೇಶ್ವರ: ಮಂಜೇಶ್ವರದ ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇವಾ ಫೌಂಡೇಶನ್ ನೇತೃತ್ವದಲ್ಲಿ ನಾಳೆ(ಗುರುವಾರ) ಬೆಳಿಗ್ಗೆ 9.30ಕ್ಕೆ ಹೊಸಂಗಡಿಯ ಹಿಲ್ಸೈಡ್ ಸಭಾಂಗಣದಲ್ಲಿ "ಮಾತಿನಿಂ ಸರ್ವ ಸಂಪದವು" ಎಂಬ ವಿಷಯವನ್ನಾಧರಿಸಿ ವಿಶೇಷ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸಿದ್ದ ಚಲನಚಿತ್ರ ನಟ ಪ್ರಕಾಶ್ ರೈ ವಿಶೇಷೋಪನ್ಯಾಸ ನೀಡುವರು. ಬಳಿಕ ನಡೆಯಲಿರುವ "ಸಮಕಾಲೀನ ಸಂಕಟಗಳು" ಎಂಬ ವಿಷಯ ಸಂವಾದದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಆಂಗ್ಲ ಪ್ರಾಧ್ಯಾಪಕ ಪ್ರೊ. ಎಚ್.ಪಟ್ಟಾಭಿರಾಮ ಸೋಮಯಾಜಿ ಭಾಗವಹಿಸುವರು. ಆಸಕ್ತರು ಪಾಲ್ಗೊಳ್ಳಬಹುದೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.