HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಅಕ್ಷತಾಳ ಗೃಹಕ್ಕೆ ಅಂತರಾಷ್ಟ್ರೀಯ ಮಾನವ ಹಕ್ಕು ಸಮಿತಿ ಮುಖಂಡರ ಭೇಟಿ
   ಮುಳ್ಳೇರಿಯ : ಕಾಲೇಜು ವಿದ್ಯಾಥರ್ಿನಿ ಅಕ್ಷತಾಳ ಬರ್ಬರ ಕೊಲೆಯನ್ನು ಅಂತರಾಷ್ಟ್ರೀಯ ಮಾನವ ಹಕ್ಕು ಕನರ್ಾಟಕ ರಾಜ್ಯ ಸಮಿತಿಯು ಖಂಡಿಸುತ್ತಿದ್ದು, ನಕಲಿ ಪ್ರೀತಿ ಪ್ರೇಮದ ಹೆಸರಿನಲ್ಲಿ ದೌರ್ಜನ್ಯಕ್ಕೆ ಬಲಿಯಾಗಿರುವುದು ಕರಾವಳಿಯ ಜನರ ಆತಂಕಕ್ಕೆ ಕಾರಣವಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
  ದುರುಳ ಸಹಪಾಠಿಯಿಂದ ಅಮಾನುಷವಾಗಿ ಬಲಿಯಾದ ಮುಳ್ಳೇರಿಯದ ಅಕ್ಷತಾಳ ಮನೆಗೆ ಗುರುವಾರ ಭೇಟಿ ಮಾಡಿ ಸಾಂತ್ವನ ನೀಡಿದ ಸಮಿತಿಯವರು ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.
   ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಲು ಒತ್ತಡ ಹೇರುವುದಾಗಿ ಮತ್ತು ತಪ್ಪುದಾರಿಯಲ್ಲಿ ಸಾಗುತ್ತಿರುವ ಯುವ ತಲೆಮಾರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಸರಿದಾರಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
  ತಂಡದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕು ಆಯೋಗ ಕನರ್ಾಟಕ ರಾಜ್ಯ ಸಮಿತಿಯ ಅಧ್ಯಕ್ಷೆ ಗೀತಾ ಆರ್. ಶೆಟ್ಟಿ, ದಕ್ಷಿಣ ಕನ್ನಡ ಮಹಿಳಾ ಆಯೋಗ ಸೋಶಿಯಲ್ವಿಂಗ್ನ ಜಿಲ್ಲಾಧ್ಯಕ್ಷೆ ಗೀತಾ ಜಿ ಶೆಟ್ಟಿ, ಮಹಿಳಾ ಆಯೋಗದ ವುಮೆನ್ವಿಂಗ್ನ ಜಿಲ್ಲಾಧ್ಯಕ್ಷೆ ದೀಪಾ ಎನ್ ಶೆಟ್ಟಿ, ಸದಸ್ಯೆ ಮಮತಾ ಕೇಶವ್, ತೇಜಾಕ್ಷಿ ಮೊದಲಾದವರು ಜತೆಗಿದ್ದರು.
 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries