ನವೀಕರಣ ನೆಪದಲ್ಲಿ ಕಲಾಮಂಡಪಂ ಧ್ವಂಸ: ವರದಿ ಕೇಳಿದ ಕೇಂದ್ರ
ತಿರುವನಂತಪುರ : ಇಲ್ಲಿನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಪಾರಂಪರಿಕ ರಚನೆಯಾಗಿರುವ ಕಲಾಮಂಡಪಂ ಅನ್ನು ನವೀಕರಣ ಕಾಮಗಾರಿಯ ಭಾಗವಾಗಿ ಕೆಡವಿರುವ ಬಗ್ಗೆ ಕೇಂದ್ರ ಸರಕಾರ ಅಧಿಕಾರಿಗಳಿಂದ ವರದಿ ಕೇಳಿದೆ.
ದೇವಳದ ಪದ್ಮತೀರ್ಥಂ ಸರೋವರ ತಟದಲ್ಲಿರುವ ಕಲಾಮಂಡಪಂ ರಚನೆಯನ್ನು ಇತ್ತೀಚೆಗೆ ಕೆಡವಲಾಗಿತ್ತು. ಇದು ಶತಮಾನಗಳಷ್ಟು ಹಳೆಯ ರಚನೆಯಾಗಿದ್ದು ಅದಕ್ಕೆ ಪಾರಂಪರಿಕ ಮಹತ್ವ ಇತ್ತು. ನವೀಕರಣದ ನೆಪದಲ್ಲಿ ಇದನ್ನು ಕೆಡವಲಾಗಿತ್ತು.
ಪ್ರವಾಸೋದ್ಯಮ ಮಹಾ ನಿದರ್ೇಶಕ ಸತ್ಯಜಿತ್ ರಾಜನ್ ಅವರು, ಕೆಡವಲಾದ ಮಂಡಪಂ ಮತ್ತು ಸರೋವರ ಪರಿಸರವನ್ನು ವೀಕ್ಷಿಸಿ, ದೇವಸ್ಥಾನದ ಕಾರ್ಯನಿವರ್ಾಹಕ ಅಧಿಕಾರಿಯಾಗಿರುವ ವಿ ರತೀಶನ್ ಅವರಿಂದ ಈ ಬಗ್ಗೆ ವರದಿ ಕೇಳಲಾಗಿದೆ ಎಂದು ತಿಳಿಸಿದರು.
ತಿರುವನಂತಪುರ : ಇಲ್ಲಿನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಪಾರಂಪರಿಕ ರಚನೆಯಾಗಿರುವ ಕಲಾಮಂಡಪಂ ಅನ್ನು ನವೀಕರಣ ಕಾಮಗಾರಿಯ ಭಾಗವಾಗಿ ಕೆಡವಿರುವ ಬಗ್ಗೆ ಕೇಂದ್ರ ಸರಕಾರ ಅಧಿಕಾರಿಗಳಿಂದ ವರದಿ ಕೇಳಿದೆ.
ದೇವಳದ ಪದ್ಮತೀರ್ಥಂ ಸರೋವರ ತಟದಲ್ಲಿರುವ ಕಲಾಮಂಡಪಂ ರಚನೆಯನ್ನು ಇತ್ತೀಚೆಗೆ ಕೆಡವಲಾಗಿತ್ತು. ಇದು ಶತಮಾನಗಳಷ್ಟು ಹಳೆಯ ರಚನೆಯಾಗಿದ್ದು ಅದಕ್ಕೆ ಪಾರಂಪರಿಕ ಮಹತ್ವ ಇತ್ತು. ನವೀಕರಣದ ನೆಪದಲ್ಲಿ ಇದನ್ನು ಕೆಡವಲಾಗಿತ್ತು.
ಪ್ರವಾಸೋದ್ಯಮ ಮಹಾ ನಿದರ್ೇಶಕ ಸತ್ಯಜಿತ್ ರಾಜನ್ ಅವರು, ಕೆಡವಲಾದ ಮಂಡಪಂ ಮತ್ತು ಸರೋವರ ಪರಿಸರವನ್ನು ವೀಕ್ಷಿಸಿ, ದೇವಸ್ಥಾನದ ಕಾರ್ಯನಿವರ್ಾಹಕ ಅಧಿಕಾರಿಯಾಗಿರುವ ವಿ ರತೀಶನ್ ಅವರಿಂದ ಈ ಬಗ್ಗೆ ವರದಿ ಕೇಳಲಾಗಿದೆ ಎಂದು ತಿಳಿಸಿದರು.