HEALTH TIPS

No title

               ಗೋಶಾಲೆಯ ಪದಾಧಿಕಾರಿಗಳು ಮೋಹನ್ಲಾಲ್ ಭೇಟಿ
    ಪೆರ್ಲ : ಬಜಕೂಡ್ಲು ಅಮೃತಧಾರಾ ಗೋಶಾಲೆ ಸಮಿತಿಯ ವತಿಯಿಂದ ಖ್ಯಾತ ಮಲಯಾಳಂ ಸಿನಿಮಾ ನಟ ಮೋಹನ್ ಲಾಲ್ ಅವರನ್ನು ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಮಲಂಪುಳಾದ ಹೋಟೆಲ್ ತ್ರಿಪೆಂಟಾದಲ್ಲಿ ಭೇಟಿ ಮಾಡಲಾಯಿತು.
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಆಶ್ರಯದಲ್ಲಿರುವ ಕಾಮದುಘಾ ಯೋಜನೆಯಡಿ ಕಾಯರ್ಾಚರಿಸುತ್ತಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆ (ಕಾಸರಗೋಡು ಬ್ರೀಡ್ ಚಾರಿಟೇಬಲ್ ಟ್ರಸ್ಟ್)ಯ ಅಧ್ಯಕ್ಷ ಜಗದೀಶ್ ಬಿ.ಜಿ.ಗೋಳಿತ್ತಡ್ಕ ಹಾಗೂ ಕಾಸರಗೋಡು ಬ್ರೀಡ್ ಕನ್ಸವರ್ೇಶನ್ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಟಿ.ಶ್ರೀರಾಮ ಗೋವಿನ ತುಪ್ಪ ಹಾಗೂ ಗವ್ಯ ಉತ್ಪನ್ನಗಳನ್ನು ನೀಡಿ, ಶ್ರೀ ಗುರುಗಳ ಭೇಟಿಗೆ ಹಾಗೂ ಬಜಕೂಡ್ಲು ಗೋಶಾಲೆಗೆ ಭೇಟಿ ನೀಡಲು ಆಮಂತ್ರಿಸಲಾಯಿತು.
ನಟ ಮೋಹನ್ ಲಾಲ್ ಅವರು 2013ನೇ ಇಸವಿಯಲ್ಲಿ ಶ್ರೀಮಠದ ಕಾಮದುಘಾ ಯೋಜನೆಯಡಿ ಬಜಕೂಡ್ಲು ಅಮೃತಧಾರಾ ಗೋಶಾಲೆ ಹಮ್ಮಿಕೊಂಡಿದ್ದ ಅನಂತಪುರದಿಂದ ತಿರುವನಂತಪುರದ ತನಕ ಹಮ್ಮಿಕೊಂಡಿದ್ದ `ಅನಂತ ಗೋಯಾತ್ರೆಯಲ್ಲಿ ಅನಂತಪದ್ಮನಾಭಸ್ವಾಮಿಗೆ ಸಮಪರ್ಿಸಿದ  ಕಾಸರಗೋಡು ಗಿಡ್ಡ ತಳಿಯ ಒಂದು ಗೋವಿನ ಪ್ರಾಯೋಜಕರಾಗಿದ್ದರು. ದೇಶೀಯ ತಳಿಯ ಗೋವಿನ ಕುರಿತು ಮಾಹಿತಿಯನ್ನು ಪಡೆದು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಭೇಟಿನೀಡುವುದಾಗಿ ಭರವಸೆಯನ್ನು ನೀಡಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries