HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

                           ವ್ಯಾಪಾರಿಗಳಿಂದ ಧರಣಿ ಸತ್ಯಾಗ್ರಹ .
    ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಳಿಸಿ ಅಭಿವೃದ್ಧಿ ಪಡಿಸುವ ವೇಳೆ ವ್ಯಾಪಾರ ನಷ್ಟಗೊಳ್ಳುವ ವ್ಯಾಪಾರಿಗಳಿಗೆ ಅರ್ಹವಾದ ನಷ್ಟ ಪರಿಹಾರ ನೀಡಬೇಕು , ವ್ಯಾಪಾರ ನಷ್ಟ ಹೊಂದುವ ವ್ಯಾಪಾರಿಗಳ ಸಾಲ ಮನ್ನಾ ಮಾಡಬೇಕು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ನೇತೃತ್ವದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ಬುಧವಾರ ನಡೆಯಿತು.
   ಹೊಸಂಗಡಿ ಪೇಟೆಯಲ್ಲಿ ನಡೆದ ಸತ್ಯಾಗ್ರಹವನ್ನು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಉಪಾಧ್ಯಕ್ಷ ಕೆ.ಅಹ್ಮದ್ ಶರೀಫ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ವ್ಯಾಪಾರಿಗಳು ವಿರೋಧಿಗಳಲ್ಲ. ಆದರೆ ಹೆದ್ದಾರಿ ಅಭಿವೃದ್ಧಿಯಿಂದ ವ್ಯಾಪಾರ ನಷ್ಟ ಹೊಂದುವ ವ್ಯಾಪಾರಿಗಳಿಗೆ ಅರ್ಹ ನಷ್ಟ ಪರಿಹಾರ ನೀಡಲು ಕೇಂದ್ರ , ರಾಜ್ಯ ಸರಕಾರಗಳು ಮುಂದಾಗಬೇಕೆಂದು ಅವರು ಆಗ್ರಹಿಸಿದರು.
   ಮಂಜೇಶ್ವರ ಘಟಕದ ಅಧ್ಯಕ್ಷ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದರು. ವ್ಯಾಪಾರಿ ಉಪ್ಪಳ ಘಟಕದ ಅಧ್ಯಕ್ಷ ಅಹ್ಮದ್ ರಫೀಕ್ , ಕಾರ್ಯದಶರ್ಿ ಅಶೋಕನ್ , ಯೂತ್ ವಿಂಗ್ ಜಿಲ್ಲಾ ಕಾರ್ಯದಶರ್ಿ ಜಬ್ಬಾರ್ ಉಪ್ಪಳ , ಹಾಗೂ ಮುಖಂಡರುಗಳಾದ ಹಂಝ ಪಾಲಕ್ಕಿ , ನಾರಾಯಣ , ಕೃಷ್ಣ ಶೆಟ್ಟಿಗಾರ್ , ಹಸೈನಾರ್ ಕುಂಜತ್ತೂರು , ದಯಾನಂದ ಬಂಗೇರಾ , ಬಿ.ಮೊಹಮ್ಮದ್ , ಯಾಕೂಬ್, ನಾರಾಯಣ ಹಾಗೂ ರಾಜಕೀಯ ಪಕ್ಷಗಳ ಮುಖಂಡರುಗಳಾದ ಹಷರ್ಾದ್ ವಕರ್ಾಡಿ , ಸತೀಶ್ ಅಡಪ , ಕಜೆ ಅಬ್ದುಲ್ಲ , ಕೆ.ಆರ್ ಜಯಾನಂದ ಮೊದಲಾದವರು ಮಾತನಾಡಿದರು. ಹಮೀದ್ ಹೊಸಂಗಡಿ ಸ್ವಾಗತಿಸಿ, ಆರಿಫ್ ಮಚ್ಚಂಪಾಡಿ ವಂದಿಸಿದರು.
   

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries