ಇರುವ ಶಸ್ತ್ರಾಸ್ತ್ರಗಳಿಂದಲೇ ಹೋರಾಡುವ ಸಾಮಥ್ರ್ಯ ಸೇನೆಗಿದೆ: ಬಿಪಿನ್ ರಾವತ್
ನವದೆಹಲಿ: ಹಾಲಿ ಇರುವ ಶಸ್ತ್ರಾಸ್ತ್ರಗಳಿಂದಲೇ ಹೋರಾಡುವ ಸಾಮಥ್ರ್ಯ ಭಾರತೀಯ ಸೇನೆಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಭಾರತೀಯ ಸೇನೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಅಗತ್ಯತೆ ಇದ್ದು, ಶಸ್ತ್ರಾಸ್ತ್ರ ದಾಸ್ತಾನಿಗೆ ಆಥರ್ಿಕ ಕೊರತೆ ಇದೆ ಎಂಬ ವರದಿಗಳ ಹಿನ್ನಲೆಯಲ್ಲಿ ಭಾನುವಾರ ಮಾತನಾಡಿದ ಬಿಪಿನ್ ರಾವತ್, ಭಾರತೀಯ ಸೇನೆಗೆ ಶಸ್ತ್ರಾಸ್ತ್ರ ಕೊರತೆ ಇದೆ. ಆದರೆ ರಾತ್ರೋ ರಾತ್ರಿ ಅದನ್ನು ಸಂಪೂರ್ಣವಾಗಿ ತುಂಬಲು ಸಾಧ್ಯವಿಲ್ಲ. ಹೀಗಾಗಿ ಪ್ರಸ್ತುತ ಬಿಡುಗಡೆಯಾಗದಿರು ವರದಿಯಲ್ಲಿ ಹೊಸತೇನೂ ಇಲ್ಲ. ಕಳೆದ ಹಲವು ವರ್ಷಗಳಿಂದಲೂ ಇಂತಹ ವರದಿಗಳು ಪ್ರಸಾರವಾಗುತ್ತಿವೆ, ಆದರೆ ಭಾರತೀಯ ಸೇನೆಯ ಸೈನಿಕರು ತರಬೇತಿ ಪಡೆದ ಯೋಧರಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿಯಲ್ಲೂ ತಮಗೆ ದೊರೆತ ಶಸ್ತ್ರಾಸ್ತ್ರಗಳಿಂದ ಹೋರಾಡಬಲ್ಲರು ಎಂದು ಹೇಳಿದ್ದಾರೆ.
ಅಂತೆಯೇ ಅರೆ ಸೇನಾ ಪಡೆಗಳೂ ಕೂಡ ಇದೇ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿದೆ. ಶಸ್ತ್ರಾಸ್ತ್ರ ಖರೀದಿ ಎಂದರೆ ದಿನಸಿ ಅಂಗಡಿಗೆ ಹೋಗಿ ಬಂದ ಹಾಗೆ ಅಲ್ಲ. ಅದಕ್ಕೆ ತನ್ನದೇ ಆದ ನೀತಿ ನಿಯಮಗಳಿವೆ. ಮೊದಲು ಬೇಕಾದಷ್ಟು ಶಸ್ತ್ರಾಸ್ತ್ರಗಳಿಗೆ ಹಣ ನೀಡಿ ಬಳಿಕ ಅವುಗಳನ್ನು ಆಮದು ಮಾಡಿಕೊಳ್ಳಬೇಕು. ಶಸ್ತ್ರಾಸ್ತ್ರ ಖರೀದಿ ಸಂಬಂಧ ಪ್ರಕ್ರಿಯೆಗಲು ಚಾಲನೆಯಲ್ಲಿವೆ ಎಂದು ರಾವತ್ ಹೇಳಿದ್ದಾರೆ.
ನವದೆಹಲಿ: ಹಾಲಿ ಇರುವ ಶಸ್ತ್ರಾಸ್ತ್ರಗಳಿಂದಲೇ ಹೋರಾಡುವ ಸಾಮಥ್ರ್ಯ ಭಾರತೀಯ ಸೇನೆಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಭಾರತೀಯ ಸೇನೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಅಗತ್ಯತೆ ಇದ್ದು, ಶಸ್ತ್ರಾಸ್ತ್ರ ದಾಸ್ತಾನಿಗೆ ಆಥರ್ಿಕ ಕೊರತೆ ಇದೆ ಎಂಬ ವರದಿಗಳ ಹಿನ್ನಲೆಯಲ್ಲಿ ಭಾನುವಾರ ಮಾತನಾಡಿದ ಬಿಪಿನ್ ರಾವತ್, ಭಾರತೀಯ ಸೇನೆಗೆ ಶಸ್ತ್ರಾಸ್ತ್ರ ಕೊರತೆ ಇದೆ. ಆದರೆ ರಾತ್ರೋ ರಾತ್ರಿ ಅದನ್ನು ಸಂಪೂರ್ಣವಾಗಿ ತುಂಬಲು ಸಾಧ್ಯವಿಲ್ಲ. ಹೀಗಾಗಿ ಪ್ರಸ್ತುತ ಬಿಡುಗಡೆಯಾಗದಿರು ವರದಿಯಲ್ಲಿ ಹೊಸತೇನೂ ಇಲ್ಲ. ಕಳೆದ ಹಲವು ವರ್ಷಗಳಿಂದಲೂ ಇಂತಹ ವರದಿಗಳು ಪ್ರಸಾರವಾಗುತ್ತಿವೆ, ಆದರೆ ಭಾರತೀಯ ಸೇನೆಯ ಸೈನಿಕರು ತರಬೇತಿ ಪಡೆದ ಯೋಧರಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿಯಲ್ಲೂ ತಮಗೆ ದೊರೆತ ಶಸ್ತ್ರಾಸ್ತ್ರಗಳಿಂದ ಹೋರಾಡಬಲ್ಲರು ಎಂದು ಹೇಳಿದ್ದಾರೆ.
ಅಂತೆಯೇ ಅರೆ ಸೇನಾ ಪಡೆಗಳೂ ಕೂಡ ಇದೇ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿದೆ. ಶಸ್ತ್ರಾಸ್ತ್ರ ಖರೀದಿ ಎಂದರೆ ದಿನಸಿ ಅಂಗಡಿಗೆ ಹೋಗಿ ಬಂದ ಹಾಗೆ ಅಲ್ಲ. ಅದಕ್ಕೆ ತನ್ನದೇ ಆದ ನೀತಿ ನಿಯಮಗಳಿವೆ. ಮೊದಲು ಬೇಕಾದಷ್ಟು ಶಸ್ತ್ರಾಸ್ತ್ರಗಳಿಗೆ ಹಣ ನೀಡಿ ಬಳಿಕ ಅವುಗಳನ್ನು ಆಮದು ಮಾಡಿಕೊಳ್ಳಬೇಕು. ಶಸ್ತ್ರಾಸ್ತ್ರ ಖರೀದಿ ಸಂಬಂಧ ಪ್ರಕ್ರಿಯೆಗಲು ಚಾಲನೆಯಲ್ಲಿವೆ ಎಂದು ರಾವತ್ ಹೇಳಿದ್ದಾರೆ.