HEALTH TIPS

No title

                    ಕೇರಳ ಗ್ರಾಮೀಣ ಬ್ಯಾಂಕ್ಗೆ ಅಂತಾರಾಷ್ಟ್ರೀಯ ಪ್ರಶಸ್ತಿ
   ಕುಂಬಳೆ: ಕೇರಳ ಗ್ರಾಮೀಣ ಬ್ಯಾಂಕ್ಗೆ ಅತ್ಯುತ್ತಮ ಸಾಮಾಜಿಕ ಕಳಕಳಿಯ ಬ್ಯಾಂಕ್ ಎಂಬ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಶಾಲೆಗಳಲ್ಲಿ ವಿದ್ಯಾಥರ್ಿಗಳಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ಜ್ಞಾನವನ್ನು ತಿಳಿಸಲು ವಿಶಿಷ್ಟ ಕಾರ್ಯಕ್ರಮಗಳನ್ನು  ಬ್ಯಾಂಕ್ ಕಳೆದ ಎರಡು ಮೂರು ವರ್ಷಗಳಲ್ಲಾಗಿ ತನ್ನ 661 ಶಾಖೆಗಳ ಮೂಲಕ ವಿವಿಧ ವಿದ್ಯಾಲಯಗಳಲ್ಲಿ ಯಶಸ್ವಿಯಾಗಿ ನಡೆಸುತ್ತಿದ್ದು, ಸುಮಾರು 60 ಸಾವಿರ ವಿದ್ಯಾಥರ್ಿಗಳು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡಿದ್ದಾರೆ.
    ಕೇರಳದ ಪ್ರಸಿದ್ಧ ಜಾದೂಗಾರ ಗೋಪಿನಾಥ ಮುತ್ತುಕ್ಕಾಡ್ ಈ ವಿಷಯದಲ್ಲಿ ಬ್ಯಾಂಕ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಚೇಂಬರ್ ಆಫ್ ಕಾಮಸರ್್ನ್ನು ನಿಯಂತ್ರಿಸುವ ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮಸರ್್ ಆ್ಯಂಡ್ ಇಂಡಸ್ಟ್ರೀಸ್ ಆಫ್ ಇಂಡಿಯಾ ಎಂಬ ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಯ ವತಿಯಿಂದ ಬ್ಯಾಂಕ್ನ ಮಹಾ ಪ್ರಬಂಧಕ ಎಸ್.ಪವಿತ್ರನ್ ಅವರು ಮುಂಬಯಿಯಲ್ಲಿ ಜರಗಿದ ಸಮಾರಂಭದಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಸೋಚೇಮ್ನ ಕೇಂದ್ರ ಕಚೇರಿ ಯುರೋಪ್ನ ನೆದರ್ಲೇಂಡ್ ದೇಶದ ಆಮ್ಸ್ಟಡರ್್ಡೇಂನಲ್ಲಿ ಕಾರ್ಯವೆಸಗುತ್ತಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries