ಪ್ರಾಮಾಣಿಕತೆ ಮೆರೆದ ಅಟೋಚಾಲಕ
ಮುಳ್ಳೇರಿಯ: ವ್ಯಕ್ತಿಯೊಬ್ಬರು ಕಳೆದುಕೊಂಡ ಹಣವನ್ನೊಳಗೊಂಡ ಬ್ಯಾಗನ್ನು ಅದರ ವಾರಸುದಾರರಿಗೆ ಒಪ್ಪಿಸುವ ಮೂಲಕ ಮುಳ್ಳೇರಿಯ ಶ್ರೀ ದುಗರ್ಾ ಅಟೋ ಸ್ಯಾಂಡಿನ ಅಟೋ ಚಾಲಕ ಸಂಜೀವ ಪ್ರಾಮಾಣಿಕತೆ ಮೆರೆದಿದ್ದಾರೆ.
ನೆಟ್ಟಣಿಗೆ ನಿವಾಸಿ ಹಮೀದ್ ಎಂಬವರ ಬ್ಯಾಗ್ ಪ್ರಯಾಣದ ವೇಳೆ ಇತ್ತೀಚೆಗೆ ಕಳೆದುಹೋಗಿತ್ತು. ರೂ.5500, ಎಟಿಎಂ ಕಾಡರ್್ ಮತ್ತು ಇತರ ದಾಖಲೆಗಳು ಒಳಗೊಂಡ ಬ್ಯಾಗ್ ಅಟೋ ಚಾಲಕ ಸಂಜೀವರಿಗೆ ಸಿಕ್ಕಿತ್ತು. ಆದರೆ ವಾರಸುದಾರರ ಮಾಹಿತಿ ಇರಲಿಲ್ಲ. ಬ್ಯಾಗ್ ಸಿಕ್ಕಿದ ಬಗ್ಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಆದೂರು ಪೊಲೀಸ್ ಠಾಣೆಗೆ ಒಪ್ಪಿಸಿದರು. ಇದೇ ವೇಳೆ ಹಮೀದ್ ಎಂಬವರು ಬ್ಯಾಗ್ ಕಳೆದುಕೊಂಡ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಾಗಿ ವಾರಸುದಾರರನ್ನು ಪತ್ತೆಹಚ್ಚುವುದು ಸುಲಭವಾಯಿತು. ಹಮೀದ್ರನ್ನು ಮುಳ್ಳೇರಿಯ ಪೇಟೆಗೆ ಬರಮಾಡಿದ ಪೋಲೀಸರು ಸಂಜೀವರ ಮೂಲಕ ಬ್ಯಾಗನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಎಸ್ಐ ಪ್ರಶೋಬ್ ಸಹಿತ ಇತರ ಪೋಲೀಸರು ಉಪಸ್ಥಿತರಿದ್ದರು. ಸಂಜೀವರ ಪ್ರಾಮಾಣಿಕತೆಗೆ ಅಭಿನಂದನೆ ವ್ಯಕ್ತವಾಗಿದೆ.
ಮುಳ್ಳೇರಿಯ: ವ್ಯಕ್ತಿಯೊಬ್ಬರು ಕಳೆದುಕೊಂಡ ಹಣವನ್ನೊಳಗೊಂಡ ಬ್ಯಾಗನ್ನು ಅದರ ವಾರಸುದಾರರಿಗೆ ಒಪ್ಪಿಸುವ ಮೂಲಕ ಮುಳ್ಳೇರಿಯ ಶ್ರೀ ದುಗರ್ಾ ಅಟೋ ಸ್ಯಾಂಡಿನ ಅಟೋ ಚಾಲಕ ಸಂಜೀವ ಪ್ರಾಮಾಣಿಕತೆ ಮೆರೆದಿದ್ದಾರೆ.
ನೆಟ್ಟಣಿಗೆ ನಿವಾಸಿ ಹಮೀದ್ ಎಂಬವರ ಬ್ಯಾಗ್ ಪ್ರಯಾಣದ ವೇಳೆ ಇತ್ತೀಚೆಗೆ ಕಳೆದುಹೋಗಿತ್ತು. ರೂ.5500, ಎಟಿಎಂ ಕಾಡರ್್ ಮತ್ತು ಇತರ ದಾಖಲೆಗಳು ಒಳಗೊಂಡ ಬ್ಯಾಗ್ ಅಟೋ ಚಾಲಕ ಸಂಜೀವರಿಗೆ ಸಿಕ್ಕಿತ್ತು. ಆದರೆ ವಾರಸುದಾರರ ಮಾಹಿತಿ ಇರಲಿಲ್ಲ. ಬ್ಯಾಗ್ ಸಿಕ್ಕಿದ ಬಗ್ಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಆದೂರು ಪೊಲೀಸ್ ಠಾಣೆಗೆ ಒಪ್ಪಿಸಿದರು. ಇದೇ ವೇಳೆ ಹಮೀದ್ ಎಂಬವರು ಬ್ಯಾಗ್ ಕಳೆದುಕೊಂಡ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಾಗಿ ವಾರಸುದಾರರನ್ನು ಪತ್ತೆಹಚ್ಚುವುದು ಸುಲಭವಾಯಿತು. ಹಮೀದ್ರನ್ನು ಮುಳ್ಳೇರಿಯ ಪೇಟೆಗೆ ಬರಮಾಡಿದ ಪೋಲೀಸರು ಸಂಜೀವರ ಮೂಲಕ ಬ್ಯಾಗನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಎಸ್ಐ ಪ್ರಶೋಬ್ ಸಹಿತ ಇತರ ಪೋಲೀಸರು ಉಪಸ್ಥಿತರಿದ್ದರು. ಸಂಜೀವರ ಪ್ರಾಮಾಣಿಕತೆಗೆ ಅಭಿನಂದನೆ ವ್ಯಕ್ತವಾಗಿದೆ.