HEALTH TIPS

No title

             ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಜಿಲ್ಲಾ ಸೇವಾ ಸಂಘದ ಸಭೆ
   ಕುಂಬಳೆ: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಜಿಲ್ಲಾ ಸೇವಾ ಸಂಘ ಕಾಸರಗೋಡು,ಇದರ   ಕಾರ್ಯಕಾರಿಣಿ ಸಮಿತಿಯ ಸಭೆ ಸಂಸ್ಥೆಯ ಪದಾಧಿಕಾರಿ ವರಿಷ್ಠ   ವೆಂಕಟ್ರಮಣ ರ ಅಧ್ಯಕ್ಷತೆಯಲ್ಲಿ ಚಿತ್ತಾರಿ ಉಪ ಸಂಘದ  ಸಹಯೋಗದೊಂದಿಗೆ ಚಿತ್ತಾರಿ ನಾಯಕರ ಹಿತ್ತಿಲು ಶ್ರೀಮಲ್ಲಿಕಾಜರ್ುನ ವ್ಯಾಘ್ರ ಚಾಮುಂಡಿ ದೇವಳದ ಸಭಾಂಗಣದಲ್ಲಿ ಭಾನುವಾರ ಜರುಗಿತು.
     ಬಲಿಷ್ಠವಾದ ಸಮಾಜಕ್ಕಾಗಿ ಯುವ ಸಂಘಟನೆ ರೂಪೀಕರಣಗೊಳಿಸಲು ಸಭೆಯಲ್ಲಿ ತೀಮರ್ಾನಿಸಲಾಯಿತು. ಮೇ ತಿಂಗಳಿನಲ್ಲಿ ಮಕ್ಕಳಿಗಾಗಿ ವಸಂತ ಶಿಬಿರವನ್ನು ಆಯೋಜಿಸಲು ನಿರ್ಧರಿಸಲಾಯಿತು. ಮಹಾ ಸಂಘದ ಸಂಸ್ಥಾಪಕ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯರ  ಪುಣ್ಯ ದಿನಾಚರಣೆ ಮೇ. 18 ರಂದು  ಎಲ್ಲ ಉಪ ಸಂಘದ ವ್ಯಾಪ್ತಿಯಲ್ಲಿ  ದಾನ ಧರ್ಮ ಕಾರ್ಯಗಳೊಂದಿಗೆ ಆಚರಿಸಲು  ನಿರ್ಧರಿಸಲಾಯಿತು.
  ಸಂಘದ ಜಿಲ್ಲಾ ಉಪಾಧ್ಯಕ್ಷೆ  ಉಷಾ ಟೀಚರ್ ಚಿತ್ತಾರಿ ಅವರು ಸಭಾ ತೀಮರ್ಾನದಂತೆ, ನಿಯೋಗದ ಮುಖ್ಯಸ್ಥೆಯಾಗಿ  ನಮ್ಮ ಸಮಾಜದವರ ಬಾಹುಳ್ಯವಿರುವ ಕನರ್ಾಟಕದ ಪ್ರದೇಶಗಳಾದ  ಹೊನ್ನಾವರ, ಹಳದಿಪುರ, ಮಂಕಿ  ಇತ್ಯಾದಿ ಪ್ರದೇಶಗಳಿಗೆ ಸಹಕಾರ, ಸಂವರ್ಧನೆಗಾಗಿ ಭೇಟಿ ನೀಡಿದ ಬಗ್ಗೆ ಕೂಲಂಕಷವಾಗಿ ತಮ್ಮ ಅನಿಸಿಕೆಯನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ವರ್ಷಂಪ್ರತಿ ಯುಗಾದಿ ಪ್ರಯುಕ್ತ ಜಿಲ್ಲಾ ಸಂಘದ  ನೆರವಿನಿಂದ ನೀಡುವ ಉಡುಗೊರೆಯನ್ನು ಎಲ್ಲಾ ಉಪ ಸಂಘಗಳಿಗೂ ನೀಡಲಾಯಿತು.
  ವೇದಿಕೆಯಲ್ಲಿ ಚಿತ್ತಾರಿ ಉಪ ಸಂಘದ ವರಿಷ್ಠ ಶ್ರೀಧರ  ಕಲ್ಲಿಂಗಾಲ್, ಕಾರ್ಯದಶರ್ಿ  ಸುಬ್ರಾಯ ಕಲ್ಲಿಂಗಾಲ್, ದೇವಳದ ಅಧ್ಯಕ್ಷ ಜನಾರ್ದನ ರಾವ್, ಸಂಘದ ನಿಕಟಪೂರ್ವ ಅಧ್ಯಕ್ಷ ನಿರಂಜನ ಕೊರಕೋಡು ಮೊದಲಾದವರು ಸಉಪಸ್ಥಿತರಿದ್ದು ಸಲಹೆ ಸೂಚನೆಯನ್ನು ನೀಡಿದರು. ಜಿಲ್ಲಾ ಕಾರ್ಯದಶರ್ಿ ಲೋಕೇಶ್ ಕುಮಾರ್ ಸ್ವಾಗತಿಸಿ,ಜೊತೆ ಕಾರ್ಯದಶರ್ಿ ಪ್ರೇಮ್ ಕಿಶೋರ್ ಕುಂಬಳೆ ವಂದಿಸಿದರು. ಚಂದ್ರಹಾಸ ಚಿತ್ತಾರಿ ಕಾರ್ಯಕ್ರಮವನ್ನು ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries