HEALTH TIPS

No title

               ಸುಧೀರ್ ಕುಮಾರ್ ಶೆಟ್ಟಿ ಗೋಸಾಡ ಶ್ರೀಕ್ಷೇತ್ರಕ್ಕೆ ಭೇಟಿ
     ಬದಿಯಡ್ಕ: ಯುಎಇ ಎಕ್ಸೇಂಜ್ನ ಕಾರ್ಯನಿರ್ವಹಣಾಧಿಕಾರಿ ಸುದೀರ್ ಕುಮಾರ್ ಶೆಟ್ಟಿ ಯೆಣ್ಮಕಜೆಯವರು  ಗೋಸಾಡ ಶ್ರೀ ಮಹಿಷಮಧರ್ಿನಿ ದೇವಸ್ಥಾನಕ್ಕೆ ಬೇಟಿಯಿತ್ತು , ವಿಶೇಷ ಪ್ರಾರ್ಥನೆ ಸಲ್ಲಿಸಿದರು.
   ಈ ಸಂದರ್ಭದಲ್ಲಿ ಅವರನ್ನು ಶಾಲು ಹೊದಿಸಿ ಕ್ಷೇತ್ರದ ವತಿಯಿಂದ ಅಭಿನಂದಿಸಲಾಯಿತು. ಜೀಣರ್ೋದ್ಧಾರ ಸಮಿತಿಯ ಪ್ರಧಾನ ಕಾರ್ಯದಶರ್ಿ  ಪ್ರಭಾಕರ ರೈ.ಯಂ ಶ್ರೀ ಕ್ಷೇತ್ರದ ಜೀಣರ್ೋದ್ಧಾರದ ಬಗ್ಗೆ ಮಾಹಿತಿ ನೀಡಿದರು. ಸುದೀರ್ ಕುಮಾರ್ ಶೆಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿ ಶ್ರದ್ಧೆ ಭಕ್ತಿಯಿಂದ ಮಾಡುವ ದೇವರ ಕಾರ್ಯ ದೇವಸ್ಥಾನಗಳ ಅಭಿವೃದ್ದಿಗೆ ಕಾರಣವಾಗುತ್ತಿದೆ. ಪೂಜೆ ಪುನಸ್ಕಾರಗಳು ನಿಯಮಿತವಾಗಿ ನಡೆಯಲು ಸಾಧ್ಯವಾಗಿದೆ. ಹಿಂದೆ ಜನರಲ್ಲಿ ಭಯಭಕ್ತಿ ಹೆಚ್ಚಾಗಿತ್ತಾದರೂ ಕ್ಷೇತ್ರಗಳನ್ನು ಅಭಿವೃದ್ಧಿ  ಪಡಿಸುವತ್ತ ಅವರು ಅಷ್ಟಾಗಿ ಆಸಕ್ತಿ ವಹಿಸಿರಲಿಲ್ಲ. ಜನರು ಧರ್ಮದ ಕಾರ್ಯದಲ್ಲಿ ತೊಡಗಿಸಿಕೊಂಡು ದೇವಾಲಯಗಳ ಅಭಿವೃದ್ಧಿ ಹಾಗೂ ರಕ್ಷಣೆಗೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ. ಇದು ಸತ್ ಪ್ರೇರಣೆ ನೀಡುವುದು ಎಂದು ತಿಳಿಸಿದರು.
   ಕಾರ್ಯಕ್ರಮದಲ್ಲಿ ಗೋಸಾಡ ಶ್ರೀ ಮಹಿಷಮಧರ್ಿನಿ ದೇವಸ್ಥಾನ ಜೀಣರ್ೋದ್ಧಾರ ಸಮಿತಿ ಉಪಾಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಜೀಣರ್ೋದ್ಧಾರ ಸಮಿತಿಯ ಶ್ರೀನಿವಾಸ ಅಮ್ಮಣಾಯ, ಎಸ್.ಎನ್ ಮಯ್ಯ, ಅನಂತ ಭಟ್ ಕುರುಮುಜಿ,ಸತ್ಯಮೂತರ್ಿ ಅಮ್ಮಣಾಯ ಹಾಗೂ ಕ್ಷೇತ್ರದ ಅರ್ಚಕ ಶ್ರೀನಿವಾಸ ಚಡಗ ಮತ್ತು ಊರ ಪರವೂರ ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಭಾಕರ ರೈ.ಯಂ.ಸ್ವಾಗತಿಸಿ, ಸುಧಾಮ ಗೋಸಾಡ ವಂದಿಸಿದರು.
 




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries