HEALTH TIPS

No title

               ಮಿತ್ರಕಲಾವೃಂದದ ಮಹಾಸಭೆ
      ಮಧೂರು: ಸಾಮಾಜಿಕ, ಸಾಂಸ್ಕೃತಿಕ, ಧಾಮರ್ಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರಗಳಲ್ಲಿ ಜನಪರವಾಗಿ ತೊಡಗಿಸಿಕೊಂಡು ಜನಪ್ರಿಯವಾಗಿರುವ ಮಧೂರಿನ ಮಿತ್ರ ಕಲಾವೃಂದದ ಮಹಾಸಭೆ ಸಂಘದ ಕಚೇರಿಯಲ್ಲಿ ಜರಗಿತು. ಅಧ್ಯಕ್ಷ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದರು.
   ಮಿತ್ರಕಲಾವೃಂದದ 42 ನೇ ವಾಷರ್ಿಕೋತ್ಸವ ಮಾಚರ್್ 25 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಮಧೂರು ಕಿರಿಯ ಬುನಾದಿ ಶಾಲೆಯಲ್ಲಿ ನಡೆಸಲು ತೀಮರ್ಾನಿಸಲಾಯಿತು. ಸಂಘದ ಗೌರವಾಧ್ಯಕ್ಷ ಉಳಿಯತ್ತಾಯ ವಿಷ್ಣು ಆಸ್ರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ಸೈನ್ಯದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮೇಜರ್ ಸುಬೇದಾರ್ ಮಧೂರು ವಿಶ್ವನಾಥ ಗಟ್ಟಿ ಅವರನ್ನು ಸಮ್ಮಾನಿಸಲಾಗುವುದು. ಬಳಿಕ ವಿವಿಧ ವಿನೋದಾವಳಿಗಳು ನಡೆಯಲಿದೆ. ಮಧೂರು ಕ್ಷೇತ್ರದ ವಾಷರ್ಿಕ ಜಾತ್ರೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಗಾನ ನಾಟ್ಯ ವೈಭವ ಏರ್ಪಡಿಸಲು ಹಾಗೂ ಎಪ್ರಿಲ್ 21 ಮತ್ತು 22 ರಂದು ಮಧೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಸಲು ತೀಮರ್ಾನಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರ ಸಹಕಾರವನ್ನು ಕೋರಲಾಯಿತು.
   ಮಿತ್ರಕಲಾವೃಂದದ ಹಿರಿಯ, ಕಿರಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದರು. ಅಶೋಕ ಎಂ. ಸ್ವಾಗತಿಸಿ, ಕಾರ್ಯದಶರ್ಿ ಮೌನೇಶ್ ಎಂ. ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries