ಮಂಜೇಶ್ವರದಲ್ಲಿ ಶ್ರೀಸಂಯಮೀಂದ್ರ ತೀರ್ಥರಿಂದ ಮುಖ್ಯಪ್ರಾಣ ದೇವರ ಪುನಃಪ್ರತಿಷ್ಠೆ
ಮಂಜೇಶ್ವರ: ಮಂಜೇಶ್ವರದ ಇತಿಹಾಸ ಪ್ರಸಿದ್ದ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಪೂಜ ಅರ್ಚಕ ಕುಟುಂಬಕ್ಕೆ ಸಂಬಂಧಿಸಿದ ಶ್ರೀಮುಖ್ಯಪ್ರಾಣ ಮಠದ ಮುಖ್ಯಪ್ರಾಣ ದೇವರ ಪುನಃಪ್ರತಿಷ್ಠಾ ಕಾರ್ಯಕ್ರಮ ಗುರುವಾರ ಶ್ರೀಕಾಶೀಮಠಾಧೀಶ ಶ್ರೀಮತ್ ಸಂಯಮೀಂಧ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಗುರುವಾರ ಬೆಳಿಗ್ಗೆ ಶ್ರೀದೇವತಾ ಪ್ರಾರ್ಥನೆಯೊಂದಿಗೆ ವಿಧಿವಿಧಾನಗಳು ಆರಂಭಗೊಂಡವು. ಯಜ್ಞಮಂಟಪದಲ್ಲಿ ಶ್ರೀಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, ಪಂಚಾಮೃತಾಭಿಷೇಕ, ಪಂಚ ವಿಂಶತಿ ಕಲಶಾಭಿಷೇಕ, ಸಾನ್ನಿಧ್ಯ ಹವನಗಳು ನಡೆದವು. ಬಳಿಕ ಪೂಣರ್ಾಹುತಿ, ಪ್ರಸನ್ನ ಪೂಜೆ, ಅನುಜ್ಞಾ ಪ್ರಾರ್ಥನೆ, ನೂತನ ದೇಗುಲದಲ್ಲಿ ಶ್ರೀಗುರು ಗಣಪತಿ ಪೂಜೆ, ದ್ವಾರ ಲಕ್ಷ್ಮೀ ಪೂಜೆ, ಮುಹೂರ್ತ ನಿರೀಕ್ಷಣೆ ಮೊದಲಾದ ಧಾಮರ್ಿಕ ಕಾರ್ಯಕ್ರಮಗಳು ನಡೆದವು. ಬಳಿಕ ಗುರುಗಳ ಪಾದಪೂಜೆ, ಮಧ್ಯಾಹ್ನ ಮಹಾಪೂಜೆ, ದಂಪತಿ ಪೂಜೆ, ಬ್ರಾಹ್ಮಣ ಪೂಜೆ, ಗೋಪೂಜೆ, ಸಮಾರಾಧನೆ ನಡೆಯಿತು.
ಕಾರ್ಯಕ್ರಮಗಳಿಗೂ ಮೊದಲು ಗುರುವಾರ ಬೆಳಿಗ್ಗೆ ಬಂಟ್ವಾಳ ಮೊಕ್ಕಾಂ ನಿಂದ ಶ್ರೀಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥರು ಆಗಮಿಸಿದಾಗ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಿ ಪಾದಪೂಜೆ ನೆರವೇರಿಸಲಯಿತು.
ಮಂಜೇಶ್ವರ: ಮಂಜೇಶ್ವರದ ಇತಿಹಾಸ ಪ್ರಸಿದ್ದ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಪೂಜ ಅರ್ಚಕ ಕುಟುಂಬಕ್ಕೆ ಸಂಬಂಧಿಸಿದ ಶ್ರೀಮುಖ್ಯಪ್ರಾಣ ಮಠದ ಮುಖ್ಯಪ್ರಾಣ ದೇವರ ಪುನಃಪ್ರತಿಷ್ಠಾ ಕಾರ್ಯಕ್ರಮ ಗುರುವಾರ ಶ್ರೀಕಾಶೀಮಠಾಧೀಶ ಶ್ರೀಮತ್ ಸಂಯಮೀಂಧ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಗುರುವಾರ ಬೆಳಿಗ್ಗೆ ಶ್ರೀದೇವತಾ ಪ್ರಾರ್ಥನೆಯೊಂದಿಗೆ ವಿಧಿವಿಧಾನಗಳು ಆರಂಭಗೊಂಡವು. ಯಜ್ಞಮಂಟಪದಲ್ಲಿ ಶ್ರೀಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, ಪಂಚಾಮೃತಾಭಿಷೇಕ, ಪಂಚ ವಿಂಶತಿ ಕಲಶಾಭಿಷೇಕ, ಸಾನ್ನಿಧ್ಯ ಹವನಗಳು ನಡೆದವು. ಬಳಿಕ ಪೂಣರ್ಾಹುತಿ, ಪ್ರಸನ್ನ ಪೂಜೆ, ಅನುಜ್ಞಾ ಪ್ರಾರ್ಥನೆ, ನೂತನ ದೇಗುಲದಲ್ಲಿ ಶ್ರೀಗುರು ಗಣಪತಿ ಪೂಜೆ, ದ್ವಾರ ಲಕ್ಷ್ಮೀ ಪೂಜೆ, ಮುಹೂರ್ತ ನಿರೀಕ್ಷಣೆ ಮೊದಲಾದ ಧಾಮರ್ಿಕ ಕಾರ್ಯಕ್ರಮಗಳು ನಡೆದವು. ಬಳಿಕ ಗುರುಗಳ ಪಾದಪೂಜೆ, ಮಧ್ಯಾಹ್ನ ಮಹಾಪೂಜೆ, ದಂಪತಿ ಪೂಜೆ, ಬ್ರಾಹ್ಮಣ ಪೂಜೆ, ಗೋಪೂಜೆ, ಸಮಾರಾಧನೆ ನಡೆಯಿತು.
ಕಾರ್ಯಕ್ರಮಗಳಿಗೂ ಮೊದಲು ಗುರುವಾರ ಬೆಳಿಗ್ಗೆ ಬಂಟ್ವಾಳ ಮೊಕ್ಕಾಂ ನಿಂದ ಶ್ರೀಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥರು ಆಗಮಿಸಿದಾಗ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಿ ಪಾದಪೂಜೆ ನೆರವೇರಿಸಲಯಿತು.