HEALTH TIPS

No title

   ಲೋಕ ಕಲ್ಯಾಣಾರ್ಥವಾದ ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ ಚಾಲನೆ-ಭಕ್ತರ ಪ್ರವಾಹ
   ಉಪ್ಪಳ: ಉಪ್ಪಳ ಸಮೀಪದ ಮಂಗಲ್ಪಾಡಿ ಪೆರಿಂಗಡಿಯ ಶ್ರೀಶಾಸ್ತಾರೇಶ್ವರ ನಾಗಬ್ರಹ್ಮ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಶುಕ್ರವಾರ(ಮಾ.2 )ರಿಂದ 6ರ ವರೆಗೆ ಅಷ್ಟಪವಿತ್ರ ನಾಗಮಂಡಲೋತ್ಸವ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ವಿವಿಧ ಕಾರ್ಯಕ್ರಮಗಳೊಮದಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
   ಶುಕ್ರವಾರ ಬೆಳಿಗ್ಗೆ 7ಕ್ಕೆ ಋತ್ವಿಜರ ಆಗಮನ, ಪುಣ್ಯಾಹ, ಗಣಯಾಗ, 7.30ಕ್ಕೆ ನಿತ್ಯಪೂಜೆ, 9 ರಿಂದ ತೋರಣ ಮುಹೂರ್ತ ನಡೆಯಿತು. ಬಳಿಕ ಅಂಬಾರು ತರವಾಡು ಗುರಿಕಾರರಾದ ವೀರಪ್ಪ ಅಂಬಾರು ರವರು ದೀಪ ಪ್ರಜ್ವಲನೆಗೊಳಿಸಿ  ಉಗ್ರಾಣ ಮುಹೂರ್ತ ನೆರವೇರಿಸಿದರು. 10 ರಿಂದ ಸರ್ಪ ಸಂಸ್ಕಾರ ಹೋಮ ನಡೆಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ 1.30 ರಿಂದ 4ರ ತನಕ ಬಾಯಾರಿನ ನವಕನರ್ಾಟಕ ಕೃಪಾಶ್ರಿತ ಯಕ್ಷಗಾನ ಕಲಾ ಮಂಡಳಿಯವರಿಂದ ಯಕ್ಷಗಾನ ತಾಳಮದ್ದಳೆ ಶುಂಭ ವಧೆ ಪ್ರಸ್ತುತಗೊಂಡಿತು. 3 ರಿಂದ ಉಪ್ಪಳ ಶ್ರೀಅಯ್ಯಪ್ಪ ಸ್ವಾಮಿ ಕ್ಷೇತ್ರದಿಂದ ನೂರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಹಸಿರು ಹೊರೆ ಕಾಣಿಕೆ ಮೆರವಣಿಗೆ ಹೊರಟು ಶ್ರೀಕ್ಷೇತ್ರಕ್ಕೆ ಆಗಮಿಸಿತು. ಸಂಜೆ 5 ರಿಂದ 6.30 ರ ತನಕ ಭಜನಾ ಸಂಕೀರ್ತನೆ, 6 ರಿಂದ ಕ್ಷೇತ್ರದಲ್ಲಿ ಸಪ್ತಶುದ್ದಿ, ಪ್ರಸಾದ ಶುದ್ದಿ, ಪುಣ್ಯಾಹ ವಾಚನ, ರಾಕ್ಷೊಘ್ನ ಹೋಮ, ವಾಸ್ತುಪೂಜೆ, ವಾಸ್ತು ಹೋಮ, ದಿಕ್ಪಾಲಕ ಬಲಿ, ಪ್ರಾಕಾರ ಬಲಿಗಳು ನಡೆದವು.ಸಂಜೆ 6.30 ರಿಂದ ಧಾಮರ್ಿಕ ಸಭೆ ನಡೆಯಿತು. ರಾತ್ರಿ 8ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನಡೆದವು.
    ಬಳಿಕ ಕಯ್ಯಾರು ಪೊನ್ನೆತ್ತೋಡು ಬಾಲಕಲಾವಿದರಿಂದ ಮಕ್ಕಳ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
    ಇಂದಿನ ಕಾರ್ಯಕ್ರಮ:(03/03):
   ಶನಿವಾರ ಬೆಳಿಗ್ಗೆ 7.30ಕ್ಕೆ ನಿತ್ಯಪೂಜೆ, 8 ರಿಂದ ಪುಣ್ಯಾಹ, ಗಣಹೋಮ, ನವಕ ಕಲಶಾಭಿಷೇಕ, ಪವಮಾನ ಹೋಮ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನಡೆಯಲಿದೆ. ಮಧ್ಯಾಹ್ನ 1.30 ರಿಂದ ಕೂಟಮಹಾಜಗತ್ತು ಮಂಗಲ್ಪಾಡಿ ಯಕ್ಷಕೂಟ ಮಹಿಳಾ ವೇದಿಕೆಯವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 5 ರಿಂದ 8 ರ ವರೆಗೆ ಭಜನಾ ಸಂಕೀರ್ತನೆ, ರಾತ್ರಿ 8 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
   ರಾತ್ರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಲಡ್ಕದ ಮಾಯಾಲೋಕ ಶ್ಯಾಂ ಜಾದೂಗಾರ್ ಬಳಗದವರಿಂದ ಜಾದೂ, ಹಾಡು, ಮಿಮಿಕ್ರಿ ವೈವಿಧ್ಯಗಳು ನಡೆಯಲಿವೆ.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries