HEALTH TIPS

No title

             ಮಿನಿ ಮಾಸ್ಟ್ ಬೆಳಕಿನ ಸಂಪರ್ಕಕ್ಕಾಗಿ ಮೀನ ಮೇಷ ಎಣಿಸುತ್ತಿರುವ ಅಧಿಕೃತರು
    ಮಂಜೇಶ್ವರ: ದೇವರು ಕೊಟ್ಟರೂ ಪೂಜಾರಿ ಬಿಡಲಾರ ಎಂಬ ಗಾದೆಯಂತಾಗಿದೆ ತೂಮಿನಾಡಿನಲ್ಲಿ ಸಕಲ ಸಿದ್ದತೆಗಳೊಂದಿಗೆ ನಿಮರ್ಿಸಲಾದ ಮಿನಿ ಮಾಸ್ಟ್ ಬೆಳಕಿನ ಅವಸ್ಥೆ. ಈ ಕಂಬದಿಂದ ಈ ತನಕ ಊರವರಿಗೆ ಬೆಳಕನ್ನು ಕಾಣಲು ಸಾಧ್ಯವಾಗಿಲ್ಲ.
  ಬಹುತೇಕ ಪ್ರದೇಶಗಳಲ್ಲಿ ದೀಪ ಸ್ಥಾಪನೆಗೆ ಕಂಬ ನಿಮರ್ಿಸಿದ ಮರು ದಿನವೇ ಬೆಳಕಿನ ಸಂಪರ್ಕವನ್ನು ನೀಡುತ್ತಿರುವ ಮಧ್ಯೆ ತೂಮಿನಾಡಿನಲ್ಲಿ ಕಂಬ, ಬಲ್ಬ್ ಗಳನ್ನು ವ್ಯವಸ್ಥೆಗೊಳಿಸಿ ಮೂರು ತಿಂಗಳುಗಳೇ ಕಳೆದರೂ ಮಿನಿ ಮಾಸ್ಟ್ ಬೆಳಕಿನ ಭಾಗ್ಯ ಊರವರಿಗೆ ಲಭಿಸಿಲ್ಲ.
   ಮಂಜೇಶ್ವರ ಶಾಸಕ ಪಿ ಬಿ ಅಬ್ದುಲ್ ರಜಾಕ್ ರವರ  ಅಭಿವೃದ್ದಿ ನಿಧಿಯಿಂದ ತೂಮಿನಾಡು ಜಂಕ್ಷನಿಗೆ ಹಸಿರು ನಿಶಾನೆಯಾದ ಮಿನಿ ಮಾಸ್ಟ್ ಬೆಳಕಿನ ಕಂಬ, ಲೈಟ್ ನಿಮರ್ಿಸಿ ಇದೀಗ ಮೂರು ತಿಂಗಳುಗಳೇ ಕಳೆದಿದೆ. ಈ ಬಗ್ಗೆ ಊರವರು ಅಧಿಕೃತರಲ್ಲಿ ವಿಚಾರಿಸಿದಾಗ ಯಾವುದೇ ಉತ್ತರ ಲಭಿಸಿಲ್ಲ.  ವಿದ್ಯುತ್ ಸಂಪರ್ಕ ನೀಡಿ ಬಲ್ಬ್ ಉರಿಯತೊಡಗಿದರೆ ಬಳಿಕ ವಿದ್ಯುತ್ ಶುಲ್ಕವನ್ನು ಯಾರು ಪಾವತಿಸಬೇಕು ಎಂಬ ಪ್ರಶ್ನೆಗೆ ಉತ್ತರ ಲಭಿಸದ ಕಾರಣ ಇಷ್ಟೊಂದು ವಿಳಂಭವಾಗಲು ಒಂದು ಕಾರಣ ಎಂಬುದಾಗಿ ತಿಳಿದು ಬಂದಿದೆ. ಸ್ಥಳೀಯ ಪಂ. ಸದಸ್ಯೆ ಈ ಕಾರ್ಯಕ್ಕೆ ಅಷ್ಟೊಂದು ಮುತುವಜರ್ಿ ವಹಿಸದಿದ್ದರೂ ಈ ಸಮಸ್ಯೆಗೂ ಗ್ರಾ. ಪಂ.ಅಧ್ಯಕ್ಷ ಅಝೀಝ್ ಹಾಜಿಯವರೇ ಮುತುವಜರ್ಿ ವಹಿಸಿ ಬಿಲ್ ಪಾವತಿಸಲಾಗುವುದು ಎಂದು ತೀಮರ್ಾನಿಸಿ ವಿದ್ಯುತ್ ಇಲಾಖೆಯವರಿಗೆ ಲಿಖಿತವಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ.
   ಇದೀಗ ಮತ್ತೆ ವಿದ್ಯುತ್ ಇಲಾಖೆಯ ಭಾಗದಿಂದ ವಿಳಂಬವಾಗುತ್ತಿರುವುದಾಗಿ ಹೇಳಲಾಗುತ್ತಿದೆ. ಅಂತೂ ಇನ್ನೂ ಯಾವಾಗ ತೂಮಿನಾಡು ಜನತೆಗೆ ಮಿನಿ ಮಾಸ್ಟ್ ಬೆಳಕಿನ ಭಾಗ್ಯ ಒದಗಿ ಬರುತ್ತದೆ ಎಂದು ಕಾದು ನೋಡಬೇಕಾಗಿದೆ.
    ಏನಂತಾರೆ:
  ಗ್ರಾಮ ಪಂಚಾಯತು ವತಿಯಿಂದ ದಾರಿದೀಪದ ಶುಲ್ಕ ಪಾವತಿಸಲಾಗುವುದು. ಇದಕ್ಕಾಗಿ ಗ್ರಾಮ ಪಂಚಾಯತು ಈಗಾಗಲೇ ತೀಮರ್ಾನ ಕೈಗೊಂಡಿದೆ. ಈಗಾಗಲೇ ಹಲವು ದಾರಿದೀಪಗಳ ಶುಲ್ಕವನ್ನು ಗ್ರಾಮ ಪಂಚಾಯತು ಈಗಾಗಲೇ ಪಾವತಿಸುತ್ತಿದೆ.
              ಅಬ್ದುಲ್ಅಝೀಜ್ ಹಾಜಿ.
             ಅಧ್ಯಕ್ಷರು ಮಂಜೇಶ್ವರ ಗ್ರಾಮ ಪಂಚಾಯತು. 
 





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries