ಮದಂಗಲ್ಲು ಆನಂದಣ್ಣನ ಪುಸ್ತಕ ಬಿಡುಗಡೆ-ಗೊಂತಿದ್ದೋ!
ಮಾ.11ರಂದು ಮುಂಬಯಿಯಲ್ಲಿ 'ಯಕ್ಷಲೋಕದ ಸವ್ಯಸಾಚಿ ಮದಂಗಲ್ಲು ಆನಂದ ಭಟ್'ರ ಪುಸ್ತಕ ಬಿಡುಗಡೆ
ಮಂಜೇಶ್ವರ : ಗಡಿನಾಡಿನ ಯಕ್ಷಸಾಧಕ, ಮಹರಾಷ್ಟ್ರದ ಪೂನಾದಲ್ಲಿ ಅನೇಕ ವರ್ಷಗಳಿಂದ ನೆಲೆಸಿಕಲಾ ಸಾಧನೆಗೈಯುತ್ತಿರುವ ಮೀಯಪದವು ಸಮೀಪದ ಮದಂಗಲ್ಲು ಆನಂದ ಭಟ್ ಅವರ ಬದುಕು ಹಾಗೂ ಯಕ್ಷ ಸಾಧನೆಯನ್ನೊಳಗೊಂಡ ಪುಸ್ತಕ "ಯಕ್ಷಲೋಕದ ಸವ್ಯಸಾಚಿ ಮದಂಗಲ್ಲು ಆನಂದ ಭಟ್" ಮಾಚರ್್ 11 ರಂದು ಭಾನುವಾರ ಮುಂಬಯಿಯಲ್ಲಿ ಬಿಡುಗಡೆಗೊಳ್ಳಲಿದೆ.
ಸಾಹಿತ್ಯ ಬಳಗ ಮುಂಬಯಿ ಇದರ ರಜತ ಮಹೋತ್ಸವ ಅಂಗವಾಗಿ ಸಾಧಕರಿಗೆ ನಮನ ಯೋಜನೆಯ ಪ್ರಥಮ ಹಂತವಾಗಿ ಮದಂಗಲ್ಲು ಆನಂದ ಭಟ್ ರವರ ಕೃತಿಯನ್ನೊಳಗೊಂಡಂತೆ ವಿವಿಧ ಕ್ಷೇತ್ರಗಳ ಹತ್ತು ಸಾಧಕರ ಬಗೆಗಿನ ಪುಸ್ತಕಗಳು ಈ ಸಂದರ್ಭ ಬಿಡುಗಡೆಗೊಳ್ಳಲಿದೆ. ಸಾಹಿತ್ಯ ಬಳಗದ ರಜತ ಮಹೋತ್ಸವದ ಅಂಗವಾಗಿ ಸಾಹಿತ್ತಿಕ ಹಾಗೂ ಸಾಂಸ್ಕೃತಿಕ ಸಮಾವೇಶ ಬೃಹನ್ಮುಂಬಯಿ ಕ.ಸಾ.ಪ.ಘಟಕದ ಪ್ರಥಮ ಕಾರ್ಯಕ್ರಮ ಇದಾಗಿ ದಾಖಲಾಗಲಿದೆ. ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾನಿಲಯ, ಶ್ರೀ ಪೇಜಾವರ ಮಠ ಸಾಂತಾ ಕ್ರೂಜ್(ಪೂ) ಮುಂಬಯಿ ಸಂಸ್ಥೆಗಳು ಸಹಯೋಗ ನೀಡಲಿದ್ದಾರೆ.
ಸಮಾರಂಭದಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ವಿದ್ವಾನ್ ಕಮಲಾ ದೇವಿಪ್ರಸಾದ ಆಸ್ರಣ್ಣ ಕಟೀಲು, ಡಾ. ಸೀತಾರಾಮ ಆಳ್ವ ಮುಂಬಯಿ, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಭಾಗವಹಿಸುವರು.
ಮಾ.11ರಂದು ಮುಂಬಯಿಯಲ್ಲಿ 'ಯಕ್ಷಲೋಕದ ಸವ್ಯಸಾಚಿ ಮದಂಗಲ್ಲು ಆನಂದ ಭಟ್'ರ ಪುಸ್ತಕ ಬಿಡುಗಡೆ
ಮಂಜೇಶ್ವರ : ಗಡಿನಾಡಿನ ಯಕ್ಷಸಾಧಕ, ಮಹರಾಷ್ಟ್ರದ ಪೂನಾದಲ್ಲಿ ಅನೇಕ ವರ್ಷಗಳಿಂದ ನೆಲೆಸಿಕಲಾ ಸಾಧನೆಗೈಯುತ್ತಿರುವ ಮೀಯಪದವು ಸಮೀಪದ ಮದಂಗಲ್ಲು ಆನಂದ ಭಟ್ ಅವರ ಬದುಕು ಹಾಗೂ ಯಕ್ಷ ಸಾಧನೆಯನ್ನೊಳಗೊಂಡ ಪುಸ್ತಕ "ಯಕ್ಷಲೋಕದ ಸವ್ಯಸಾಚಿ ಮದಂಗಲ್ಲು ಆನಂದ ಭಟ್" ಮಾಚರ್್ 11 ರಂದು ಭಾನುವಾರ ಮುಂಬಯಿಯಲ್ಲಿ ಬಿಡುಗಡೆಗೊಳ್ಳಲಿದೆ.
ಸಾಹಿತ್ಯ ಬಳಗ ಮುಂಬಯಿ ಇದರ ರಜತ ಮಹೋತ್ಸವ ಅಂಗವಾಗಿ ಸಾಧಕರಿಗೆ ನಮನ ಯೋಜನೆಯ ಪ್ರಥಮ ಹಂತವಾಗಿ ಮದಂಗಲ್ಲು ಆನಂದ ಭಟ್ ರವರ ಕೃತಿಯನ್ನೊಳಗೊಂಡಂತೆ ವಿವಿಧ ಕ್ಷೇತ್ರಗಳ ಹತ್ತು ಸಾಧಕರ ಬಗೆಗಿನ ಪುಸ್ತಕಗಳು ಈ ಸಂದರ್ಭ ಬಿಡುಗಡೆಗೊಳ್ಳಲಿದೆ. ಸಾಹಿತ್ಯ ಬಳಗದ ರಜತ ಮಹೋತ್ಸವದ ಅಂಗವಾಗಿ ಸಾಹಿತ್ತಿಕ ಹಾಗೂ ಸಾಂಸ್ಕೃತಿಕ ಸಮಾವೇಶ ಬೃಹನ್ಮುಂಬಯಿ ಕ.ಸಾ.ಪ.ಘಟಕದ ಪ್ರಥಮ ಕಾರ್ಯಕ್ರಮ ಇದಾಗಿ ದಾಖಲಾಗಲಿದೆ. ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾನಿಲಯ, ಶ್ರೀ ಪೇಜಾವರ ಮಠ ಸಾಂತಾ ಕ್ರೂಜ್(ಪೂ) ಮುಂಬಯಿ ಸಂಸ್ಥೆಗಳು ಸಹಯೋಗ ನೀಡಲಿದ್ದಾರೆ.
ಸಮಾರಂಭದಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ವಿದ್ವಾನ್ ಕಮಲಾ ದೇವಿಪ್ರಸಾದ ಆಸ್ರಣ್ಣ ಕಟೀಲು, ಡಾ. ಸೀತಾರಾಮ ಆಳ್ವ ಮುಂಬಯಿ, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಭಾಗವಹಿಸುವರು.