ಕೊಡುಗೈದಾನಿ ಸಾಯಿರಾಂ ಭಟ್ ಪೌರಸನ್ಮಾನ ಬದಿಯಡ್ಕದಲ್ಲಿ ಸ್ವಾಗತ ಕಚೇರಿ ಉದ್ಘಾಟನೆ
ಬದಿಯಡ್ಕ: ಕೊಡುಗೈದಾನಿ, ಸಮಾಜ ಸೇವಕ, ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರಿಗೆ ನೀಡುವ ಪೌರ ಸನ್ಮಾನದ ಯಶಸ್ವಿಗಾಗಿ ಬದಿಯಡ್ಕದ ಮೇಲಿಪೇಟೆಯಲ್ಲಿ ಸ್ವಾಗತ ಕಚೇರಿಯನ್ನು ಸೋಮವಾರ ಖ್ಯಾತ ಚಿತ್ರಕಲಾವಿದ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್.ಪುಣಿಚಿತ್ತಾಯ ಉದ್ಘಾಟಿಸಿದರು.ಮಾ.29ರಂದು ಬದಿಯಡ್ಕದಲ್ಲಿ ಸಾಮಾಜಿಕ-ರಾಜಕೀಯ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಾಯಿರಾಂ ಭಟ್ ಅವರಿಗೆ ಪೌರ ಸನ್ಮಾನ ಹಾಗೂ ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ನಡೆಯಲಿದೆ. ಸ್ವಾಗತ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಕಾಯರ್ಾಧ್ಯಕ್ಷ ಪ್ರೊ. ಎ.ಶ್ರೀನಾಥ್ ಅಧ್ಯಕ್ಷತೆ ವಹಿಸಿದರು. ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಮಾಹಿನ್ ಕೇಳೋಟ್ ಕಾರ್ಯಕ್ರಮದ ಕುರಿತು ವಿವರಿಸಿದರು. ಪಿ.ಜಿ.ಚಂದ್ರಹಾಸ ರೈ, ಎಸ್.ಎನ್. ಮಯ್ಯ, ಕೇಳು ಮಾಸ್ತರ್ ಅಗಲ್ಪಾಡಿ, ಹರೀಶ್ ನಾರಂಪಾಡಿ, ಶ್ಯಾಮ್ ಪ್ರಸಾದ್ ಮಾನ್ಯ, ಜಯರಾಮ ಪಾಟಾಳಿ, ಅಬೀದ್ ಕಾಞಂಗಾಡು, ಅಖಿಲೇಶ್ ನಗುಮುಗಂ, ನಿತಿನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು. ನಿರಂಜನ್ ರೈ ಮಾಸ್ತರ್ ಸ್ವಾಗತಿಸಿ, ಆಶ್ರಫ್ ಮುನಿಯೂರು ವಂದಿಸಿದರು.
ಬದಿಯಡ್ಕ: ಕೊಡುಗೈದಾನಿ, ಸಮಾಜ ಸೇವಕ, ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರಿಗೆ ನೀಡುವ ಪೌರ ಸನ್ಮಾನದ ಯಶಸ್ವಿಗಾಗಿ ಬದಿಯಡ್ಕದ ಮೇಲಿಪೇಟೆಯಲ್ಲಿ ಸ್ವಾಗತ ಕಚೇರಿಯನ್ನು ಸೋಮವಾರ ಖ್ಯಾತ ಚಿತ್ರಕಲಾವಿದ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್.ಪುಣಿಚಿತ್ತಾಯ ಉದ್ಘಾಟಿಸಿದರು.ಮಾ.29ರಂದು ಬದಿಯಡ್ಕದಲ್ಲಿ ಸಾಮಾಜಿಕ-ರಾಜಕೀಯ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಾಯಿರಾಂ ಭಟ್ ಅವರಿಗೆ ಪೌರ ಸನ್ಮಾನ ಹಾಗೂ ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ನಡೆಯಲಿದೆ. ಸ್ವಾಗತ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಕಾಯರ್ಾಧ್ಯಕ್ಷ ಪ್ರೊ. ಎ.ಶ್ರೀನಾಥ್ ಅಧ್ಯಕ್ಷತೆ ವಹಿಸಿದರು. ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಮಾಹಿನ್ ಕೇಳೋಟ್ ಕಾರ್ಯಕ್ರಮದ ಕುರಿತು ವಿವರಿಸಿದರು. ಪಿ.ಜಿ.ಚಂದ್ರಹಾಸ ರೈ, ಎಸ್.ಎನ್. ಮಯ್ಯ, ಕೇಳು ಮಾಸ್ತರ್ ಅಗಲ್ಪಾಡಿ, ಹರೀಶ್ ನಾರಂಪಾಡಿ, ಶ್ಯಾಮ್ ಪ್ರಸಾದ್ ಮಾನ್ಯ, ಜಯರಾಮ ಪಾಟಾಳಿ, ಅಬೀದ್ ಕಾಞಂಗಾಡು, ಅಖಿಲೇಶ್ ನಗುಮುಗಂ, ನಿತಿನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು. ನಿರಂಜನ್ ರೈ ಮಾಸ್ತರ್ ಸ್ವಾಗತಿಸಿ, ಆಶ್ರಫ್ ಮುನಿಯೂರು ವಂದಿಸಿದರು.