ಆಡುವ ಮಾತು ಮತ್ತು ಕೃತಿಗಳಲ್ಲಿ ಹೊಂದಾಣಿಕೆ ಇರಬೇಕು : ಪುರೋಹಿತರತ್ನ ವಾಸುದೇವ ಅಡಿಗ
ಕುಂಬಳೆ: ನಾವು ಆಡುವ ಮಾತು ಮತ್ತು ಮಾಡುವ ಕೃತಿಗಳಲ್ಲಿ ಹೊಂದಾಣಿಕೆ ಬೇಕು. ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಂಡಲ್ಲಿ ಮಾತ್ರ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಹಿರಿಯ ಧಾಮರ್ಿಕ ಮುಂದಾಳುಗಳಾದ ಪುರೋಹಿತ ರತ್ನ ಕುಂಬಳೆ ವಾಸುದೇವ ಅಡಿಗ ಅವರು ಅಭಿಪ್ರಾಯಪಟ್ಟರು.
ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ಸಂಪರ್ಕ ಸಭೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವೇದಮೂತರ್ಿ ವಾಸುದೇವ ಅಡಿಗ ಅವರ ನಿವಾಸದಲ್ಲಿ ಜರಗಿದ ಪ್ರಸ್ತುತ ಕಾರ್ಯಕ್ರಮದಲ್ಲಿ ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಂಬಳೆ ಶ್ರೀ ಗೋಪಾಲಕೃಷ್ಣ ದೇಗುಲದ ಪ್ರಧಾನ ಅರ್ಚಕ ವೇದಮೂತರ್ಿ ಮಾಧವ ಅಡಿಗ ಅವರು ಮಾತನಾಡಿ ಮಿತವಾದ ಮಾತು, ನಿರಹಂಕಾರ, ದಾನಶೀಲತೆ ಮುಂತಾದವುಗಳನ್ನು ಜೀವೋನ್ನತಿಗೆ ಪೂರಕವಾಗಿದ್ದು ಇವುಗಳನ್ನು ಜೀವನದಲ್ಲಿ ಅಳವಡಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಿ.ಮಾಧವ ಹೊಳ್ಳ ಉಪಸ್ಥಿತರಿದ್ದರು.
ಮಂಗಲ್ಪಾಡಿಗೆ ಸಮೀಪದ ಪೆರಿಂಗಡಿಯ ಶ್ರೀ ಶಾಸ್ತಾವೇಶ್ವರ ನಾಗಬ್ರಹ್ಮ ದೇವಾಲಯದಲ್ಲಿ ಮಾ.6 ರ ವರೆಗೆ ನಡೆಯುವ ಅಷ್ಟ ಪವಿತ್ರ ನಾಗಮಂಡಲೋತ್ಸವದ ಯಶಸ್ಸಿಗೆ ಎಲ್ಲಾ ಕೂಟ ಬಂಧುಗಳು ಸಹಕರಿಸುವಂತೆಯೂ ಕರೆ ನೀಡಲಾಯಿತು. ಅಲ್ಲದೇ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಾಲಯದಲ್ಲಿ ಮೇ 2 ರಿಂದ 7 ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದಲ್ಲೂ ಎಲ್ಲಾ ಕೂಟಬಂಧುಗಳೂ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಲಾಯಿತು.
ಸಂಪರ್ಕ ಸಭೆಗಿಂತ ಮೊದಲು ವಿಷ್ಣು ಸಹಸ್ರನಾಮ ಪಠನ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಿತು. ಮುಂದಿನ ಸಂಪರ್ಕ ಸಭೆಯನ್ನು ಮಾ.11 ರಂದು ಅಪರಾಹ್ನ ಬೆದ್ರಡ್ಕಕ್ಕೆ ಸಮೀಪ ನೀರಾಳ ವೆಂಕಟ್ರಮಣ ಹೊಳ್ಳ ಅವರ ಮನೆಯಲ್ಲಿ ಜರಗಲಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಯಿತು. ಧಾಮರ್ಿಕ ಮುಂದಾಳು ಶಂ.ನಾ.ಅಡಿಗ ಕುಂಬಳೆ ಸ್ವಾಗತಿಸಿ, ಅಂಗಸಂಸ್ಥೆಯ ಕೋಶಾಧಿಕಾರಿ ಬಿ.ಕೃಷ್ಣ ಕಾರಂತ ವಂದಿಸಿದರು. ಅಧ್ಯಾಪಕ ನರಸಿಂಹ ಮಯ್ಯ ಎಂ. ಮಧೂರು ಕಾರ್ಯಕ್ರಮ ನಿರೂಪಿಸಿದರು.
ಕುಂಬಳೆ: ನಾವು ಆಡುವ ಮಾತು ಮತ್ತು ಮಾಡುವ ಕೃತಿಗಳಲ್ಲಿ ಹೊಂದಾಣಿಕೆ ಬೇಕು. ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಂಡಲ್ಲಿ ಮಾತ್ರ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಹಿರಿಯ ಧಾಮರ್ಿಕ ಮುಂದಾಳುಗಳಾದ ಪುರೋಹಿತ ರತ್ನ ಕುಂಬಳೆ ವಾಸುದೇವ ಅಡಿಗ ಅವರು ಅಭಿಪ್ರಾಯಪಟ್ಟರು.
ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ಸಂಪರ್ಕ ಸಭೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವೇದಮೂತರ್ಿ ವಾಸುದೇವ ಅಡಿಗ ಅವರ ನಿವಾಸದಲ್ಲಿ ಜರಗಿದ ಪ್ರಸ್ತುತ ಕಾರ್ಯಕ್ರಮದಲ್ಲಿ ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಂಬಳೆ ಶ್ರೀ ಗೋಪಾಲಕೃಷ್ಣ ದೇಗುಲದ ಪ್ರಧಾನ ಅರ್ಚಕ ವೇದಮೂತರ್ಿ ಮಾಧವ ಅಡಿಗ ಅವರು ಮಾತನಾಡಿ ಮಿತವಾದ ಮಾತು, ನಿರಹಂಕಾರ, ದಾನಶೀಲತೆ ಮುಂತಾದವುಗಳನ್ನು ಜೀವೋನ್ನತಿಗೆ ಪೂರಕವಾಗಿದ್ದು ಇವುಗಳನ್ನು ಜೀವನದಲ್ಲಿ ಅಳವಡಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಿ.ಮಾಧವ ಹೊಳ್ಳ ಉಪಸ್ಥಿತರಿದ್ದರು.
ಮಂಗಲ್ಪಾಡಿಗೆ ಸಮೀಪದ ಪೆರಿಂಗಡಿಯ ಶ್ರೀ ಶಾಸ್ತಾವೇಶ್ವರ ನಾಗಬ್ರಹ್ಮ ದೇವಾಲಯದಲ್ಲಿ ಮಾ.6 ರ ವರೆಗೆ ನಡೆಯುವ ಅಷ್ಟ ಪವಿತ್ರ ನಾಗಮಂಡಲೋತ್ಸವದ ಯಶಸ್ಸಿಗೆ ಎಲ್ಲಾ ಕೂಟ ಬಂಧುಗಳು ಸಹಕರಿಸುವಂತೆಯೂ ಕರೆ ನೀಡಲಾಯಿತು. ಅಲ್ಲದೇ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಾಲಯದಲ್ಲಿ ಮೇ 2 ರಿಂದ 7 ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದಲ್ಲೂ ಎಲ್ಲಾ ಕೂಟಬಂಧುಗಳೂ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಲಾಯಿತು.
ಸಂಪರ್ಕ ಸಭೆಗಿಂತ ಮೊದಲು ವಿಷ್ಣು ಸಹಸ್ರನಾಮ ಪಠನ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಿತು. ಮುಂದಿನ ಸಂಪರ್ಕ ಸಭೆಯನ್ನು ಮಾ.11 ರಂದು ಅಪರಾಹ್ನ ಬೆದ್ರಡ್ಕಕ್ಕೆ ಸಮೀಪ ನೀರಾಳ ವೆಂಕಟ್ರಮಣ ಹೊಳ್ಳ ಅವರ ಮನೆಯಲ್ಲಿ ಜರಗಲಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಯಿತು. ಧಾಮರ್ಿಕ ಮುಂದಾಳು ಶಂ.ನಾ.ಅಡಿಗ ಕುಂಬಳೆ ಸ್ವಾಗತಿಸಿ, ಅಂಗಸಂಸ್ಥೆಯ ಕೋಶಾಧಿಕಾರಿ ಬಿ.ಕೃಷ್ಣ ಕಾರಂತ ವಂದಿಸಿದರು. ಅಧ್ಯಾಪಕ ನರಸಿಂಹ ಮಯ್ಯ ಎಂ. ಮಧೂರು ಕಾರ್ಯಕ್ರಮ ನಿರೂಪಿಸಿದರು.