HEALTH TIPS

No title

                     ಮಹಿಳೆಯರ ಸ್ವಾವಲಂಬನೆಯ ಗುರಿ ಸಹಕಾರಿ ಸಂಸ್ಥೆಗಳ ಗುರಿಯಾಗಬೇಕು
     ಕಾಸರಗೋಡು: ಆಥರ್ಿಕವಾಗಿ ಹಿಂದುಳಿದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಕೆಲಸ ಸಹಕಾರಿ ಸಂಸ್ಥೆಗಳ ಮೂಲಕ ಆಗಬೇಕೆಂದು ಜೋಯಿಂಟ್ ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿಯ ರಹೀಂ ಅಭಿಪ್ರಾಯಪಟ್ಟರು.
   ಕಾಸರಗೋಡು ಶ್ರೀ ನಾರಾಯಣ ಗುರು ವನಿತಾ ಸವರ್ೀಸ್ ಕೋ-ಆಪರೇಟಿವ್ ಸೊಸೈಟಿಯ ಸ್ಥಿರ ಠೇವಣಿ ಹಾಗೂ ಸಾಲ ವಿತರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
   ಯಾವುದೇ ಸಹಕಾರಿ ಸಂಸ್ಥೆಗಳು ಠೇವಣಿ ಸಂಗ್ರಹಿಸುವುದೇ ಗುರಿಯಾಗಿರಿಸದೆ ತಳಮಟ್ಟದಲ್ಲಿರುವ ಮಹಿಳೆಯರಿಗೆ ಸ್ವೋದ್ಯೋಗ ಆರಂಭಿಸಲು ಸಾಲ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಜವಾಬ್ದಾರಿ ಸೊಸೈಟಿಯ ಆಡಳಿತ ಮಂಡಳಿಗಿದೆ ಎಂದರು.
   ಸ್ಥಿರ ಠೇವಣಿ ಪತ್ರವನ್ನು ಚಂದ್ರಕಲಾ ಹಾಗೂ ವಸಂತಿ ಅವರಿಗೆ ರಹೀಂ ಅವರು ವಿತರಿಸಿದರು. ಅಸಿಸ್ಟೆಂಟ್ ರಿಜಿಸ್ಟ್ರಾರ್ ಜಯಚಂದ್ರನ್ ಸಾಲ ಪತ್ರವನ್ನು ನಳಿನಿ ಅವರಿಗೆ ವಿತರಿಸಿದರು.
   ಯೂನಿಟ್ ಇನ್ಸ್ಪೆಕ್ಟರ್ ಬೈಜು, ನಾರಾಯಣ ಚೆನ್ನಿಕರೆ, ಕೆ.ಕಮಲಾಕ್ಷ ಸುವರ್ಣ, ಶಿವ ಕೆ, ಚಂದ್ರಶೇಖರ ಚಿಪ್ಲುಕೋಟೆ ಮೊದಲಾದವರು ಶುಭಹಾರೈಸಿದರು. ಸರೋಜಿನಿ ಕೆ. ಅಧ್ಯಕ್ಷತೆ ವಹಿಸಿದರು. ಭಾಸ್ಕರ ಕೆ. ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries